ಮಂಡ್ಯ :– ವಿ ಸಿ ನಾಲೆಯಲ್ಲಿ ಸಮಗ್ರವಾಗಿ ನೀರು ಹರಿಸಿ ಕೊನೆ ಭಾಗಕ್ಕೆ ನೀರು ತಲುಪಿಸಿ ಮತ್ತು ಕೆರೆಗಳಿಗೆ ನೀರು ತುಂಬಿಸಲು ಜರೂರು ಕ್ರಮ ವಹಿಸಲು ನೀರಾವರಿ ಇಲಾಖೆಯ ಮಂಡ್ಯ ಕಛೇರಿಯ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗೌಡ ಅವರು ತಿಳಿಸಿದರು.
ಮದ್ದೂರಿನ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು ಅಧೀಕ್ಷಕ ಇಂಜಿನಿಯರ್ ರಘುರಾಮನ್ ಮತ್ತು ಕಾರ್ಯಪಾಲಕ ಅಭಿಯಂತರ ನಂಜುಂಡಸ್ವಾಮಿಯವರನ್ನು ಮದ್ದೂರಿನ ಶಾಸಕರ ಕಛೇರಿಯಲ್ಲಿ ಸಭೆ ನಡೆಸಿ ವಿಸಿ ನಾಲೆ ಕೊನೆ ಪ್ರದೇಶಗಳಿಗೆ ಕೂಡಲೇ ನೀರು ಹರಿಸಲು ಕ್ರಮ ವಹಿಸಬೇಕು ಹಾಗೂ ಸಮಗ್ರವಾಗಿ ನೀರು ತಲುಪಿರುವುದನ್ನ ತಾವೇ ಖುದ್ದು ವೀಕ್ಷಿಸಿ ದೃಡಪಡಿಸಿಕೊಳ್ಳಬೇಕೆಂದು ಸೂಚಿಸಿದ್ದೇನೆ ಎಂದರು.
ವಿವಾಹವಾದ ಕೆಲವೇ ಗಂಟೆಯಲ್ಲಿ ಕಿತ್ತಾಡಿಕೊಂಡ ನವ ದಂಪತಿ: ವಧು ದುರಂತ ಸಾವು!
ಮದ್ದೂರು ಕೆರೆ, ಸೂಳೆಕೆರೆ ಸೇರಿದಂತೆ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಸಹ ಕ್ರಮಕೈಗೊಳ್ಳಲು ಸೂಚಿಸಿರುವುದಾಗಿ ಹೇಳಿದರು.
ಕಟ್ಟುಪದ್ದತಿ ಕೈ ಬಿಡಿಸಲು ಕ್ರಮ –
ಮುಂಗಾರು ಬೆಳೆಗೆ ಕಟ್ಟು ಪದ್ದತಿಯಲ್ಲಿ ನೀರು ಬಿಡುವ ಕ್ರಮ ಅವೈಜ್ಞಾನಿಕವಾದದ್ದು ಹದಿನೆಂಟು ದಿನ ನಾಲೆಗೆ ನೀರು ಹರಿಸಿ ಹನ್ನೆರಡು ದಿನ ನೀರು ನಿಲ್ಲಿಸಿದರೆ ಮುಂಗಾರು ಬೆಳೆ ತೆಗೆಯುವುದು ಅಸಾಧ್ಯ ಎಂಬ ಅಂಶವನ್ನು ಸಂಬಂದಿಸಿದ ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಿಗೆ ಮನದಟ್ಟು ಮಾಡಿಕೊಟ್ಟು ನಿರಂತರವಾಗಿ ಮುಂಗಾರು ಬೆಳೆಗೆ ನೀರು ಕೊಡಿಸಲು ಕ್ರಮವಹಿಸುವುದಾಗುವುದು. ಮತ್ತು ರೈತರು ನಿರಾತಂಕವಾಗಿ ಮುಂಗಾರು ಬೆಳೆ ಬೆಳೆಯಲು ಮುಂದಾಗಬೇಕೆಂದು ಶಾಸಕ ಉದಯ್ ತಿಳಿಸಿದರು.