ಬೆಂಗಳೂರು:- ಅವರೆಲ್ಲಾ ಸೋದರ ಸಂಬಂಧಿಗಳು.. ರಕ್ತ ಒಂದೆಯಾದರೂ, ಒಬ್ಬರ ನಡುವೆ ಮತ್ತೊಬ್ಬರಿಗೆ ತಿಕ್ಕಟ.. ಆಸ್ತಿ ವಿಚಾರಕ್ಕೆ ಹಲವು ವರ್ಷಗಳಿಂದ ಇತ್ಯರ್ಥವಾಗದ ಮಾತು.. ಆ ಮಾತು ಪಂಚಾಯಿತಿಗೆ ಸೀಮಿತವಾಗಿದ್ದರೇ ಮುಂದೊಂದು ದಿನ ಎಲ್ಲವೂ ಸರಿ ಹೊಗುತಿತ್ತೇನೊ.. ಆದ್ರೆ ಕೋಪದ ಬುದ್ದಿಗೆ ಆಲೋಚನೆ ಕೊಟ್ಟವರು ಸಂಬಂಧಿಯನ್ನೇ ಕೊಂದು ಜೈಲು ಸೇರಿದ್ದಾರೆ..
Accident Case: ಬೈಕ್ ಗೆ ಡಿಕ್ಕಿ ಹೊಡೆದ ಲಾರಿ: ಪತಿ ಸ್ಥಳದಲ್ಲೇ ಸಾವು, ಪತ್ನಿಯ ಎರಡು ಕಾಲು ಕಟ್!
ಯಸ್.. ಸಂಬಂಧಗಳು ಎಷ್ಟೇ ಹತ್ತಿರದಂತೆ ಕಂಡರೂ ಆಸ್ತಿ ವಿಚಾರ ಬಂದರೆ ಸಾಕು ಜಗಳ ಶುರುವಾಗತ್ತೆ.. ಅದೇ ರೀತಿ ತಂದೆಯಿಂದ ಬಂದ ಆಸ್ತಿ ಕೊಡದೆ ವಂಚಿಸಿದ್ದಾರೆಂದು ಸೋದರ ಸಂಬಂಧಿಗಳಿಂದಲೇ ಬಾಬುರೆಡ್ಡಿ ಎಂಬಾತನ ಭೀಕರ ಹತ್ಯೆ ನಡೆದಿದ್ದು, ಇಡಿ ಏರಿಯಾ ಜನತೆಯನ್ನೇ ಬೆಚ್ಚಿ ಬೀಳಿಸಿದೆ..
ಈ ಘಟನೆ ಮೊನ್ನೆ ಅಂದರೇ ಆಗಸ್ಟ್ ೨ರಂದು ರಾಮಮೂರ್ತಿನಗರ ವಿಜಿನಾಪುರದಲ್ಲಿ ನಡೆದಿದೆ.. ಕೊಲೆಯಾದ ಬಾಬುರೆಡ್ಡಿ ತಂದೆ ರಾಮಮೂರ್ತಿನಗರದಲ್ಲಿ ಆಸ್ತಿ ಮಾಡಿದ್ದು, ಇದು ಮಕ್ಕಳಲ್ಲಿ ಹಂಚಿಕೆಯಾಗುವ ಬಗ್ಗೆ ತಕರಾರು ಇತ್ತು.. ಅದರಂತೆ ಬಾಬುರೆಡ್ಡಿ ತಂದೆಯಿಂದ ಬಂದ ಆಸ್ತಿಯನ್ನು ತನ್ನ ಅಣ್ಣ ಮತ್ತು ತಂಗಿಗೆ ನೀಡದೆ ತಕರಾರು ಮಾಡಿದ್ದರಂತೆ.. ಇದೇ ವಿಚಾರವಾಗಿ ನಡೆದ ಮಾತುಕಥೆ ವೇಳೆ ಬಾಬುರೆಡ್ಡಿ ಅಣ್ಣನ ಮಗ ಭರತ್ ರೆಡ್ಡಿ ಹಾಗೂ ತಂಗಿಯ ಗಂಡ ಗೋಪಾಲ ರೆಡ್ಡಿ ಇಬ್ಬರು ಸೇರಿ ತಾವು ತಂದಿದ್ದ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ..
ಅಸಲಿಗೆ ಒಟ್ಟು ೨ ಕೋಟಿ ಮೌಲ್ಯದ ಆಸ್ತಿಗಾಗಿ ಸೊದರ ಸಂಬಂಧಿಗಳ ನಡುವೆ ತಕರಾರು ಇತ್ತು.. ಇದೇ ವಿಚಾರವಾಗಿ ಈ ಹಿಂದೆ ಹಲವು ಬಾರಿ ಪಂಚಾಯಿತಿ ಸಹ ಆಗಿತ್ತು.. ಅದರಂತೆ ಮೊನ್ನೆ ಸಹ ಪಂಚಾಯಿತಿಗೆಂದು ಬಾಬುರೆಡ್ಡಿ ಮನೆಗೆ ತೆರಳಿದ್ದರು.. ಈ ವೇಳೆ ಮೊದಲೆ ಪ್ಲ್ಯಾನ್ ಮಾಡಿದ್ದ ಆರೋಪಿಗಳು ಬಾಬುರೆಡ್ಡಿ ಮನೆಯ ಸುತ್ತಮುತ್ತ ಅಳವಡಿಸಿದ್ದ ಸಿಸಿಟಿವಿಗಳ ಕೇಬಲ್ ಕಟ್ ಮಾಡಿದ್ದರು.. ಆ ಬಳಿಕ ಬಾಬುರೆಡ್ಡಿ ಮನೆಯಿಂದ ಹೊರ ಬರುತಿದ್ದಂತೆ ಚಾಕುವಿನಿಂದ ದಾಳಿ ಮಾಡಿ ಹತ್ಯೆಗೈದಿದ್ದರು..
ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ರಾಮಮೂರ್ತಿನಗರ ಪೊಲೀಸರು ಆರೋಪಿ ಭರತ್ ರೆಡ್ಡಿ ಹಾಗೂ ಗೋಪಾಲರೆಡ್ಡಿ ಬಂಧಿಸಿದ್ದಾರೆ.. ಆಸ್ತಿ ವಿಚಾರದ ಗಲಾಟೆಯ ಕೊಲೆ ಹಿನ್ನಲೆ ತನಿಖೆ ಮುಂದುವರೆದಿದೆ.. ಆದ್ರೇ ಅದೇನೆ ಇದ್ರು ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೊ ಈ ಕಾಲದಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿಗಾಗಿ ಸೊದರ ಸಂಬಂಧಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ..