ಬಾಗಲಕೋಟೆ :-ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ವಾರ್ಡ್ ೧೨ ರಲ್ಲಿ ಕಂಡುಬರುವ ದೃಶ್ಯ ಶ್ರೀ ಮಹಾವಿಷ್ಣು ದೇವಾಲಯಕ್ಕೆ ಸ್ಥಳ ಇಲ್ಲದೇ ಕಸದ ರಾಶಿಯಲ್ಲಿ ಮಲಗುವ ಪರಿಸ್ಥಿತಿ ಬಂದ ಒದಗಿದೆ.
ಕಳೆದ 17 ವರ್ಷಗಳ ಹಿಂದೆ ಬನಹಟ್ಟಿ ಸರ್ವ ನಂಬರ್ 241 ರಲ್ಲಿ 421 ಎಕರೆ ಅರಣ್ಯ ಪ್ರದೇಶದಲ್ಲಿ ಶ್ರೀ ಮಹಾವಿಷ್ಣು ದೇವರ ಮೋರತಿಯನು ಪ್ರತಿಷ್ಠಾಪನೆ ಮಾಡಲಾಯಿತು.
ಅರಣ್ಯ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆ ಜಂಟಿಯಾಗಿ ತೆರವು ಗೊಳಸಿದರು ಆದರಿಂದ ಕಸದ ರಾಶಿ ಯಲ್ಲಿ ಮಲಗುವ ಪರಿಸ್ಥಿತಿ ಬಂದ ಒದಗಿದೆ.
ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬನಹಟ್ಟಿಯ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ನೀಡಿ ಶ್ರೀ ಮಹಾವಿಷ್ಣು ಮೂರ್ತಿಯನ್ನು ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂದು ಭಕ್ತರು ಕೇಳಿದರು.
ಭಾರತ ದೇಶ ಸಂಸ್ಕೃತ ಮತ್ತು ದೇವರನ್ನ ಪೂಜಿಸುವ ದೇಶವಾಗಿದೆ
ಆದರೆ ಇಂದು ಪ್ರತಿಷ್ಠಾಪನೆ ಆಗಬೇಕಿದ್ದ ಶ್ರೀ ಮಹಾವಿಷ್ಣು ಜಾಗವಿಲ್ಲದೆ ಅನಾಥರಂತೆ ಬೀದಿಯಲ್ಲಿ ಬಿದ್ದಿದ್ದು ಭಕ್ತರಿಗೆ ಮನಸಿಗೆ ನೋವು ತಂದಿದೆ.
ರಾಜ್ಯ ಮತ್ತು ಕೇಂದ್ರ ಸರಕಾರ ಇತ್ತ ಕಡೆ ಗಮನ ಹರಿಸಿ ಶ್ರೀ ಮಹಾವಿಷ್ಣು ದೇವಾಲಯಕ್ಕೆ ಸ್ಥಳ ಸಿಗುತ್ತದೆ ಎಂದು ಕಾದು ನೋಡಬೇಕು.
ಅದೇ ಸಂದರ್ಭದಲ್ಲಿ ರಾಜಕುಮಾರ ಕೇಶವ ಕೋಪರ್ಡ, ಪ್ರಕಾಶ್ ಕೋಪರ್ಡ ಮಂಜುನಾಥ ತೇರದಾಳ,ಹನಂತರಾಯ ಸೊನಾರ ಗಜಾನಂದ ಗೋಬಚ್ಚಿ ಮಂಜುನಾಥ ಕೋಪರ್ಡ ಹಲವಾರು ಭಾಗಿಯಾಗಿದ್ದರು,
ಪ್ರಕಾಶ ಕುಂಬಾರ
ಬಾಗಲಕೋಟೆ