ಬೆಂಗಳೂರು:-– ದೋಸ್ತಿ ನಾಯಕರ ವಿರುದ್ಧ ನಾಳೆ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಲು ಸಜ್ಜಾಗಿದೆ. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ,ಬಿಜೆಪಿ-ಜೆಡಿಎಸ್ ನಾಯಕರ ಕಾಲದಲ್ಲಿ ಆದಂತಹ ದಾಖಲೆ ಗಳನ್ನ ಬಿಡುಗಡೆ ಮಾಡಲು ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ.
ಅಹಿಂದ ನಾಯಕರನ್ನ ಒಗ್ಗೂಡಿಸಲು, ಸದಾ ತಮ್ಮ ವಿರುದ್ಧ ಬೆಂಕಿಯುಗಳುತ್ತಿದ್ದ ಬಿ.ಕೆ ಹರಿಪ್ರಸಾದ್ ಜೊತೆ ಸಿದ್ದರಾಮಯ್ಯ ಸ್ನೇಹದ ಹಸ್ತ ಚಾಚಿದ್ದಾರೆ.
ಯೆಸ್,ಮುಡಾ ಪ್ರಕರಣ ವಿರುದ್ಧ ಮೈಸೂರು ಚಲೋ ನಡೆಸುತ್ತಿರುವ ದೋಸ್ತಿ ನಾಯಕರ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್ ನೀಡುತ್ತಿದೆ.ದೋಸ್ತಿ ನಾಯಕರ ಪಾದಯಾತ್ರೆ ಸಾಗುವ ದಾರಿಯಲ್ಲೇ ಒಂದು ದಿನ ಮುನ್ನ ಜನಾಂದೋಲನ ಸಮಾವೇಶ ನಡೆಸಿ,ಬಿಜೆಪಿ-ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಟಕ್ಕರ್ ನೀಡುತ್ತಿದೆ.
ಶನಿವಾರ ದೋಸ್ತಿ ನಾಯಕರ ಪಾದಯಾತ್ರೆ ಅಂತ್ಯವಾಗುತ್ತಿರುವ ಹಿನ್ನಲೆಯಲ್ಲಿ,ನಾಳೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಲು ವೇದಿಕೆ ಸಜ್ಜಾಗಿದೆ.ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್ ಕಾಲದಲ್ಲಿ ಆದ ಅಕ್ರಮಗಳ ವಿರುದ್ಧ ದಾಖಲೆ ಬಿಡುಗಡೆ ಮಾಡಲು ಸಿಎಂ ಸಿದ್ದರಾಮಯ್ಯ ನಿರ್ಧಾರಿಸಿದ್ದಾರೆ.ಈ ಮೂಲಕ ದೋಸ್ತಿ ನಾಯಕರ ಪಾದಯಾತ್ತೆಗೆ ತಿರುಗೇಟು ಕೊಡಲು ಕಾಂಗ್ರೆಸ್ ಮುಂದಾಗಿದೆ.
ಇನ್ನು ತಮ್ಮ ವಿರುದ್ಧ ದೋಸ್ತಿ ನಾಯಕರು ಮಾಡುತ್ತಿರುವ ಪಾದಯಾತ್ರೆಗೆ ಸಿಎಂ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ.ಈ ಹಿನ್ನಲೆಯಲ್ಲಿ ನಾಳೆ ಮೈಸೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶ ಜವಾಬ್ದಾರಿಯನ್ನ ಖುದ್ದು ಸಿಎಂ ಸಿದ್ದರಾಮಯ್ಯ ವಹಿಸಿಕೊಂಡಿದ್ದಾರೆ.
ದೇವರಾಜು ಅರಸುರಂತೆ,ನನ್ನನ್ನೂ ಕೆಳಗೆ ಇಳಿಸುವ ಷಡ್ರಂತ್ಯ ನಡೆಸುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಸಮಾವೇಶಕ್ಕೆ ಬನ್ನಿ ಎಂದು ತಮ್ಮ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಸಮಾವೇಶದಲ್ಲೇ ದೋಸ್ತಿ ನಾಯಕರ ಎಲ್ಲ ಆರೋಪಗಳಿಗೆ ತಿರುಗೇಟು ಕೊಡಲು ಸಿದ್ದರಾಮಯ್ಯ ನಿರ್ಧಾರಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಸಂಪುಟ ಸೇರುವಲ್ಲಿ ವಿಫಲವಾದ ಬಳಿಕ ಬಿ.ಕೆ.ಹರಿಪ್ರಸಾದ್,ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ರು.ಸದಾ ಸಿದ್ದರಾಮಯ್ಯ ವಿರುದ್ಧ ಒಂದಲಾ ಒಂದು ವಿಚಾರಕ್ಕೆ ಬೆಂಕಿಯುಗಳುತ್ತಿದ್ರು. ಆದ್ರೆ ,ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿ.ಕೆ.ಹರಿಪ್ರಸಾದ್ ಜೊತೆ ಸಿಎಂ ಸಿದ್ದರಾಮಯ್ಯ ಸ್ನೇಹದ ಹಸ್ತ ಚಾಚಿದ್ದಾರೆ. ತಮ್ಮ ಖುರ್ಚಿ ಭದ್ರಪಡಿಸಿಕೊಳ್ಳಲು ಅಹಿಂದ ನಾಯಕರ ಒಗ್ಗೂಡಿಸಲು ಸಿಎಂ ಮುಂದಾಗಿದ್ದಾರೆ.ಇದ್ರ ಭಾಗವಾಗಿಯೇ ಈಡಿಗ ಸಮುದಾಯ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಜೊತೆ ದ್ವೇಷ ಮರೆತು ಸಿದ್ದರಾಮಯ್ಯ ಸ್ನೇಹದ ಹಸ್ತ ಚಾಚಿದ್ದಾರೆ.ನಿನ್ನೆ ರಾತ್ರಿ ಇಬ್ಬರು ನಾಯಕರು ಭೇಟಿ ಮಾಡಿ ಹಳೇ ದ್ವೇಷ ಮರೆತಿದ್ದಾರೆ.ಅಲ್ದೇ ನಾಗೇಂದ್ರದಿಂದ ತೆರವಾದ ಸ್ಥಾನಕ್ಕೆ ನಿಮ್ಮನ್ನ ಪರಿಗಣನೆ ಮಾಡುವ ಭರವಸೆಯನ್ನ ಸಿಎಂ,ಬಿ ಕೆ ಹರಿಪ್ರಸಾದ್ ಗೆ ನೀಡಿದ್ದಾರೆ.ಅಲ್ದೇ ನಾಳೆ ನಡೆಯುವ ಜನಾಂದೋಲನ ಸಮಾವೇಶಕ್ಕೆ ಬನ್ನಿ ಎಂದು ಬಿ.ಕೆ.ಹರಿಪ್ರಸಾದ್ ಗೆ ಸಿಎಂ ಆಹ್ವಾನ ನೀಡಿದ್ದಾರೆ.
ಒಟ್ಟಾರೆ,ದೋಸ್ತಿ ನಾಯಕರ ಆರೋಪಗಳಿಗೆ ನಾಳೆ ಸಿಎಂ ಸಿದ್ದರಾಮಯ್ಯ ಜನಾಂದೋಲನ ಸಮಾವೇಶ ಮೂಲಕ ತಿರುಗೇಟು ಕೊಡಲು ವೇದಿಕೆ ಸಜ್ಜಾಗಿದೆ.