ಹುಬ್ಬಳ್ಳಿ:ಹುಬ್ಬಳ್ಳಿ ಮಹಾನಗರದ ಅತೀ ಪುರಾತನ ಮಂದಿರ, ಗ್ರಾಮದೇವತೆಯಂದೆ ಪ್ರಸಿದ್ಧತೆ ಹೊಂದಿರುವ, ಎಸ್. ಎಸ್. ಕೆ. ಪಂಚ ಟ್ರಸ್ಟ್, ಶ್ರೀ ದುರ್ಗಾದೇವಿ ದೇವಸ್ಥಾನ, ದಾಜಿಬಾನ ಪೇಟ, ಹುಬ್ಬಳ್ಳಿ ಈ ಸಂಸ್ಥೆಯ ದಾಜಿಬಾನ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರದ ಮಾನ್ಯ ಪೊಲೀಸ ಆಯುಕ್ತರಾದ ಎನ್. ಶಶಿಕುಮಾರ ಇವರು ಭೇಟಿ ನೀಡಿ ದರ್ಶನಾಶೀರ್ವಾದ ಪಡೆದು,ಪುರಾತನ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿದು ತುಂಬಾ ಸಂತಸ ವ್ಯಕ್ತಪಡಿಸಿದರು ಹಾಗೂ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳ ಬಗ್ಗೆಯೂ ತಿಳಿದುಕೊಂಡು ದೇವಸ್ಥಾನದ ಯಾವುದೇ ಕಾರ್ಯಗಳಿಗೆ ತಮ್ಮ ಸಹಕಾರ ಯಾವತ್ತೂ ಇದೆ ಎಂದು ಹೇಳಿದರು.
Hubballi: ಪುಣ್ಯಸಾಗರ ಮುನಿಮಹಾರಾಜರ ೨೮ ನೇ ವರ್ಷ ಚಾತುರ್ಮಾಸ ಸಮಾರಂಭ!
ಈ ಸಂದರ್ಭದಲ್ಲಿ ಮಾನ್ಯ ಪೊಲೀಸ್ ಆಯುಕ್ತರನ್ನು ಶ್ರೀದೇವಿ ಸನ್ನಿಧಾನದಲ್ಲಿ ಶಾಲಾರ್ಪಣೆ ಮಾಲಾರ್ಪಣೆ ಮಾಡುವುದರೊಂದಿಗೆ ಸತ್ಕರಿಸಿ, ಅವಳಿ ನಗರವು ಮಾನ್ಯ ಆಯುಕ್ತರ ನೇತೃತ್ವದಲ್ಲಿ, ಶಾಂತಿಯಿಂದ ಸೌಹಾರ್ದಯುತವಾಗಿ ಇರಲೆಂದು ಶ್ರೀದೇವಿ ದುರ್ಗಾಮಾತೆಯಲ್ಲಿ ಪ್ರಾರ್ಥಿಸುವ ಮೂಲಕ ಶುಭ ಕೋರಲಾಯಿತು .
ಈ ಸಂದರ್ಭದಲ್ಲಿ ಉಪ ಪೊಲೀಸ್ ಆಯುಕ್ತರುಗಳಾದ ಮಹಾಲಿಂಗಪ್ಪ ನಂದಗಾವಿ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆ ಹಾಗು ರವೀಶ ಸಿ. ಆರ್. ಟ್ರಾಫಿಕ್ ಮತ್ತು ಕ್ರೈಂ ಇಲಾಖೆ ಹಾಗೂ ಮಾನ್ಯ ಸಹಾಯಕ ಪೊಲೀಸ ಪೊಲೀಸ್ ಆಯುಕ್ತರಾದ ಶಿವಪ್ರಕಾಶ ನಾಯ್ಕ್ , ಉಪನಗರ ಪೊಲೀಸ ಠಾಣೆಯಪೋಲಿಸ ಇನೆಸ್ಪೆಕ್ಟರರಾದ ಎಂ. ಎಸ್. ಹೂಗಾರ ಇವರು ಶ್ರೀ ದ್ಯಾಮವ್ವ ಶ್ರೀ ದುರ್ಗಾ ದೇವಿಯರ ದರ್ಶನ – ಆಶೀರ್ವಾದ ಪಡೆದು, ದುರ್ಗಾದೇವಿ ಪಂಚಾಯತಿಯ ಪರವಾಗಿ ಸತ್ಕಾರ ಸ್ವೀಕರಿಸಿದರು.
ಶ್ರೀ ದುರ್ಗಾದೇವಿ ಪಂಚಾಯತಿಯ ಜಾಯಿಂಟ್ ಚೀಫ್ ಟ್ರಸ್ಟಿ ಶ್ರೀ ನೀಲಕಂಠ ಪಿ.ಜಡಿ, ಗೌರವ ಕಾರ್ಯದರ್ಶಿ ಭಾಸ್ಕರ ಎನ್. ಜಿತೂರಿ, ಯುವ ಪ್ರಮುಖರುಗಳಾದ ನಾಗೇಶ ಜಿ. ಕಲ್ಬುರ್ಗಿ, ಶ್ರೀನಿವಾಸ ರತನ, ವೆಂಕಟೇಶ ಪೂಜಾರಿ,ಶ್ರೀ ಪ್ರಕಾಶ ಬುರಬುರೆ, ರಾಘವೇಂದ್ರ ದೊಂಗಡಿ, ಪಾಂಡು ಮೇಹರವಾಡೆ, ಮಂಜುನಾಥ ರತನ, ಶ್ರೀನಿವಾಸ ಪಿ. ರತನ, ಕಿಶೋರ ರತನ ಸೇರಿದಂತೆ ಇತರರು ಉಪಸ್ಥಿತರಿದ್ದರು.