ಉತ್ತರ ಪ್ರದೇಶ:- ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಆಘಾತಕಾರಿ ಘಟನೆ ಜರುಗಿದೆ. ಮಾಂಸಾಹಾರ ಅಡುಗೆ ಮಾಡಲು ಹೇಳಿದ ಪತಿಯನ್ನು ಮಹಿಳೆಯೊಬ್ಬಳು ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ.
ಸಾಲು-ಸಾಲು ಹಬ್ಬಕ್ಕೆ ಸೇಲ್ ಆಗಬೇಕಿದ್ದ ನಕಲಿ ಬ್ರಾಂಡ್ ನ ಲಕ್ಷಾಂತರ ಮೌಲ್ಯ ಬಟ್ಟೆ ಸೀಜ್!
ಆರೋಪಿ ಮಹಿಳೆ ತನ್ನ ಮೃತ ಪತಿಯ ಶವದ ಮೇಲೆ ಕುಳಿತು ಆತನ ತಲೆಯಿಂದ ಮಾಂಸ ತೆಗೆಯುತ್ತಿರುವುದನ್ನು ತೋರಿಸುತ್ತದೆ.
ಗಂಡನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸುತ್ತಿದ್ದಂತೆ ಕುಪಿತಳಾದ ಪತ್ನಿ ‘ಇವತ್ತು ನಿನ್ನ ತಲೆ ಒಡೆದು ಹಾಕುತ್ತೇನೆ’ ಎಂದು ಕೂಗಾಡುತ್ತಲೇ ಇದ್ದಳು. ಮಧ್ಯೆ ಸಲ್ಪ ಅತ್ತ ಅವಳು ಬಳಿಕ ಪೊಲೀಸರ ಮುಂದೆಯೇ ಸತ್ತ ಗಂಡನ ಮೆದುಳಿನಿಂದ ಮಾಂಸವನ್ನು ಹೊರ ತೆಗೆಯುವುದನ್ನು ಮುಂದುವರಿಸಿದ್ದಾಳೆ.
ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಈ ಭೀಕರ ಕೃತ್ಯದ ಹಿಂದೆ ಪತಿ ಮಾಂಸಾಹಾರಿ ಆಹಾರವನ್ನು ತಯಾರಿಸಲು ಕೇಳಿದ್ದೇ ಕಾರಣ ಎನ್ನಲಾಗಿದೆ.
ಸತ್ಯಪಾಲ್ (40) ಮೃತ ವ್ಯಕ್ತಿ. ಗಾಯತ್ರಿ ದೇವಿ (39) ಆರೋಪಿ ಮಹಿಳೆ. ಇವರು ಇಬ್ಬರು ಮಕ್ಕಳೊಂದಿಗೆ ಹತೌಡಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಸತ್ಯಪಾಲ್ ಕ್ರೀಡಾಂಗಣದಲ್ಲಿ ಖಾಸಗಿ ಕೆಲಸದಲ್ಲಿ ಕೆಲಸ ಮಾಡುತ್ತಿದ್ದ. ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದ ಇವರ ಮಗಳು ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಮಗ 12ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಗಾಯತ್ರಿ ಸಸ್ಯಾಹಾರಿಯಾಗಿದ್ದು, ಸತ್ಯಪಾಲ್ ಮಾಂಸಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಿದ್ದ. ಈ ವಿಚಾರದಲ್ಲಿ ಆಗಾಗ್ಗೆ ಮನೆಯಲ್ಲಿ ಜಗಳವಾಗುತ್ತಿತ್ತು. ಕೆಲವೊಮ್ಮೆ ಸತ್ಯಪಾಲ್ ಗಾಯತ್ರಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ. ಗುರುವಾರವೂ ಸತ್ಯಪಾಲ್ ಮತ್ತೆ ಮಾಂಸಾಹಾರಕ್ಕೆ ಬೇಡಿಕೆ ಇಟ್ಟಿದ್ದ. ಗಾಯತ್ರಿ ನಿರಾಕರಿಸಿದಾಗ ಆತ ಕೋಪಗೊಂಡಿದ್ದು, ಅವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಈ ಈ ಕೃತ್ಯ ನಡೆದು ಹೋಗಿದೆ.