ಧಾರವಾಡ; ಪಂಚಸೇನಾ ರಾಜ್ಯ ಪದಾಧಿಕಾರಿಗಳಿಂದ ಧಾರವಾಡದಲ್ಲಿ ಹಾಲು ಕುಡಿಯುವ ಹಬ್ಬದ ಸಪ್ತಾಹ 2024.
ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲಾಗಲಿ ಎಂದು ಕೂಡಲಸಂಗಮ ಮಠದ ಮೊದಲ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಕಿವುಡು ಮತ್ತು ಮೂಕ ಮಕ್ಕಳ ಹೊನ್ನಮ್ಮ ಶಿಕ್ಷಣ ಸಂಸ್ಥೆ ಸರಸ್ವತಪುರ, ಟೋಲನಾಕಾ, ಧಾರವಾಡದಲ್ಲಿ ನಾಗರ ಪಂಚಮಿ ನಿಮಿತ್ಯ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಜರುಗಿದ ನಾಗ ಪಂಚಮಿಯ ಹಬ್ಬವನ್ನು ಕಿವುಡ ಮತ್ತು ಮಂದ ಮಕ್ಕಳಿಗೆ ಹಾಲು ಕುಡಿಸುವುದರ ಮುಖಾಂತರ ನಾಗ ಪಂಚಮಿಯನ್ನು ಆಚರಿಸಿ ನಂತರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸ್ವಾಮೀಜಿಗಳು ಕಲ್ಲು ನಾಗರ ಹಾವಿಗೆ ಹಾಲು ಹಾಕುವುದು ವ್ಯರ್ಥ ಅದು ಮಣ್ಣು ಪಾಲು ಕಲ್ಲು ಪಾಲು ಆಗಿ ಹೋಗುವುದಕ್ಕಿಂತ ಮಕ್ಕಳಿಗೆ ಹಾಲನ್ನ ಕುಡಿಸಿದರೆ ಪೌಷ್ಟಿಕವಾಗುತ್ತದೆ. ಎಲ್ಲಾ ಪ್ರಾಣಿಗಳ ಹಾಗೆ ಮೊಟ್ಟೆಯಿಂದ ಹೊರಬಂದ ಪಕ್ಷಿ ಅಥವಾ ಪ್ರಾಣಿಯಾಗಲಿ ಯಾವುದು ಹಾಲನ್ನ ಕುಡಿಯುವುದಿಲ್ಲ ಅಂತಹ ಪಕ್ಷಿ ಅಥವಾ ಪ್ರಾಣಿಗಳಿಗೆ ನೀವು ಹಾಲು ಹಾಕುವುದರಿಂದ ವ್ಯರ್ಥವಾಗುತ್ತದೆ.
ಅದೇ ಹಾಲನ್ನ ಮಕ್ಕಳು ಕುಡಿದರೆ ಆರೋಗ್ಯವಾಗಿ ಇರುತ್ತಾರೆ ಹೀಗಾಗಿ ಎಲ್ಲಾ ಹಬ್ಬದ ಹಿಂದೆ ಒಂದೊಂದು ವಿಶೇಷತೆ ಇದೆ ಅದನ್ನು ಅಚ್ಚುಕಟ್ಟಾಗಿ ಜನರಿಗೆ ಉಪಯೋಗವಾಗುವ ಹಾಗೆ ಆಚರಿಸುವುದು ಹಬ್ಬ ಎಂದು ದೇವರು ಮೆಚ್ಚುತ್ತಾನೆ ಎಂದು ಹಬ್ಬಗಳು ವಿವರವನ್ನು ತಿಳಿಸಿದರು.