ದಕ್ಷಿಣ ಕನ್ನಡ :– ಜಿಲ್ಲೆಯ ಸುರತ್ಕಲ್ನ ಕಾಟಿಪಳ್ಳ, ಕೃಷ್ಣಾಪುರ ಭಾಗದಲ್ಲಿ ಮಳೆಯ ಜೊತೆಗೆ ಸುಂಟರಗಾಳಿ ಬೀಸಿದ್ದು, ಮನೆಯ ಮೇಲ್ಛಾವಣಿ ಹಾರಿಹೋಗಿದೆ.
ಜೊತೆಗೆ ವಿದ್ಯುತ್ ಕಂಬ ಹಾಗೂ ಬೃಹತ್ ಮರಗಳು ಧರೆಗೆ ಉರುಳಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಇನ್ನು ಭಯಾನಕ ಸುಂಟರಗಾಳಿಯ ದೃಶ್ಯ, ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ ಭಾರಿ ಮಳೆಯಿಂದಾಗಿ ಮಂಗಳೂರು ಬಳಿ ಮನೆ ಕುಸಿತವಾಗಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ದುರಂತ ತಪ್ಪಿದೆ. ಕರ್ನಾಟಕದ ಹಲವೆಡೆ ಮಳೆ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಕರಾವಳಿ ಭಾಗಗಳಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿದೆ.