ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಸಂಧಿವಾತ ಸಮಸ್ಯೆ ಸಹ ಒಂದಾಗಿದೆ. ಸಂಧಿವಾತ ಸಮಸ್ಯೆ ಹೆಚ್ಚಾಗಿ ತಂಪು ವಾತಾವರಣವಿದ್ದಾಗ ಶುರುವಾಗುತ್ತದೆ. ಸಂಧಿವಾತವು ಜನರನ್ನು ತುಂಬಾ ಬಾಧಿಸುತ್ತದೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಯಸ್ಕರಲ್ಲೂ ಈ ಸಂಧಿವಾತ ಸಮಸ್ಯೆ ಕಾಡುತ್ತಿದೆ. ದೀರ್ಘಕಾಲ ಕುಳಿತೇ ಇರುವುದು, ದೈಹಿಕ ಚಟುವಟಿಕೆ ಕೊರತೆ ಸಂಧಿವಾತ ಸಮಸ್ಯೆ ಬೇಗ ಅಂಟಿಕೊಳ್ಳುವಂತೆ ಮಾಡುತ್ತದೆ. ಸಂಧಿವಾತ ಸಮಸ್ಯೆ ಇದ್ದಾಗ ವ್ಯಕ್ತಿಯು ತುಂಬಾ ನೋವು ಅನುಭವಿಸಬೇಕಾಗುತ್ತದೆ. ದೇಹದ ಸಂಧಿಗಳಲ್ಲಿ ಉಂಟಾಗುವ ಈ ಸಂಧಿವಾತ ನೋವು ನಡೆದಾಡಲು, ಕೆಲಸ ಮಾಡಲು ತೊಂದರೆ ಉಂಟು ಮಾಡುತ್ತದೆ.
ಸಾರ್ವಜನಿಕರಿಗೆ ಸಕಾಲ ಸೇವೆ ನೀಡುವಲ್ಲಿ ಕರ್ನಾಟಕದಲ್ಲಿ ಕಲಬುರಗಿ ಫಸ್ಟ್!
ಶುಂಠಿ:
ಸಂಧಿವಾತ ಸಮಸ್ಯೆಗಳಿಗೂ ಶುಂಠಿ ಅತ್ಯುತ್ತಮ ಪರಿಹಾರವಾಗಿದೆ. ಶುಂಠಿಯು ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿದೆ. ಕೀಲು ನೋವಿಗೆ ಶುಂಠಿ ಟೀ ತೆಗೆದುಕೊಳ್ಳುವುದರ ಜೊತೆಗೆ ಶುಂಠಿಯನ್ನು ರುಬ್ಬಿ ಊತ-ನೋವು ಇರುವ ಜಾಗಕ್ಕೆ ಹಚ್ಚಿದರೆ ಉತ್ತಮ ಉಪಶಮನ ದೊರೆಯುತ್ತದೆ. ಶುಂಠಿ ಕೀಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ವ್ಯಾಯಾಮ:
ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರು ವ್ಯಾಯಾಮವನ್ನು ರೂಢಿಸಿಕೊಳ್ಳಬೇಕು. ಲಘು ಜಿಗಿತ, ನಡಿಗೆ, ನಿಧಾನವಾಗಿ ಓಡುವುದು ಸ್ನಾಯುಗಳನ್ನು ಬಲಪಡಿಸುತ್ತದೆ. ಈ ರೀತಿಯ ವ್ಯಾಯಾಮವನ್ನು ಮಾಡುವುದರಿಂದ ನೀವು ಶಕ್ತಿಯನ್ನು ಪಡೆಯುವ ಮೂಲಕ ಈ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಮೆಂತೆಸೊಪ್ಪನ್ನು ಹಬೆಯಲ್ಲಿ ಬೇಯಿಸಿ ತಿನ್ನುತ್ತಿದ್ದರೆ ಸಂಧಿವಾತ ಸಂಬಂಧಿತ ಸಮಸ್ಯೆಗಳು ದೂರವಾಗುತ್ತದೆ.
ಎರಡು ಚಮಚ ಅಮೃತಬಳ್ಳಿಯ ಚೂರ್ಣಕ್ಕೆ, ಅರ್ಧ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಕಷಾಯ ಮಾಡಿ ಪ್ರತಿದಿನ ಎರಡು ಬಾರಿ ಸೇವಿಸುವುದರಿಂದ ಸಂಧಿವಾತ ಹಾಗೂ ಕೀಲು ನೋವು ಶಮನವಾಗುತ್ತದೆ.
ಸ್ವಲ್ಪ ಪ್ರಮಾಣದಲ್ಲಿ ಅಮೃತ ಬಳ್ಳಿಯನ್ನು ತೆಗೆದುಕೊಂಡು, 2 ಲೋಟ ನೀರಿನಲ್ಲಿ ಹಾಕಿ ಕುದಿಸಿ, ಅದಕ್ಕೆ ಅರ್ಧ ಚಮಚ ಗುಗ್ಗುಳವನ್ನು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಸಂಧಿವಾತ ಸಮಸ್ಯೆಗೆ ಉತ್ತಮವಾದ ಮನೆ ಮದ್ದಾಗಿದೆ.
ಅಮೃತ ಬಳ್ಳಿಯ ರಸವನ್ನು ತೆಗೆದು, ಅದಕ್ಕೆ ಅರ್ಧಚಮಚ ಹರಳೆಣ್ಣೆಯನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಸಂಧಿವಾತ, ಕಾಲು ನೋವಿನ ಸಮಸ್ಯೆಯು ಗುಣ ಮುಖವಾಗುತ್ತದೆ.
ಮೂರು ಚಮಚದಷ್ಟು ಅಮೃತಬಳ್ಳಿ ರಸಕ್ಕೆ ಒಂದು ಚಮಚ ತುಪ್ಪ ಸೇರಿಸಿ ಸೇವಿಸಿದರೆ ಸಂಧಿವಾತದಿಂದ ಮುಕ್ತಿ ಹೊಂದಬಹುದು.
ಪ್ರತಿದಿನವು ಸೇಬನ್ನು ತಿನ್ನುವ ಅಭ್ಯಾಸವನ್ನು ಬೆಳೆಸಿಕೊಂಡರೆ ಸಂಧಿವಾತದಿಂದ ದೂರ ಉಳಿಯಬಹುದು.
ಮಾವಿನ ಹಣ್ಣನ್ನು ಸೇವಿಸುವುದರಿಂದ ಸಂಧಿವಾತ ಸಮಸ್ಯೆಯು ಶಮನವಾಗುತ್ತದೆ.
ಸಂಧಿವಾತದಿಂದ ಕಾಲಿನ ಗಂಟಿನ ಭಾಗವು ಊದಿಕೊಂಡಿದ್ದರೆ ಉಪ್ಪಿನ ಶಾಖ ಕೊಡುವುದರಿಂದ ಈ ಸಮಸ್ಯೆ ದೂರವಾಗುತ್ತದೆ.
ಸ್ವಲ್ಪ ಪ್ರಮಾಣದಲ್ಲಿ ಮೊಸರನ್ನು ತೆಗೆದುಕೊಂಡು, ಅದಕ್ಕೆ ಒಂದು ಟೀ ಚಮಚದಷ್ಟು ಅರಿಶಿನಪುಡಿ ಬೆರೆಸಿ ಸೇವಿಸುವುದರಿಂದ ಸಂಧಿವಾತವು ಕಡಿಮೆಯಾಗುತ್ತದೆ.