ಅವರು ಹೆಸರಿಗೆ ತಕ್ಕಂತೆ ಸೌಂದರ್ಯದ ಗಣಿ, ನೈಜ ನಟನೆ ಮತ್ತು ತಮ್ಮ ಬ್ಯೂಟಿಯಿಂದಲೇ ಅಪಾರ ಅಭಿಮಾನಿಗಳನ್ನು ತನ್ನತ್ತ ಸೆಳೆದಿದ್ದ ಮುದ್ದು ಮುಖದ ಚಲುವೆ. ಆದರೆ ಅಕಾಲಕ್ಕೆ ಕಣ್ಮರೆಯಾದ ಈ ಅದ್ಭುತ ಪ್ರತಿಭೆಯ ನೆನಪು ಮಾತ್ರ ಇಂದಿಗೂ ಅಜರಾಮರ. ಎಸ್ ನಾವೀಗ ಹೇಳಲು ಹೊರಟಿರೋದು 31ರ ಪ್ರಾಯದಲ್ಲಿಯೇ ಇಹಲೋಕ ತ್ಯಜಿಸಿದ ಬಹುಭಾಷಾ ನಟಿ ಸೌಂದರ್ಯ ಬಗ್ಗೆ. ಹಾಗಿದ್ರೆ ಬನ್ನಿ ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಸೌಂದರ್ಯ ನಟಿ ಆಗಿದ್ದೇಗೆ!?, ಹೇಗಿತ್ತು ಅವರ ಸಿನಿ ಜರ್ನಿ!? ಬಹಳ ಚಿಕ್ಕ ವಯಸ್ಸಿನಲ್ಲಿಯೇ ಆ ಒಂದು ದುರಂತ ನಡೆದಿದ್ದು ಹೇಗೆ ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ.
Wayanad Landslides: ಸಾವಿನ ಸಂಖ್ಯೆ 143ಕ್ಕೆ ಏರಿಕೆ: ರಕ್ಷಣಾ ಕಾರ್ಯದಲ್ಲಿ ಬೆಂಗಳೂರು ಯುವಕರ ತಂಡ
ಹೆಸರೇ ಹೇಳುವಂತೆ ಸುರದ್ರೂಪಿ ಹೆಣ್ಣು ಮಗಳು ಬಹುಭಾಷಾ ನಟಿ ಸೌಂದರ್ಯ. ಇವರು ಜುಲೈ 18, 1972ರಲ್ಲಿ ಕೋಲಾರದ ಮುಳಬಾಗಿನಲ್ಲಿ ಜನಿಸಿದರು. ಅವರ ತಂದೆ ಸತ್ಯನಾರಾಯಣ ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿದ್ದರು. ಸೌಂದರ್ಯ ಅವರ ಮೂಲ ಹೆಸರು ಸೌಮ್ಯ. ಸಾಕಷ್ಟು ಸಿನಿಮಾದಲ್ಲಿ ಸೌಮ್ಯ ಹೆಸರನ್ನು ಬಳಸಿಕೊಳ್ಳಲಾಗಿತ್ತು.
ಅಂದಿನ ಕಾಲಕ್ಕೆ ಸೌಂದರ್ಯ ಬಹು ಬೇಡಿಕೆಯ ನಟಿಯಾಗಿದ್ದರು. ಕನ್ನಡದಲ್ಲಿ ತೂಗುವೆ ಕೃಷ್ಣನ, ಸಿಪಾಯಿ, ನಾನು ನನ್ನ ಹೆಂಡ್ತೀರು, ಶ್ರೀ ಮಂಜುನಾಥ, ಆರ್ಯಭಟ, ದೋಣಿಸಾಗಲಿ, ಆಪ್ತಮಿತ್ರ ಸೇರಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆನಂತರ ‘ರೈತು ಭಾರತಂ‘ ಸಿನಿಮಾದ ಮೂಲದ ಟಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಜೊತೆಗೆ ಕೂಡ ಅಭಿನಯಿಸಿದ್ದರು. 1992ರಲ್ಲಿ ತೆರೆ ಕಂಡ ಕನ್ನಡದ `ಗಂಧರ್ವ’ ಚಿತ್ರದಿಂದ ಸಿನಿ ಪಯಣ ಆರಂಭಿಸಿದರು. ಇದಾದ ಬಳಿಕ ಅವರ ಸಾಲು ಸಾಲು ಸಿನಿಮಾಗಳು ಸೂಪರ್ ಹಿಟ್ ಆದ ಬೆನ್ನಲ್ಲೇ ಆಧುನಿಕ ಮಹಾನಟಿ ಸಾವಿತ್ರಿ ಎಂದೇ ಖ್ಯಾತಿ ಪಡೆದರು.
ತಮ್ಮ 12 ವರ್ಷದ ಸಿನಿ ಪಯಣದಲ್ಲಿ ಸುಮಾರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಅಂದಿನ ಕಾಲಕ್ಕೆ ಟಾಪ್ ನಟ, ನಿರ್ದೇಶಕರ ಜೊತೆ ಕೆಲಸ ಮಾಡಿದ ಏಕೈಕ ನಟಿ ಸೌಂದರ್ಯ ಎಂದರೂ ತಪ್ಪಾಗಲಾರದು. ಇನ್ನು, ಸೌಂದರ್ಯ ಕೇವಲ ನಟನೆ ಮಾತ್ರವಲ್ಲದೇ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಇವರು ಗಿರೀಶ್ ಕಾಸರವಳ್ಳಿಯವರ ‘ದ್ವೀಪ’ ಚಿತ್ರದ ಮೂಲಕ ನಿರ್ಮಾಪಕಿಯಾಗಿಗೂ ಗುರುತಿಸಿಕೊಂಡರು. ಕರ್ನಾಟಕ ರಾಜ್ಯ ಸರ್ಕಾರದ ಉತ್ತಮ ಚಿತ್ರ ಪ್ರಶಸ್ತಿ ಮತ್ತು ಉತ್ತಮ ನಟಿ ಪ್ರಶಸ್ತಿ ಕೂಡಾ ಸೌಂದರ್ಯ ಅವರಿಗೆ ಸಿಕ್ಕಿದೆ. ದೋಣಿ ಸಾಗಲಿ ಚಿತ್ರದಲ್ಲಿ ಸೌಂದರ್ಯ ಅವರ ಅದ್ಭುತ ನಟನೆಗೆ ರಾಜ್ಯ ಸರ್ಕಾರ ಶ್ರೇಷ್ಠ ನಟಿ ಪ್ರಶಸ್ತಿ ನೀಡಿತ್ತು. ಇದಲ್ಲದೇ ಡಾ. ವಿಷ್ಣುವರ್ಧನ ಅಭಿನಯದ ಆಪ್ತಮಿತ್ರ ಚಿತ್ರದಲ್ಲಿ ನಾಗವಲ್ಲಿಯಾಗಿ ಎಲ್ಲರ ಮನಸ್ಸನ್ನು ಕದ್ದಿದ್ದರು. ಆದರೆ ಇಂತಹ ಅದ್ಭುತ ನಟಿ 2004ರ ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ಆಂಧ್ರ ಪ್ರದೇಶಕ್ಕೆ ಚುನಾವಣಾ ಪ್ರಚಾರಕ್ಕೆಂದು ತೆರಳುತ್ತಿದ್ದ ವೇಳೆ ವಿಮಾನ ಅಪಘಾತಕ್ಕೀಡಾಗಿ ಕೊನೆಯುಸಿರೆಳೆಯುತ್ತಾರೆ. ಸೌಂದರ್ಯ ಅವರು ಸಾವಿಗೀಡಾಗುವ ಕೆಲ ತಿಂಗಳ ಹಿಂದಷ್ಟೇ ರಘು ಎಂಬುವವರನ್ನು ವಿವಾಹವಾಗಿದ್ದರು.
ಸಾಮಾಜಿಕ ಕಾಳಜಿ ಹೊಂದಿದ್ದ ನಟಿ ಸೌಂದರ್ಯ ತಾವು ಹುಟ್ಟಿದ ಬಂಗಾರಪೇಟೆ ತಾಲೂಕಿನ ಗಂಜಿಗುಂಟೆ ಗ್ರಾಮದ ಶಾಲೆಗಾಗಿ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದರು. ಇಂದಿಗೂ ಆ ಶಾಲಾ ಕಟ್ಟಡದ ಮೇಲೆ ನಟಿ ಸೌಂದರ್ಯ ಹೆಸರು ಶಾಶ್ವತವಾಗಿ ಉಳಿದಿದೆ.
ಆದರೆ ಇಂತಹಾ ಸರಳ, ಅದ್ಭುತ ಪ್ರತಿಭೆ 2004ರ ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ಆಂಧ್ರ ಪ್ರದೇಶಕ್ಕೆ ಚುನಾವಣಾ ಪ್ರಚಾರ ಸಲುವಾಗಿ ಹೊರತಾಗ ವಿಒಮಾನ ಪತನವಾಗಿ ಸಜೀವ ದಹನವಾಗಿ ಹೋಗಿದ್ದು ವಿಧಿಯಾಟವಲ್ಲದೆ ಬೇರಲ್ಲ. ಈ ದುರಂತದ ವೇಳೆ ನಟಿ ಸೌಂದರ್ಯ ಹಾಗೂ ಅವರ ಅಣ್ಣ ಅಮರನಾಥ್ ಸಾವನ್ನಪ್ಪಿದ್ದರು.
“ಬಡತನದ ಹಿನ್ನೆಲೆಯಿಂದ ಬಂದಿದ್ದ ಸೌಂದರ್ಯಹುಟ್ಟೂರಿಗೆ ಬಂದಾಗಲೆಲ್ಲಾ ಸಂಬಂಧಿಗಳ ಮನೆಗೆ ತೆರಳಿ ಕಷ್ಟ ಸುಖ ವಿಚಾರಿಸಿ ಸಹಾಯ ಮಾಡುತ್ತಿದ್ದಳು. ಆಕೆಯಿಂದ ಸಹಾಯ ಪಡೆದವರು ಇಂದಿಗೂ ಆಕೆಯನ್ನು ನೆನೆಯುತ್ತಾರೆ. ಸಾಮಾಜಿಕ ಕಾಳಜಿ ಇದ್ದ ನಟಿಗೆ ತನ್ನೂರಲ್ಲಿ ಒಂದು ಆಸ್ಪತ್ರೆ ತೆರೆಯಬೇಕೆಂದು ಆಸೆ ಇತ್ತು, ಇದು ಈಡೇರದೆ ಹೋಗಿದೆ” ಎಂದು ಸೌಂದರ್ಯ ಅವರ ಸೋದರ ಹೇಳಿದ್ದಾರೆ.
ಇನ್ನೂ ಸೌಂದರ್ಯ ಅವರಿಗೆ ಐಸ್ ಕ್ರೀಮ್ ಅಂದ್ರೆ ಪಂಚಪ್ರಾಣ. ಆದ್ರೆ ತಿನ್ನೋ ಹಾಗಿಲ್ಲ. ತಿಂದ್ರೆ ದಪ್ಪ ಆಗ್ತಾರೆ ಅನ್ನೋ ಕಾರಣಕ್ಕೆ ಅಣ್ಣ ಇವರನ್ನ ಕಂಟ್ರೋಲ್ ಮಾಡುತ್ತಿದ್ದರಂತೆ. ಆದ್ರೆ ಯಾರಿಗೂ ಕಾಣದಂತೆ ಅತ್ತಿಗೆ, ನಾದಿನಿ ಹೊರಗಡೆ ಹೋದಾಗ ಚೆನ್ನಾಗಿ ತಿನ್ಕೊಂಡು ಬರ್ತಾ ಇದ್ವಿ ಅನ್ನೋದನ್ನ ಹೇಳಿಕೊಂಡಿದ್ದಾರೆ. ಒಮ್ಮೆ ಫ್ಯಾಮಿಲಿ ಸಮೇತ ಸ್ನೋ ಸಿಟಿಗೆ ಹೋದಾಗ ಫ್ಯಾನ್ಸ್ ತೊಂದರೆ ಕೊಡ್ತಾರೆ ಅನ್ನೋ ಕಾರಣಕ್ಕೆ ಬುರ್ಕಾ ಧರಿಸಿದ್ದರಂತೆ. ಅಲ್ಲಿ ತೂಗು ಉಯ್ಯಾಲೆಯಲ್ಲಿ ಆಡುತ್ತಿರುವಾಗ ಅವರು ಹಾಕಿಕೊಂಡ ಸ್ಕಾರ್ಪ್ ಗಾಳಿಗೆ ಹಾರಿ ಅವರ ಮುಖವನ್ನ ಅಲ್ಲಿದ್ದ ಜನ್ರು ನೋಡಿ ಹೇ ಸೌಂದರ್ಯ ಅಂತ ಗುಂಪುಗೂಡಿದ್ದರಂತೆ. ಆ ಸಂದರ್ಭದಲ್ಲಿ ಅಲ್ಲಿದ್ದ ಜನರಿಂದ ತಪ್ಪಿಸಿಕೊಳ್ಳಲು ಪಟ್ಟ ಕಷ್ಟದ ಬಗ್ಗೆಯೂ ಹೇಳಿಕೊಂಡಿದ್ದಾರೆ ಸೌಂದರ್ಯ ಅವರ ಅತ್ತಿಗೆ.
ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಹೋದಾಗಲೂ ಯಾರಿಗೂ ಕಾಣದಂತೆ ಮುಖವನ್ನ ಕವರ್ ಮಾಡಿಕೊಂಡೇ ತೆರಳುತ್ತಿದ್ದರು ಸೌಂದರ್ಯ. ಸೌಂದರ್ಯ ತಾನು ದೊಡ್ಡ ನಟಿ ಅನ್ನೋ ಥರ ಬಿಹೇವ್ ಮಾಡ್ತಾನೇ ಇರಲಿಲ್ಲ. ಮನೆಯಲ್ಲಿ ಮಗಳೊಬ್ಬಳು ಹೇಗಿರಬೇಕೋ ಹಾಗಿರುತ್ತಿದ್ದರಂತೆ. ಏನೇ ಆಗಲಿ ಅದ್ಭುತ ನಟಿಯೊಬ್ಬರನ್ನ ಕಳೆದುಕೊಂಡ ಚಿತ್ರರಂಗ ಅವರ ಸಾವಿನಿಂದ ಬಡವಾಗಿದ್ದು ಮಾತ್ರ ಅಷ್ಟೇ ಸತ್ಯ.
ಸಿನಿ ಪ್ರೇಮಿಗಳಿಂದ ದೂರವಾಗಿರುವ ನಟಿ ಸೌಂದರ್ಯ ಸಾಕಷ್ಟು ಜನಮನ್ನಣೆ ಗಳಿಸಿದರು. ಅಲ್ಲದೇ ಸೌಂದರ್ಯ ಅವರ ಕೊನೆಯ ಸಿನಿಮಾ ‘ಆಪ್ತಮಿತ್ರ ಎಂದು ಇಂದಿಗೂ ಕೆಲವರು ಭಾವಿಸಿದ್ದಾರೆ. ಆದರೆ ಅಸಲಿಗೆ ಅದು ಬೇರೆಯೇ ಇದೆ.
ಬಹುಭಾಷಾ ನಟಿ ದಿವಂಗತ ಸೌಂದರ್ಯಾ ಈಗ ಕೇವಲ ನೆನಪು ಅಷ್ಟೇ. ಕನ್ನಡದ ಈ ನಟಿ ಅಪಾರ ಅಭಿಮಾನಿಗಳನ್ನು
ಅಗಲಿದ್ದಾರೆ. ಸಿನಿ ಪ್ರೇಮಿಗಳಿಂದ ದೂರವಾಗಿರುವ ಸೌಂದರ್ಯಾ ನೆನಪು ಇನ್ನೂ ದೂರ ಆಗಿಲ್ಲ. ಇವರು ನಟಿಸಿದ ಸಿನಿಮಾ ಪ್ರಸಾರ ಆದಾಗಲೆಲ್ಲಾ ನೆನಪಿಗೆ ಬರುತ್ತಾರೆ.
ಸೌಂದರ್ಯಾ ಪಾದರಸದಂತೆ ಇದ್ದ ನಟಿ. ಸದಾ ಚುರುಕಿನಿಂದ ಓಡಾಡಿಕೊಂಡಿದ್ದ ಕಲಾವಿದೆ. ಕನ್ನಡ, ತೆಲುಗು ಭಾಷೆಯ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗಲೇ ಸೌಂದರ್ಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವೃತ್ತಿ ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಪರ್ಫೆಕ್ಟ್.
ಹೆಸರಿಗೆ ತಕ್ಕಂತೆ ಸೌಂದರ್ಯಾ ನಿಜಕ್ಕೂ ಸುಂದರಿ. ತೆರೆಮೇಲೆ ಟ್ರೆಡಿಷನಲ್ ಲುಕ್ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟಿ ಅಭಿಮಾನಿಗಳೇನು ಕಮ್ಮಿಯಿರಲಿಲ್ಲ. ಇಂದಿಗೂ ಇವರ ಸಿನಿಮಾ ನೋಡುವುದಕ್ಕೆ ಜನರು ತುದಿಗಾಲಲ್ಲಿ ನಿಲ್ಲುತ್ತಾರೆ. ಇಂತಹ ಅಭಿಮಾನಿಗಳಿಗೊಂದು ಸುದ್ದಿಯಿದೆ. ಸೌಂದರ್ಯಾ ಅಗಲುವುದಕ್ಕೂ ಮುನ್ನ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಹಾಗಿದ್ರೆ ಆ ಸಿನಿಮಾ ಯಾವುದು? ಯಾಕೆ ಬಿಡುಗಡೆಯಾಗಿಲ್ಲ ಎಂಬೆಲ್ಲಾ ಪ್ರಶ್ನೆ ಸಹಜವಾಗಿಯೇ ಮೂಡಿದೆ.
ಎಸ್ 1992ರಲ್ಲಿ ಸೌಂದರ್ಯಾ ಕನ್ನಡದ ‘ಗಂಧರ್ವ’ ಸಿನಿಮಾದ ಮೂಲಕ ನಟನೆ ಆರಂಭಿಸಿದ್ದರು. ಇಲ್ಲಿಂದ ಸೌಂದರ್ಯಾ ಕನ್ನಡ, ತೆಲುಗು, ತಮಿಳು ಅಂತ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಾ ಒಂದೊಳ್ಳೆ ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದರು. 2004ರಲ್ಲಿ ಸೌಂದರ್ಯಾ ವೃತ್ತಿ ಬದುಕಿನ ಎರಡು ಪ್ರಮುಖ ಸಿನಿಮಾಗಳು ರಿಲೀಸ್ ಆಗಿದ್ದವು. ಅದರಲ್ಲೊಂದು ‘ಶ್ವೇತ ನಾಗರ’, ಇನ್ನೊಂದು ‘ಆಪ್ತಮಿತ್ರ. ಶ್ವೇತ ನಾಗರ’ ಸೌಂದರ್ಯಾ ನಟನೆಯ 100ನೇ ಸಿನಿಮಾ ಆಗಿತ್ತು. ಇದು ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲಿಯೂ ರಿಲೀಸ್ ಆಗಿತ್ತು. ಇದೇ ವರ್ಷ ಮೆಗಾ ಬ್ಲಾಕ್ಬಸ್ಟರ್ ‘ಆಪ್ತಮಿತ್ರ’ ರಿಲೀಸ್ ಆಯ್ತು. ಇದೇ ಸೌಂದರ್ಯ ನಟಿಸಿದ ಕೊನೆಯ ಸಿನಿಮಾ ಅಂತ ಅಂದುಕೊಂಡವರು ಅದೆಷ್ಟೋ ಮಂದಿ. ಆದರೆ, ಸೌಂದರ್ಯಾ ನಟಿಸಿದ ಸಿನಿಮಾವೊಂದು ಇನ್ನೂ ರಿಲೀಸ್ ಆಗಬೇಕಿದೆ. ನಟಿ ಅಗಲಿ ಸುಮಾರು ವರ್ಷಗಳೇ ಉರುಳಿದರೂ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಹೌದು, ಸೌಂದರ್ಯಾ ನಟಿಸಿರುವ ಸಿನಿಮಾವೊಂದು ಇನ್ನೂ ಬಿಡುಗಡೆಯಾಗಬೇಕಿದೆ. ಕನ್ನಡದಿಂದ ತೆಲುಗಿಗೆ ಸೌಂದರ್ಯಾರನ್ನು ಕರೆದುಕೊಂಡು ಹೋಗಿದ್ದ ತ್ರಿಪುರನೇನಿ ವರಪ್ರಸಾದ್ ‘ಗೆಲುಪು’ ಅನ್ನುವ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ಕೆಲವೇ ಕೆಲವು ನಿಮಿಷಗಳಲ್ಲಿ ಬಂದು ಹೋಗುವ ಪಾತ್ರದಲ್ಲಿ ನಟಿಸಲು ನಿರ್ದೇಶಕರ ಮೇಲಿನ ಅಭಿಮಾನದಿಂದ ಒಪ್ಪಿದ್ದರು.
ಉಷಾ ಕಿರಣ್ ಮೂವೀಸ್ ಸಹಯೋಗದಲ್ಲಿ ‘ಗೆಲುಪು’ ಸಿನಿಮಾವನ್ನು ವಿಜೇತ ಮೂವೀಸ್ ನಿರ್ಮಣ ಮಾಡುತ್ತಿತ್ತು. ಸಿನಿಮಾ ಮುಗಿದ್ದ ಬಳಿಕ ಉಷಾಕಿರಣ್ ಮೂವೀಸ್ ಬಜೆಟ್ ಮೇಲೆ ಶೇ.10ರಷ್ಟು ಹಣ ಕೊಟ್ಟು ಸಿನಿಮಾವನ್ನು ರಿಲೀಸ್ ಮಾಡಬೇಕಿತ್ತು. ಹೀಗಾಗಿ ಬೇರೆ ಡಿಸ್ಟ್ರಿಬ್ಯೂಟರ್ಗಳಿಗೆ ಈ ಸಿನಿಮಾವನ್ನು ಕೊಟ್ಟಿರಲಿಲ್ಲ. ಇನ್ನೇ ರಿಲೀಸ್ ಆಗಬೇಕು ಅನ್ನುವಾಗಲೇ ಉಷಾ ಕಿರಣ್ ಮೂವೀಸ್ ಅವರ ಸಿನಿಮಾಗಳು ಒಂದರ ಹಿಂದೊಂದು ಸೋತಿದ್ದರಿಂದ ‘ಗೆಲುಪು’ ರಿಲೀಸ್ ಮಾಡಲು ಹಿಂದೇಟು ಹಾಕಿತು. ಇದೇ ವೇಳೆ ಬೇರೆಯವರು ರಿಲೀಸ್ ಮಾಡಲು ಮುಂದೆ ಬಂದಿಲ್ಲ. ಹೀಗಾಗಿ ಇನ್ನೂ ಈ ಸಿನಿಮಾ ಡಬ್ಬದಲ್ಲೇ ಇದೆ ಎಂದು ಹೇಳಲಾಗುತ್ತಿದೆ
ತೆಲುಗಿನಲ್ಲಿ ಬಾಲಯ್ಯ ಜೊತೆ ನಟಿಸಿದ್ದ ‘ನರ್ತಾನಾಶಾಲಾ’ ಸಿನಿಮಾ 2020ರಲ್ಲಿ ರಿಲೀಸ್ ಆಗಿತ್ತು. ಇದೇ ಕೊನೆಯ ಸಿನಿಮಾ ಎನ್ನುವವರು ಇದ್ದಾರೆ. ಆದ್ರೀಗ ‘ಗೆಲುಪು’ ರಿಲೀಸ್ ಆದರೆ, ಇದೇ ಕೊನೆಯ ಸಿನಿಮಾ ಆಗಲಿದೆ. ಒಟ್ಟಾರೆ ಅಂದದ ಚಲುವೆ ಸೌಂದರ್ಯ ಅವರ ಕೊನೆಯ ಸಿನಿಮಾ ರಿಲೀಸ್ ಆದ್ರೆ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗುವುದು ಅಷ್ಟೇ ಸತ್ಯ.