ಯಾದಗಿರಿ:- ನಗರ ಠಾಣೆಯಲ್ಲಿ ಪಿಎಸ್ಐ ಪರುಶುರಾಮ ಚೆಲವಾದಿ ವರ್ಗಾವಣೆ ದಂಧೆಗೆ ಬಲಿ ಆಗಿದ್ದು ಕೂಡಲೇ ಹಣಕ್ಕಾಗಿ ಬೇಡಿಕೆ ಇರಿಸಿ ಪಿಎಸ್ಐ ಬಲಿ ತೆಗೆದುಕೊಂಡ ಶಾಸಕ ಚೆನ್ನೆರಡ್ಡಿ ಪಾಟೀಲ್ ಹಾಗೂ ಅವರ ಪುತ್ರನನ್ನ ಬಂಧನ ಮಾಡಬೇಕು ಸಾವಿನಪ್ಪಿದ ಪಿಎಸ್ ಐ ಕುಟುಂಬಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ದಲಿತ ವಿಮೋಚನಾ ಸಮಿತಿ ಹುಬ್ಬಳ್ಳಿ ಶಹರ ಘಟಕ ವತಿಯಿಂದ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಲಾಯಿತು.
ಪ್ಲಾಸ್ಟಿಕ್ ದ್ವಜ ಮಾರಾಟ ಮಾಡಿದರೆ ಶಿಸ್ತಿನ ಕ್ರಮ ತೆಗೆದುಕೊಳ್ಳಿ: ಶಾಸಕ ಸಿದ್ದು ಸವದಿ!
ಯಾದಗಿರಿ ಶಾಸಕ ಚೆನ್ನೇರಡ್ಡಿ ಪಾಟೀಲ್ ಹಾಗೂ ಅವರ ಶಾಸಕರ ಪುತ್ರ ಸನ್ನೀಗೌಡರಿಗೆ ದಿಕ್ಕಾರ… ದಿಕ್ಕಾರ… ಬಂಧನ ಆಗಲಿ .. ಬಂಧನ ಆಗಲಿ… ದಲಿತ ಸಮುದಾಯ ಅಧಿಕಾರಿ ಸಾವಿಗೆ ನ್ಯಾಯ ಕೊಡಿ ಅಂತಾ ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಬಳಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆಯನ್ನ ದಲಿತ ವಿಮೋಚನಾ ಸಮಿತಿ ಹುಬ್ಬಳ್ಳಿ ಶಹರ ಘಟಕದ ವತಿಯಿಂದ ಇಂದು ನಡೆಸಲಾಯಿತು.
ಅಮಾಯಕ ಪ್ರತಿಭಾವಂತ ಪೊಲೀಸ್ ಅಧಿಕಾರಿ ಪರುಶುರಾಮ ಸಾವಿಗೆ ಕಾರಣವಾದವರ ಮೇಲೆ ಕಠಿಣ ಕಾನೂನು ಆಗಬೇಕು. ಒಬ್ಬ ಬಡ ಕುಟುಂಬದ ದಲಿತ ವರ್ಗದ ಯುವಕ ಮೇಲು ವರ್ಗದ ಅದರಲ್ಲೂ ಶಾಸಕರು ಅವರ ಪುತ್ರನ ಹಣದ ದುರಾಸೆ ಬಲಿ ಆಗಬೇಕಾಯಿತು. ಆದ್ದರಿಂದ ಇಂದು ಇದು ನಮ್ಮದು ಸಾಂಕೇತಿಕ ಹೋರಾಟ ಸರ್ಕಾರ ಕೂಡಲೇ ಎಚ್ಷೆತ್ತುಕೊಳ್ಳಬೇಕು .ಬಡ ಅಧಿಕಾರಿ ಪರುಶುಮಾ ಚೆಲವಾದಿ ಸಾವಿಗೆ ಸರ್ಕಾರ ನ್ಯಾಯ ಕೊಡಿ ಇಲ್ಲ ಅಂದರೆ ನಿಮಗೆ ನಾವು ಚುನಾವಣಾ ವೇಳೆ ಪಾಠ ಕಲಿಸುತ್ತೇವೆ ಎಂದು ದಲಿತ ವಿಮೋಚನಾ ಸಮಿತಿ ಮುಖಂಡ ಕೆಂಚಪ್ಪ ಮಲ್ಲಮ್ಮನವರ ಒತ್ತಾಯ ಮಾಡಿದರು.
ಪರುಶುರಾಮ ಚೆಲವಾದಿ ಪಿಎಸ್ ಐ ಆಗಿಕರ್ತವ್ಯ ನಿರ್ವಹಿಸುತ್ತಿದ್ದು ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಿಎಸ್ಐ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ಎರಡನೇ ದಿನಗಳ ಹಿಂದೆ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ಮರುದಿನ ಸಂಜೆ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರಮಾಣಿಕ ಅಧಿಕಾರ ಸಾವಿನಪ್ಪಿ ಇಷ್ಟು ದಿನಗಳು ಆದವು ಸರ್ಕಾರ ಹಾಗೂ ಗೃಹ ಇಲಾಖೆ ತಪ್ಪಿತಸ್ಥ ಶಾಸಕ ಹಾಗೂ ಅವರ ಪುತ್ರನ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗತಾ ಇಲ್ಲ ಎಂದು ಯುವ ಹೋರಾಟಗಾರ ದಲಿತ ವಿಮೋಚನಾ ಹೋರಾಟ ಸಮಿತಿ ಯುವ ನಾಯಕ ಶ್ರೀಧರ ಕಂದಗಲ್ ಆಕ್ರೋಶ ವ್ಯಕ್ತಪಡಿಸಿದರು.
ಕೂಲಿ ನಾಲಿ ಮಾಡಿಕೊಂಡು ಅಧ್ಯಯನ ಮಾಡಿ ಒಳ್ಳೆಯ ಹುದ್ದೆಗೆ ಏರಿದ ಪರುಶುರಾಮ ಚೆಲವಾದಿ ಕುಟುಂಬಕ್ಕೆ ನ್ಯಾಯ ಬೇಕು, ಪರುಶುರಾಮ ಪತ್ನಿಗೆ ಸರಕಾರಿ ಉದ್ಯೋಗ ಸಹ ಕೊಡಬೇಕು ಅಂತಾ ಸಂಘಟನೆಗಳ ಪ್ರಮುಖರ ಆಗ್ರಹ ಆಗಿತ್ತು. ನಂತರ ತಹಸೀಲ್ದಾರ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಪತ್ರ ರವಾನೆ ಮಾಡಿದರು.