ಬಾಗಲಕೋಟೆ :- ಘಟಪ್ರಭಾ ನದಿ ನೀರಿನ ಪ್ರವಾಹದಿಂದ ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮ ಒಂದು ಪ್ರವಾಹದಿಂದ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಹನ್ನೆರಡು ಮನೆಗಳು ಪ್ರವಾಹಕ್ಕೆ ಒಳಗಾಗಿದ್ದು, ಅವುಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
Toothache Remedies: ರಾತ್ರಿ ವೇಳೆ ಹಲ್ಲು ನೋವು ಬರುತ್ತಾ? ಈ ಮನೆಮದ್ದು ಟ್ರೈ ಮಾಡಿ!
ಮುಧೋಳ ನಗರದ ಯಾದವಾಡ ಬ್ರಿಡ್ಜ್ ಗೆ ಭೇಟಿ ಪರಿಶೀಲಿಸಿ, ಪ್ರವಾಹ ಪರಿಸ್ಥಿತಿ ಅವಲೋಕಿಸಿ ನಂತರ ಮಾಧ್ಯಮಗಳ ಜೊತೆಯಲ್ಲಿ ತಿಮ್ಮಾಪುರ ಇನ್ನೂ 76 ಸಾವಿರ ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದೆ. ಅದರೂ ತಾವುದೇ ಪ್ರಭಾವ ಭೀತಿ ಇಲ್ಲ.ಆಲಮಟ್ಟಿ ಜಲಾಶಯದಿಂದ ಮೂರು ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ಘಟಪ್ರಭಾ ನದಿಯ ಪ್ರವಾಹಕ್ಕೆ ಒಳಗಾಗುವ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ್ದಾರೆ.
ಪ್ರವಾಹ ಕ್ಕೆ ತುತ್ತಾಗುವ ಗ್ರಾಮಗಳ ಜನರಿಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಕೃಷ್ಣಾ ನದಿಯಿಂದ ಮೂರು ಲಕ್ಷ ಕ್ಯುಸೆಕ್ ನೀರು ಹೊರಬರುತ್ತಿದೆ. ಅಲ್ಲದೇ ಮುತ್ತೂರು, ಮೈಗೂರು ಗ್ರಾಮಗಳು ನಡುಗಡ್ಡೆಯಾಗಿವೆ. 38 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯವಾಗಿದೆ. ಕೃಷ್ಣಾ, ಘಟಪ್ರಭಾ ನದಿಯ ಪ್ರವಾಹ ದ ಹಿನ್ನೆಲೆಯಲ್ಲಿ ಎಲ್ಲ ಡಿಸಿ,ಎಸಿ ಆದಿಯಾಗಿ ಎಲ್ಲ ಅಧಿಕಾರಿಗಳು ಪ್ರವಾಹ ವನ್ನು ಎದುರಿಸಲು ಕಾರ್ಯಪ್ರವೃತ್ತರಾಗಿದ್ದಾರೆ.ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸಶಕ್ತವಾಗಿದೆ ಎಂದು ಉಸ್ತುವಾರಿ ಸಚಿವ ತಿಮ್ಮಾಪುರ ತಿಳಿಸಿದರು.