ಗದಗ:- ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಹುದ್ದೆಗಳನ್ನ ಭರ್ತಿ ಮಾಡಲು ಅರ್ಥಿಕ ಇಲಾಖೆ ಸಹಮತಿ ವಿಚಾರವಾಗಿ ವಿ. ಪ. ಸದಸ್ಯ ಎಸ್ ವಿ ಸಂಕನೂರ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಗದಗನಲ್ಲಿ ಮಾತನಾಡಿದ ಅವರು, 2015 ರಿಂದ 2020 ರವರೆಗಿನ ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹುದ್ದೆಗಳನ್ನು ತುಂಬಿಕೊಳ್ಳಲು ಆರ್ಥಿಕ ಇಲಾಖೆ ಒಪ್ಪಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ 9 ವರ್ಷಗಳಿಂದ ನಿವೃತ್ತಿ, ನಿಧನದಿಂದ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳಲು ಸರಕಾರ ಅನುಮತಿ ನೀಡಿರಲಿಲ್ಲ. ಸರಕಾರದ ಆರ್ಥಿಕ ಇಲಾಖೆ 01-01-2016 ರಿಂದ 31-12-2020 ರವರೆಗೆ ನಿವೃತ್ತಿ ನಿಧನ ಇತ್ಯಾದಿ ಕಾರಣಗಳೀಂದ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ತುಂಬಿಕೊಳ್ಳಲು ಆದೇಶ ಹೊರಡಿಸಿದೆ. ಮುಚ್ಚುವ ಸ್ಥಿತಿಯಲ್ಲಿದ್ದ ಖಾಸಗಿ ಅನುದಾನಿತ ಶಾಲೆಗಳಿಗೆ ಪುನರ್ಜಿವ ತುಂಬಿದಂತಾಗಿದೆ, ಇದನ್ನು ಸ್ವಾಗತಿಸುತ್ತೇನೆ. ಶಾಲಾಶಿಕ್ಷಣ ಸಚಿವ ಮಧು ಬಂಗಾರಪ್ಪ ಸದನದಲ್ಲಿ ಭರವಸೆ ಕೊಟ್ಟಂತೆ ನಡೆದಿದ್ದಕ್ಕಾಗಿ ಅಭಿನಂದನೆಗಳು. ಆದರೆ ಈ ಆದೇಶದಲ್ಲಿ ಲೋಪದೋಷ ಎದ್ದು ಕಾಣುತ್ತಿದೆ. ಕೂಡಲೇ ಅದನ್ನು ಸರಿಪಡಿಸಬೇಕು ಎಂದರು.
1987 ರಿಂದ 1984-95 ರ ಶೈಕ್ಷಣಿಕ ಅವಧಿಯಲ್ಲಿ ಪ್ರಾರಂಭಗೊಂಡು ಈಗಾಗಲೇ ಅನುದಾನಕ್ಕೆ ಒಳಪಟ್ಟ ಖಾಸಗಿ ಅನುದಾನಿತ ಪ್ರೌಢಶಾಲೆಗಳು ಖಾಲಿಯಾಗಿರುವ ಬೋಧಕ ಹುದ್ದೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಿದ ಆದೇಶದಲ್ಲಿ 7 ಷರತ್ತುಗಳನ್ನು ಹಾಕಿದ್ದಾರೆ. ಅದರಲ್ಲಿ ಕೆಲವೊಂದನ್ನು ಸ್ವಾಗತಿಸುತ್ತೇನೆ, ಇನ್ನುಳಿದವುಗಳನ್ನು ವಿರೋಧಿಸುತ್ತೇನೆ. ರೋಸ್ಟರ್ ಬಿಂದು ಪಾಲಿಸುವುದು, ಶಾಲೆ ಕಾಲೇಜಿನವರು ಆನ್ಲೈನ್ ಮೂಲಕ ದಾಖಲೆಗಳನ್ನು ಸಲ್ಲಿಸಿ ಅನುಮತಿ ಪಡೆಯುವುದು ಸ್ವಾಗತಾರ್ಹ. 2016 ರಿಂದ 2017 ಸಾಲಿನವರೆಗೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಪರೀಕ್ಷಾ ಫಲಿತಾಂಶ ಉತ್ತಮವಾಗಿರುವದಲ್ಲಿ ಖಚಿತ ಪಡಿಸಿಕೊಳ್ಳುವುದು ಸಡಿಲಗೊಳಿಸಬೇಕು. ನೇಮಕಾತಿ ಅನುಮೋದನೆಗೆ ಇಲಾಖೆಗೆ ಸಲ್ಲಿಸುವುದು. ಸಂಪೂರ್ಣ ಮಾಹಿತಿ /ದಾಖಲೆಗಳೊಂದಿಗೆ ಆರ್ಥಿಕ ಇಲಾಖೆಗೆ ಸಲ್ಲಿಸುವುದು. ರಾಜ್ಯದ ಖಾಸಗಿ ಅನಿದಾನಿತ ಪದವಿಪೂರ್ವ ಕಾಲೇಜುಗಳಿಂದ ಬೇರ್ಪಟ್ಟ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಬೇಕು ಎಂದರು.