ಗದಗ:- ಪ್ರಧಾನಿ ನರೇಂದ್ರ ಮೋದಿ ಅವ್ರ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಯೋಜನೆ ಗದಗ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳಹಿಡಿದಿದೆ.
IPL 2025: RCB ತಂಡದಿಂದ ಈ ಸ್ಟಾರ್ ಪ್ಲೇಯರ್ ಔಟ್: ಖರೀದಿಸಲು ಮುಂದಾಗಿದೆ ಮೂರು ತಂಡಗಳು!
ರಾಜ್ಯದ ಪ್ರತಿಯೊಂದು ಮನೆಗೆ ಕುಡಿಯವ ನೀರು ಸಿಗಲಿ ಅಂತ ಕೇಂದ್ರ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿದೆ. ಆದ್ರೆ, ಕಾಮಗಾರಿ ಮುಗಿದು ಮೂರ್ನಾಲ್ಕು ವರ್ಷಗಳು ಕಳೆದ್ರೂ ಬಹುತೇಕ ಗ್ರಾಮಗಳ ಪೈಪ್ ನಲ್ಲಿ ಇನ್ನೂ ಹನಿ ನೀರು ಬರ್ತಾಯಿಲ್ಲ.
ತಾಲೂಕಿನ ಚಿಕ್ಕಹಂದಿಗೋಳ, ಹುಯಿಲಗೋಳ ಗ್ರಾಮ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಮುಗಿದು ಹಲವು ವರ್ಷಗಳು ಕಳೆದಿವೆ. ಆದರೆ ನಲ್ಲಿಯಲ್ಲಿ ನೀರು ಬರುವ ಮುನ್ನವೇ ಪೈಪ್ ಗಳು ತುಕ್ಕು ಹಿಡಿದು ಯೋಜನೆ ಹಳ್ಳ ಹಿಡಿದು ಹೋಗಿವೆ. ಇನ್ನೂ ಕೆಲ ಗ್ರಾಮಗಳಲ್ಲಿ ಅರ್ಧಮರ್ಧ ಪೈಪುಗಳ ಹಾಕಿ ಗುತ್ತಿಗೆದಾರರು ಎಸ್ಕೇಪ ಆಗಿದ್ದಾರೆ. ಪ್ರತಿ ಗ್ರಾಮಗಳಲ್ಲಿ ಮನೆ ಮನೆಗೆ ನೀರು ಕೊಡುವ ಯೋಜನೆ ಇದಾಗಿದೆ. ಅಷ್ಟೇ ಅಲ್ಲ ಪೈಪ್ ಹಾಕಲು ಇಡೀ ಗ್ರಾಮದಲ್ಲಿ ರಸ್ತೆ ಅಗೇದು ಹಾಳು ಮಾಡಿದ್ದಾರೆ..
ರಸ್ತೆ ರಿಪೇರಿ ಮಾಡದೇ ಹೋಗಿದ್ದಾರೆ ಅಂತ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ. ನೀರು ಇಲ್ಲ. ಒಳ್ಳೆಯ ರಸ್ತೆಗಳು ಹಾಳಾಗಿ ನಿತ್ಯವೂ ಗ್ರಾಮಸ್ಥರು ನರಕಯಾತನೆ ಅನುಭವಿಸುವಂತಾಗಿದೆ. ಚಿಕ್ಕಹಂದಿಗೋಳ, ಹುಯಿಲಗೋಳ ಗ್ರಾಮಗಳು ನರಗುಂದ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ಜಲ ಜೀವನ ಮಷಿನ್ ಯೋಜನೆ ಕಾಮಗಾರಿ ಗದಗ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ. ಆದ್ರೆ, ಕಳಪೆ ಹಾಗೂ ಬೇಕಾಬಿಟ್ಟಿ ಗುತ್ತಿಗೆದಾರರು ಕಾಗಮಗಾರಿ ಮಾಡಿದ್ರಿಂದ ಜಿಲ್ಲೆಯಲ್ಲಿ ಜೆಜೆಎಂ ಯೋಜನೆ ಬಹುತೇಕ ಗ್ರಾಮಗಳಲ್ಲಿ ಹಳ್ಳ ಹಿಡಿದಿದೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಕನಸಿನ ಯೋಜನೆ ಗುತ್ತಿಗೆದಾರರು, ಅಧಿಕಾರಿಗಳು ಸೇರಿ ಹಳ್ಳಹಿಡಿಸಿದ್ದಾರೆ. ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ತನಿಖೆ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.
ಯೋಜನೆ ಹದಗೆಟ್ರು ಗುತ್ತಿಗೆದಾರರಿಗೆ ಅಧಿಕಾರಿಗಳು ಈಗಾಗಲೇ ಎಲ್ಲ ಹಣ ಪಾವತಿ ಮಾಡಿದ್ದಾರೆ. ಗದಗ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಿತ್ಯವೂ ಜೆಜೆಎಂ ಯೋಜನೆ ವಿರುದ್ಧ ದೂರು ಬಂದ್ರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರವೂ ಕೂಡ ಮೌನವಾಗಿತ್ತು. ಪೈಪ್ ನೆಲದಲ್ಲಿ ಕನಿಷ್ಠ ಮೂರು ಫೂಟ್ ಅಗೆದು ಹಾಕಬೇಕು ಅಂತ ಯೋಜನೆಯಲ್ಲಿದೆ. ಆದ್ರೆ, ಗುತ್ತಿಗೆದಾರರು 1 ಫೂಟ್ ಒಂದೂವರೆ ಫೂಟ್ ಅಗೆದು ಬೇಕಾಬಿಟ್ಟಿ ಪೈಪ್ ಹಾಕಿ ಕಾಮಗಾರಿ ಮುಗಿಸಿದ್ದಾರಂತೆ. ಪೈಪ್ ಗಳು ಸಂಪೂರ್ಣ ಕಳಪೆ ಹಾಕಿದ್ದರಿಂದ ಮುರಿದು ಹೋಗುತ್ತಿವೆ. ಇನ್ನೂ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಬಿಜೆಪಿ ಶಾಸಕ ಸಿ ಸಿ ಪಾಟೀಲರು ಕ್ಯಾರೇ ಎನ್ನುತ್ತಿಲ್ಲ ಅಂತ ಜನ್ರು ಕಿಡಿಕಾರಿದ್ದಾರೆ.