ವಿಜಯಪುರ:- ಈ ನಗರದ ಹೃದಯ ಭಾಗದಲ್ಲಿ ಎದೆ ಜಲ್ಲೆನಿಸು ಅಪಘಾತವೊಂದು ನಡೆದಿದೆ. ವಕೀಲನ ಮೇಲೆ ಹರಿದ ಕಾರು, ದೇಹವನ್ನು 2 ಕಿ.ಮೀ ವರೆಗು ಎಳೆದೊಯ್ಯುವ ಮೂಲಕ ಭೀಕರತೆಗೆ ಸಾಕ್ಷಿಯಾಗಿದೆ. ಇನ್ನೊಂದೆಡೆ ಇದು ಕೇವಲ ಆಕ್ಸಿಡೆಂಟಾ? ಇಲ್ಲಾ ಪ್ಲಾನ್ಡ್ ಮರ್ಡರ್…? ಅನ್ನೋ ಅನುಮಾನಗಳು ಶುರುವಾಗಿವೆ. ಈ ರೀತಿ ಅನುಮಾನ ಕಾಡೋದಕ್ಕು ಕಾರಣಗಳಿವೆ. ಘಟನೆ ನಡೆದ ದಿನ, ಘಟನೆ ನಡೆದ ರೀತಿ, ಘಟನೆ ಬಳಿಕ ಕಾರ್ ಡ್ರೈವರ್ ನಡೆದುಕೊಂಡ ರೀತಿಗಳು ಭಾರೀ ಅನುಮಾನಗಳಿಗೆ ಕಾರಣವಾಗಿದೆ. ಹಾಗಾದರೆ ಈ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…
Weight Loss: ಖರ್ಚಿಲ್ಲದೇ, ದುಬಾರಿ ವಸ್ತುಗಳನ್ನ ಬಳಸದೇ ನೈಸರ್ಗಿಕವಾಗಿ ತೂಕ ಇಳಿಸಿ!
ಹೌದು, ನಿನ್ನೆ ಸಾಯಂಕಾಲ ಸರಿಯಾಗಿ 6 ಗಂಟೆಗೆ ವಿಜಯಪುರ ನಗರದ ಬಸವನಗರ ಕ್ರಾಸ್ ಬಳಿ ವಕೀಲ ರವಿ ಮೇಲಿನಕೇರಿ (37) ಮೇಲೆ ಇನ್ನೋವಾ ಕಾರು ಹರಿದಿದೆ. ಕಾರು ಹರಿದ ರಭಸಕ್ಕೆ ವಕೀಲ ರವಿ ಕಾಲುಗಳು ಬೊನಟ್ ಕೆಳಗೆ ಸಿಕ್ಕಿ ಹಾಕಿಕೊಂಡಿವೆ. ಆದ್ರೆ ಇದನ್ನ ಗಮನಿಸದೆ ಇನ್ನೊವಾ ಕಾರು ಚಾಲಕ 2 ಕಿ.ಮೀಟರ್ ವರೆಗು ಎಳೆದೋಯ್ದಿದ್ದಾನೆ. ಬಳಿಕ ಜಿಲ್ಲಾ ಪಂಚಾಯತ್ ರಸ್ತೆಯ ಬಳಿ ಮೃತದೇಹ ನೆಲಕ್ಕೆ ಬಿದ್ದಿದೆ. ಬಳಿಕ ತರಾತುರಿಯಲ್ಲಿ ಇನ್ನೊವಾ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಇನ್ನೂ ವಕೀಲ ರವಿ ಮೇಲಿನಕೇರಿ ಸಾವು ಬರೀ ಅಪಘಾತವಾ ಅಥವಾ ಪ್ಲಾನ್ಡ್ ಮರ್ಡರ್ ರಾ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ. ಈ ಅನುಮಾನ ಬರೋದಕ್ಕು ಸಾಕಷ್ಟು ಕಾರಣಗಳಿವೆ. ಘಟನೆ ನಡೆದ ದಿನ, ಘಟನೆ ನಡೆದ ಸ್ಥಳ, ಘಟನೆಯಲ್ಲಿ ಇನ್ನೋವಾ ಕಾರ್ ಚಾಲಕನ ವರ್ತನೆ ಹಾಗೂ ಘಟನೆ ನಡೆದ ರೀತಿ ಅನುಮಾನಗಳನ್ನ ಸೃಷ್ಟಿಸಿದೆ. ಮೇಲ್ನೋಟಕ್ಕೆ ಇದೊಂದು ಆಕಸ್ಮಿಕ ಅಪಘಾತ ಎಂದು ಕಂಡರೂ ಕೆಲ ಸಂಗತಿಗಳು ಇದೊಂದು ಪೂರ್ವನಿಯೋಜಿತ ಕೊಲೆ ಎನ್ನುತ್ತಿವೆ. ಇನ್ನು ರವಿ ಮೇಲಿನಕೇರಿ ಈ ಹಿಂದೆ ಭೀಮಾತೀರದ ಕುಖ್ಯಾತಿಗೆ ಪಾತ್ರರಾದ ಬಾಗಪ್ಪ ಹರಿಜನ್ ಗೆ ಭಾರಿ ಪರಿಚಯಸ್ತನಾಗಿದ್ದ, ಕೆಲವರು ಹೇಳುವ ಪ್ರಕಾರ ಬಾಗಪ್ಪ ಹರಿಜನ್ ಗೆ ರವಿ ದೂರದ ಸಂಬಂಧಿಯು ಆಗಬೇಕಂತೆ. ಹೀಗಾಗಿ ಕೆಲ ಅನುಮಾನಗಳು ಅಪಘಾತ ಪ್ರಕರಣದ ಸುತ್ತ ಸುಳಿದಾಡುತ್ತಿವೆ. ಇನ್ನೂ ಘಟನೆ ಖಂಡಿಸಿ ವಕೀಲರು ಸಹಿತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಇದೊಂದು ಮರ್ಡರ್ ಆಗಿದ್ದಾರೆ ನಾವು ಯಾರೂ ಕೂಡಾ ಆರೋಪಿ ಪರವಾಗಿ ವಕಾಲತ್ತು ವಹಿಸಲ್ಲ ಎಂದು ವಕೀಲರು ನಿರ್ಣಯ ಮಾಡಿದ್ದಾರೆ.
ಇನ್ನೂ ಘಟನೆ ನಡೆದ ದಿನ, ದಿನಾಂಕ ಅಪಘಾತದ ಬಗ್ಗೆ ಅನುಮಾನಗಳನ್ನ ಹುಟ್ಟಿಸುತ್ತಿದೆ. ಯಾಕಂದ್ರೆ ರವಿ ಅಪಘಾತದ ದಿನವೇ 2017 ಆಗಷ್ಟ 8 ರಂದು ಬಾಗಪ್ಪ ಹರಿಜನ್ ಮೇಲೆ ವಿಜಯಪುರ ನಗರದ ಕೋರ್ಟ್ ಆವರಣದಲ್ಲೇ ಗುಂಡಿನ ದಾಳಿ ನಡೆದಿತ್ತು. ಅದೇ ದಿನಾಂಕ ಅಂದ್ರೆ ನಿನ್ನೆ ಆಗಷ್ಟ 8 ರಂದು ಬಾಗಪ್ಪ ಖಾಸಾ ವ್ಯಕ್ತಿಯಾಗಿದ್ದ ರವಿ ಮೇಲಿನಕೆರಿ ಅಪಘಾತ ರೂಪದಲ್ಲಿ ಸಾವಿಗೀಡಾಗಿರೋದು ಅನುಮಾನ ಸೃಷ್ಟಿ ಮಾಡಿದೆ. ಇನ್ನೂ ಇನೋವಾ ಕಾರಿಗೆ ನಂಬರ್ ಪ್ಲೇಟ್ ಗಳೇ ಇಲ್ಲಾ ಎನ್ನಲಾಗ್ತಿದೆ. ನಂಬರ್ ಪ್ಲೇಟ್ ಇಲ್ಲದೆ ಉದ್ದೇಶಪೂರ್ವಕವಾಗಿ ಕಾರು ಹರಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಇದು ಸಹ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇನ್ನೂ ಮಾಮೂಲಿ ಅಪಘಾತಗಳಾದಾಗ ವಾಹನಗಳ ಅಡಿಯಲ್ಲಿ ಮನುಷ್ಯ ಸಿಕ್ಕರೆ ವಾಹನಗಳನ್ನ ಸ್ಥಳದಲ್ಲೇ ನಿಲ್ಲಿಸ್ತಾರೆ ಅಥವಾ ವಾಹನ ಅಲ್ಲೆ ಬಿಟ್ಟು ಪರಾರಿಯಾದ ಉದಾಹರಣೆಗಳು ಸಹ ಇವೆ. ಆದ್ರೆ ಈ ಪ್ರಕರಣದಲ್ಲಿ ಮಾತ್ರ ಕಾರ್ ಡಿಕ್ಕಿ ಮಾಡಿದ ಆಸಾಮಿ ಬಾಡಿಯನ್ನ 2 ಕಿಲೋ ಮೀಟರ್ ಎಳೆದೊಯ್ದಿದ್ದಲ್ಲದೆ ವಾಹನ ಸಮೇತವಾಗಿಯೇ ಪರಾರಿಯಾಗಿದ್ದಾನೆ..
ಅಪಘಾತ ಮಾಡಿ ಜೀವ ಬಲಿಪಡೆದು ಪರಾರಿಯಾಗಿರೋ ಕಾರ್ ಗಾಗಿ ಈಗ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಕಾರ್ ಪತ್ತೆಯಾದ್ರೆ ಪೊಲೀಸರು ಅರ್ಧ ಇನ್ವಷ್ಟಿಗೇಶನ್ ಮುಗಿಸಿದ ಹಾಗೆ. ಅಪಘಾತ ಮಾಡಿ ಪರಾರಿಯಾಗಿರೋ ಚಾಲಕ ಹಾಗೂ ಕಾರ್ ಗಾಗಿ ಪೊಲೀಸರು ಬೆನ್ನು ಬಿದ್ದಿದ್ದಾರೆ. ಈ ಎರಡು ಕಿ.ಮೀ ಉದ್ದಕ್ಕೂ ಇರುವ ಪ್ರದೇಶಗಳಲ್ಲಿ ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಜೊತೆಗೆ ಕಾರ್ ಯಾವಕಡೆಗೆ ಹೋಯ್ತು ಏನು ಎನ್ನುವ ಬಗ್ಗೆಯೂ ಮಾಹಿತಿಗಳನ್ನ ಪಡೆಯುತ್ತಿದ್ದಾರೆ. ಈ ಪ್ರಕರಣದಿಂದಾಗಿ ಗುಮ್ಮಟ ನಗರಿ ವಿಜಯಪುರ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು ಆದಷ್ಟು ಬೇಗಾ ಆರೋಪಿಗಳನ್ನು ಬಂಧಿಸುವ ಮೂಲಕ ಜನರಲ್ಲಿ ಇರುವ ಆತಂಕವನ್ನು ಪೋಲಿಸರು ದೂರ ಮಾಡಬೇಕಿದೆ…