ಬೆಂಗಳೂರು: ಬೈಕ್ ನಲ್ಲಿ ಬರ್ತಿದ್ದ ನಟೋರಿಯಸ್ ಒಬ್ಬನನ್ನ ಪೊಲೀಸ್ ಕಾನ್ಸ್ಟೇಬಲ್ ಲೈವ್ ಆಕ್ಷನ್ ನಲ್ಲೆ ಲಾಕ್ ಮಾಡಿದ್ದಾರೆ. ಬೈಕ್ ನಲ್ಲಿ ಬರ್ತಿದ್ದಾಗ ಪೊಲೀಸ್ ಸಿಬ್ಬಂದಿಗೆ ಗುದ್ದಿ ಎಸ್ಕೇಪ್ ಆಗೋಕೆ ಪ್ರಯತ್ನಪಟ್ರು ಕಾನ್ಸ್ಟೇಬಲ್ ಮಾತ್ರ ಆರೋಪಿಯನ್ನ ಬಿಡದೆ ಹಿಡಿದಿದ್ದಾರೆ.
ವಯಸ್ಸಾದ ವೃದ್ಧೆಯರ ಮೈ ಮೇಲಿನ ಚಿನ್ನ ದೋಚ್ತಿದ್ದವನ ಹಿಡಿಯಲು ಪೊಲೀಸ್ ಕಾನ್ಸ್ಟೇಬಲ್ ಕಾದು ನಿಂತಿದ್ರು. ಈ ವೇಳೆ ಕಾನ್ಸ್ಟೇಬಲ್ ಗೆ ಗುದ್ದಿ ರಸ್ತೆಯಲ್ಲಿ ಎಳೆದೊಯ್ಯುವಾಗ ಸಂಚಾರಿ ಮಹಿಳಾ ಎಎಸ್ ಐ ಮತ್ತು ಸಾರ್ವಜನಿಕರು ಹಿಡಿದು ಆರೋಪಿಯನ್ನು ಥಳಿಸಿದ್ದಾರೆ.
ಕಳ್ಳನನ್ನ ಹಿಡಿಯುವ ಪೊಲೀಸ್ರ ಸಾಹಸವಂತೂ ಮೈ ಜುಮ್ ಎನಿಸುತ್ತೆ. ಮಂಜ @ ಹೊಟ್ಟೆ ಮಂಜ ಸಾರ್ವಜನಿಕರಿಂದ ಧರ್ಮದೇಟು ತಿಂದ ಕಳ್ಳ. ವಯಸ್ಸಾದ ವೃದ್ಧೆಯರಿಗೆ ಸರ್ಕಾರದ ಕಾರ್ಡ್ ಮಾಡಿಸಿಕೊಡೋದಾಗಿ ನಂಬಿಸ್ತಿದ್ದ ಹೊಟ್ಟೆ ಮಂಜ
ಒಬ್ಬರನ್ನೇ ಕರೆದೊಯ್ದು ಮೈ ಮೇಲಿನ ಬಂಗಾರ ದೋಚ್ತಿದ್ದ. ಕೊರಟಗೆರೆ ಪೊಲೀಸ್ರು ಹೊಟ್ಟೆ ಮಂಜನನ್ನ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ರು.
ಸದಾಶಿವನಗರ ಲಿಮಿಟ್ಸ್ ನಲ್ಲಿ ಆರೋಪಿ ಸಿಗ್ನಲ್ ಕ್ರಾಸ್ ಮಾಡುವಾಗ ಕ್ರೈಂ ಸಿಬ್ಬಂದಿ ಲಾಕ್ ಮಾಡಿದ್ರು.
ಈ ವೇಳೆ ತಪ್ಪಿಸಿಕೊಳ್ಳಲು ಸ್ಕೂಟರ್ ಚಲಾಯಿಸಿದ್ರು. ಆರೋಪಯನ್ನ ಬಿಡದ ಕ್ರೈಂ ಸಿಬ್ಬಂದಿಯನ್ನ ನೆಲದಲ್ಲಿ ಎಳೆದೊಯ್ದಿದ್ದಾನೆ. ಸಿಗ್ನಲ್ ನಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಮಹಿಳಾ ಎ ಎಸ್ ಐ ಮಾಯಮ್ಮ ಹಾಗು ಹೋಂ ಗಾರ್ಡ್ ನಿಂದ ಕಳ್ಳನನ್ನ ಹಿಡಿಯಲು ಸಹಾಯ ಮಾಡಿದ್ದಾರೆ. ಈ ವೇಳೆ ಮಹಿಳಾ ಎ ಎಸ್ ಐ ಮೇಲೆ ಹಲ್ಲೆ ನಡೆಸಿರೊ ಹೊಟ್ಟೆ ಮಂಜ ನನ್ನ ಬಿಡದೆ ಪೊಲೀಸ್ರು ಲಾಕ್ ಮಾಡಿದ್ದಾರೆ. ಪೊಲೀಸ್ರ ಮೇಲಿನ ಹಲ್ಲೆ ನೋಡಿದ್ದ ವಾಹನ ಸವಾರರಿಂದ ಹೊಟ್ಟೆ ಮಂಜನಿಗೆ ಧರ್ಮದೇಟು ನೀಡಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳನನ್ನ ಹಿಡಿಯುವ ಧೈರ್ಯ ಪ್ರದರ್ಸಿಸಿದ ಮಹಿಳಾ ಎ ಎಸ್ ಐ ಮಾಯಮ್ಮ ಹಾಗೂ ಹೋಂ ಗಾರ್ಡ್ ಗೆ ಪ್ರಶಂಸಿಸಿ ರಿವಾರ್ಡ್ ನೀಡಲು ಕಮೀಷನರ್ ಸಿದ್ಧತೆ ನಡೆಸಿದ್ದಾರೆ.