ತುಮಕೂರು:- ವೃದ್ಧೆಯರಿಗೆ ಪಿಂಚಣಿ ಮಾಡಿಕೊಡುವ ಹೆಸರಲ್ಲಿ ವಂಚನೆ ಮಾಡಿದ್ದ ಹಾಗೂ 7 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಾಗಲಕೋಟೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಿಕ್ಷಕರಿಂದ ಪ್ರತಿಭಟನೆ!
ಸದಾಶಿವನಗರದ ಟ್ರಾಫಿಕ್ ಠಾಣೆ ಮುಂಭಾಗ ನಡೆದಿದೆ. ಜಿಲ್ಲೆಯ ಕೊರಟಗೆರೆ ಠಾಣೆ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯ ಅವರು ಮಂಜುನಾಥ ಅಲಿಯಾಸ್ ಹೊಟ್ಟೆ ಮಂಜನನ್ನು ಹಿಡಿದಿದ್ದಾರೆ. ದೊಡ್ಡಲಿಂಗಯ್ಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ವೃದ್ಧೆಯರಿಗೆ ಪಿಂಚಣಿ ಮಾಡಿಕೊಡುವ ಹೆಸರಲ್ಲಿ ಆರೋಪಿ ವಂಚಿಸಿದ್ದ. ಮೈಮೇಲೆ ಚಿನ್ನವಿದ್ರೆ ಪಿಂಚಣಿ ಮಾಡಿಕೊಡಲ್ಲ, ಚಿನ್ನ ಬಿಚ್ಚಿಕೊಡಿ ಅಂತಿದ್ದ. ಬಳಿಕ ಪಿಂಚಣಿ ಅರ್ಜಿ ತರುವ ನೆಪದಲ್ಲಿ ಚಿನ್ನದ ಸಮೇತ ಎಸ್ಕೇಪ್ ಆಗುತ್ತಿದ್ದ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 4, ಕೋಳಾಲ ಪೊಲೀಸ್ ಠಾಣೆಯಲ್ಲಿ 1, ಮಧುಗಿರಿ ಠಾಣೆ 1, ಹೆಬ್ಬೂರು ಠಾಣೆಯ 1 ಕೇಸ್ನಲ್ಲಿ ಆರೋಪಿ ಬೇಕಿದ್ದು, ಕೊರಟಗೆರೆ ಸಿಪಿಐ ಅನಿಲ್, ಪಿಎಸ್ಐ ಚೇತನ್ ನೇತೃತ್ವದಲ್ಲಿ ಬಂಧಿಸಲಾಗಿದೆ.
ಸತತ ಒಂದು ತಿಂಗಳು ಕಾರ್ಯಾಚರಣೆ ನಡೆಸಿದ ಕೊರಟಗೆರೆ ಠಾಣೆ ಪೊಲೀಸರ ತಂಡ ಇದೀಗ ಆರೋಪಿ ಬಂಧಿಸಲಾಗಿದೆ. ಕೊರಟಗೆರೆಯಿಂದ ಬೆಂಗಳೂರಿನವರೆಗೆ ಎಲ್ಲಾ ಸಿಸಿಟಿವಿ ಪರಿಶೀಲನೆ ಮಾಡಲಾಗಿದ್ದು, ಬೈಕ್ನಲ್ಲಿ ಸಿಗ್ನಲ್ ಬಳಿಗೆ ಆರೋಪಿ ಹೊಟ್ಟೆ ಮಂಜ ಬಂದಿದ್ದಾರೆ. ಈ ವೇಳೆ ಆರೋಪಿಯನ್ನು ದೊಡ್ಡಲಿಂಗಯ್ಯ ಹಿಡಿಯಲು ಮುಂದಾಗಿದ್ದು, ಬೈಕ್ನಲ್ಲಿ ಪರಾರಿಯಾಗಲು ಹೊಟ್ಟೆ ಮಂಜ ಯತ್ನಿಸಿದ್ದಾರೆ.
ಬೈಕ್ ಬಿಗಿಹಿಡಿದಿದ್ದ ದೊಡ್ಡಲಿಂಗಯ್ಯನನ್ನು ಎಳೆದೊಯಲ್ಲಾಗಿದೆ. ಸ್ವಲ್ಪ ದೂರ ಎಳೆದುಕೊಂಡೇ ಎಸ್ಕೇಪ್ ಆಗಲು ಆರೋಪಿ ಯತ್ನಿಸಿದ್ದು, ತನ್ನ ಪ್ರಾಣವನ್ನು ಲೆಕ್ಕಿಸದೆ ಪಟ್ಟುಬಿಡದೇ ಆರೋಪಿ ಕಾಲು ಬಿಗಿಯಾಗಿ ಹಿಡಿದು ಬೈಕ್ ನಿಲ್ಲಿಸಿದ್ದಾರೆ. ಸ್ಥಳದಲ್ಲಿದ್ದ ಟ್ರಾಫಿಕ್ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ಆರೋಪಿ ಸೆರೆಹಿಡಿಯಲಾಗಿದೆ. ಆರೋಪಿಯನ್ನ ಸೆರೆಹಿಡಿದ ಸಾಹಸ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.