ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಗುಂಡಿಗಳೇ ಇಲ್ಲದ ರಸ್ತೆ ಮಾಡ್ತೀವಿ ಅನ್ನೋ ಡೈಲಾಗ್ ಗಳು ಕೇವಲ ಡೈಲಾಗ್ ಗಳಿಗೆ ಸೀಮಿತ ಮಾಡಿದೆ ಬಿಬಿಎಂಪಿ. ಯಾಕೆ ಹೀಗೆ ಹೇಳ್ತಿದ್ದೀವಿ ಅಂದ್ರ..? ಬಿಬಿಎಂಪಿ ಕೇಂದ್ರ ಕಚೇರಿಗೆ ಕೂಗಳತೆ ದೂರದ ಪ್ರಮುಖ ರಸ್ತೆ ಸಂಚಾರ ನರಕ ಯಾತ್ರೆ ಅನ್ನಿಸುತ್ತೆ. ಒಳಚರಂಡಿ ಕಾಮಗಾರಿಗಾಗಿ ಬಿಡಬ್ಲೂಎಸ್ಎಸ್ಬಿ ಗುಂಡಿ ತೆಗೆದು ಮುಚ್ಚಲೇ ಇಲ್ಲ ಯಾವ ರಸ್ತೆ..? ಅಲ್ಲಿನ ದುಸ್ಥಿತಿ ಇಲ್ಲಿದೆ ನೋಡಿ..
Breaking: ವರ್ಗಾವಣೆ ದಂಧೆಗೆ ಪಿಎಸ್ ಐ ಬಲಿ: ಶಾಸಕ, ಶಾಸಕನ ಪುತ್ರನ ಶವಯಾತ್ರೆ!
ಬಿಡಬ್ಲೂಎಸ್ಎಸ್ಬಿ ಒಳಚರಂಡಿ ಕಾಮಗಾರಿಗಾಗಿ ಗುಂಡಿ ತೆಗೆದು ಮುಚ್ಚದೆ ಬಿಟ್ಟ ಅಧಿಕಾರಿಗಳು.. ಮಳೆ ಬಂದ್ರೆ ಈ ದಾರಿಯಲ್ಲಿ ರೋಡ್ ಯಾವುದು ಗುಂಡಿ ಯಾವುದು ಅಂತ ಗೊತ್ತಾಗುವುದೆ ಇಲ್ಲ ಅಷ್ಟರಮಟ್ಟಿಗೆ ಅಧ್ವಾನವಾಗೋಗಿದೆ..ಹಾರ್ಟ್ ಆಫ್ ದಿ ಸಿಟಿಯ ಪ್ರಮುಖ ರಸ್ತೆ ಸುಬ್ಬಯ್ಯ ಸರ್ಕಲ್ ಟೂ ಡಬಲ್ ರೋಡ್ ಪೆಟ್ರೋಲ್ ಬಂಕ್ ಮತ್ತು ಡಬ್ಬಲ್ ರೋಡ್ ಸಂಪೂರ್ಣ ಗುಂಡಿ ಮಯವಾಗಿದೆ. ಈ ರಸ್ತೆಯಲ್ಲಿ ಸಂಚಾರ ಮಾಡೋದು ನರಕದ ಅನುಭವ.
ರಸ್ತೆ ಗುಂಡಿ ವಿಚಾರ ಈಗ ಬಿಬಿಎಂಪಿಗೆ ಕಾಮನ್ ಅಗ್ಬಿಟ್ಟಿದೆ ಅನ್ಸುತ್ತೆ. ಹೌದು ಸಂಜೆ ಮಳೆ ಬಂದ್ರೆ ಮಳೆಯಲ್ಲಿ ಪರದಾಡೋದು ಒಂದು ಕಡೆ ಆದ್ರೆ ಮಳೆಬಂದು ಹೋದಮೇಲೆ ಮತ್ತೊಂದು ಪರದಾಟ, ನಿನ್ನೆ ಸುರಿದ ಜೋರಾದ ಮಳೆಗೆ ಬೆಂಗಳೂರಿನ ಹಲವೆಡೆ ರಸ್ತೆಗುಂಡಿಗಳು ಯಮಗುಂಡಿಯಂತೆ ಮಾರ್ಪಟ್ಟಿವೆ.. ವಾಹನ ಸವರಾರು ಅಂತೂ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡ್ತಾ ಇದಾರೆ ಸ್ವಲ್ಪ ಯಾಮಾರಿದ್ರೂ ಯಮನ ಕೂಪಕ್ಕೆ ಬಲಿಯಾಗೋದು ಅಂತೂ ಪಕ್ಕಾ.
ಇನ್ನು ಈ ರಸ್ತೆಯಲ್ಲಿ ಸಂಚಾರ ಮಾಡೋ ವಾಹನ ಸವಾರರು ಕೇವಲ ಬೈಗುಳವಲ್ಲ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಇದೆ ದುಸ್ಥಿತಿಯಿದೆ. ಬಿಡಬ್ಲ್ಯುಎಸ್ಎಸ್ಬಿ ಯಾವುದೋ ಕಾಮಗಾರಿಗಾಗಿ ರಸ್ತೆಯುದ್ದಕ್ಕೂ ಅಗೆದು ಬೇಕಾಬಿಟ್ಟಿ ಮುಚ್ಚಿದ್ದಾರೆ. ಇದರಿಂದ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಸಿಎಂ ಸಾಹೇಬ್ರೇ ಹಾಗೂ ಬೆಂಗಳೂರು ಸಚಿವರಾದ ಡಿಸಿಎಂ ಡಿ.ಕೆ ಶಿವಕುಮಾರ್ ಸಾಹೇಬ್ರೇ ದಯಮಾಡಿ ಈ ರಸ್ತೆಯಲ್ಲಿ ಒಂದೇ ಒಂದು ರೌಡ್ ಹಾಕಿ,ಈ ನರಕದ ಅನುಭವ ಪಡೆಯಿರಿ ಆಗ ನಿಮ್ಗೆ ನಮ್ಮ ಸಂಕಷ್ಟ ಅರ್ಥವಾಗುತ್ತೆ. ಹೆಸರಿಗೆ ಹಾರ್ಟ್ ಆಫ್ ದಿ ಸಿಟಿ ರಸ್ತೆ ಎನ್ನಿಸಿಕೊಳ್ಳುವ ಡಬ್ಬಲ್ ರೋಡ್,ರಿಚ್ ಮಂಡ್ ಸರ್ಕಲ್ ಯಶವಂತಪುರ ರಸ್ತೆ, ಅದ್ರೇ ಇಲ್ಲಿ ಸಂಚಾರ ಮಾಡಿದ್ರೇ ಇದ್ಯಾವ ಸೀಮೆಯ ರಸ್ತೆ ಅನ್ನಿಸುತ್ತೆ. ಈ ರಸ್ತೆಯಲ್ಲಿ ಯಾವುದೇ ವಾಹನ ಸವಾರರಾಗ್ಲಿ ಸ್ವಲ್ಪ ಎಚ್ಚರ ತಪ್ಪಿದ್ರೂ ಗುಂಡಿ ಪಾಲಾಗೋದು ಗ್ಯಾರಂಟಿ ಕಣ್ರೀ..
ಒಟ್ನಲ್ಲಿ ಇರೋ ಕಿರಿದಾದ ರಸ್ತೆಯುದ್ಧಕ್ಕೂ ಮಧ್ಯದಲ್ಲಿ ಅಗೆದು ಬೇಕಾಬಿಟ್ಟಿ ಮುಚ್ಚಿರುವ ಜಲಮಂಡಳಿ..ಅದನ್ನ ಸರಿಪಡಿಸದೇ ಬಿಬಿಎಂಪಿ ನಿರ್ಲಕ್ಷ್ಯ ಮಾಡಿದ್ರೆ ಇವರನ್ನ ನಂಬಿರೋ ಜನರು ನರಕ ಅನುಭವಿಸುತ್ತಿದ್ದಾರೆ. ಇನ್ನಾದ್ರೂ ಎಚ್ಚೆತ್ತುಕೊಳ್ಳಿ. ಬುರುಡೆ ಮಾತು ಬಿಟ್ಟು ದಯವಿಟ್ಟು ಕೆಲಸ ಮಾಡಿ ಅಂತಿದ್ದಾರೆ ಸಾರ್ವಜನಿಕರು…