ಕೊಲ್ಲೂರು: ಚಿತ್ರದುರ್ಗ ರೇಣುಕಾ ಸ್ವಾಮಿ ಮರ್ಡರ್ ಕೇಸ್ನಲ್ಲಿ ಎ2 ಆಗಿರುವ ದರ್ಶನ್ ಅವರು ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ವಿಜಯಲಕ್ಷ್ಮೀ ಅವರು ಕೊಲ್ಲೂರಿಗೆ ತೆರಳಿದ್ದಾರೆ. ಅಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಮಳೆಯ ಮಧ್ಯೆಯೇ ಅವರು ದೇವರ ಮೊರೆ ಹೋಗಿದ್ದಾರೆ. ಇಷ್ಟೇ ಅಲ್ಲ, ಚಂಡಿಕಾ ಯಾಗ ಕೂಡ ಮಾಡಿಸಿದ್ದಾರೆ. ಈ ಮೂಲಕ ಪತಿಯ ಬಿಡುಗಡೆಗೆ ಪ್ರಾರ್ಥಿಸಿದ್ದಾರೆ.
ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಕೂಡ ಶತಾಯಗತಾಯವಾಗಿ ಪ್ರಯತ್ನಿಸ್ತಿದ್ದಾರೆ. ಇದಕ್ಕಾಗಿ ಕೊಲ್ಲೂರು ಮೂಕಾಂಬಿಕೆಯ ಮೊರೆ ಹೋಗಿದ್ದಾರೆ. ಉಡುಪಿಯ ಮೂಕಾಂಬಿಕಾ ಸನ್ನಿಧಿಗೆ ಕಳೆದ ರಾತ್ರಿ ಆಪ್ತರ ಜೊತೆ ತೆರಳಿರುವ ವಿಜಯಲಕ್ಷ್ಮೀ ದೇವಿಯ ದರ್ಶನ ಪಡೆದಿದ್ದು ಇಂದು ಶಕ್ತಿಯುತ ನವಚಂಡಿಕಾ ಯಾಗ ನಡೆಸಿದ್ದಾರೆ. ಇಂದು ಬೆಳಗ್ಗೆ ಚಂಡಿಕಾ ಹೋಮ ಶುರುವಾಗಿದ್ದು ಸನ್ನಿಧಿಯಲ್ಲಿ ಸಂಕಲ್ಪ, ಪಾರಾಯಣ ನಡೆದಿದೆ..
Foot Care: ಪಾದದ ಅಡಿಯಲ್ಲಿ ಸುಡುವ ರೀತಿ ಆಗ್ತಿದ್ಯಾ..? ನಿವಾರಣೆಗೆ ಈ ಮನೆ ಮದ್ದು ಬೆಸ್ಟ್
ಜುಲೈ 24ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಸಹೋದರ ದಿನಕರ್ ತೂಗುದೀಪ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ್ರು. ಮಗನ ಸ್ಕೂಲ್ ಸೀಟ್ ವಿಚಾರಕ್ಕೆ ಚರ್ಚೆ ಮಾಡಿದ್ರು ಎನ್ನಲಾಗ್ತಿದೆ. ದರ್ಶನ್ ವಿಚಾರವಾಗಿ ಮಾತುಕತೆ ನಡೆದಿಲ್ಲ ಎನ್ನಲಾಗ್ತಿದೆ.ರೇಣುಕಾಸ್ವಾಮಿ ಕೊನೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿ ಹಲವು ದಿನಗಳೇ ಕಳೆದು ಹೋಗಿದೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದರ್ಶನ್ಗೆ ಜೈಲುವಾಸದಿಂದ ನರಕ ದರ್ಶನವಾಗ್ತಿದೆ ಎನ್ನಲಾಗ್ತಿದೆ.