ಮಂಗಳೂರು:- ಗೋವಾ ಕಡಲ ಕಿನಾರೆಯ ಅರಬ್ಬಿ ಸಮುದ್ರದಲ್ಲಿ ಸರಕು ಸಾಗಾಟದ ಹಡಗಿನಲ್ಲಿ ಅಗ್ನಿ ಅವಘಡ ಉಂಟಾಗಿರುವಂತಹ ಘಟನೆ ಜರುಗಿದೆ.
ಎಚ್ಚರ: ಆ್ಯಪ್ಗಳನ್ನ ನಂಬಿ ಹಣ ಹಾಕೋ ಮುನ್ನ ಹುಷಾರ್, ಕೋಟಿ-ಕೋಟಿ ದೋಖಾ ಮಾಡ್ತಾರೆ!
ಈ ಘಟನೆ ಜುಲೈ 20ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೆಲಿಕಾಪ್ಟರ್ ಮತ್ತು ರಕ್ಷಣಾ ಹಡಗಿನ ಮೂಲಕ ಇಂಡಿಯನ್ ಕೋಸ್ಟ್ ಗಾರ್ಡ್ನಿಂದ ಬೆಂಕಿ ನಂದಿಸಲಾಗಿದೆ. ಸದ್ಯ ಹಡಗನ್ನು ಮಂಗಳೂರು ಕಡಲ ಕಿನಾರೆಗೆ ತಂದು ನಿಲ್ಲಿಸಲಾಗಿದೆ. ಗುಜರಾತ್ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೋಗೆ ಹಡಗು ಹೊರಟಿದ್ದ ವೇಳೆ ಅವಘಡ ಸಂಭವಿಸಿತ್ತು.
ಸದ್ಯ ಲಂಗರು ಹಾಕಿರುವ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವದ ಜೊತೆ ಹಡಗು ಮುಳುಗುವ ಆತಂಕ ಉಂಟಾಗಿದೆ. ಆದರೆ ಇದರಿಂದ ಮಂಗಳೂರು ಕಡಲ ಕಿನಾರೆಗೆ ಯಾವುದೇ ರೀತಿಯ ಅಪಾಯವಿರುವುದಿಲ್ಲ ಮತ್ತು ಸಂಭಾವ್ಯ ಅವಘಡ ಎದುರಿಸಲು ಸಿದ್ದ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.