ಚಿಕ್ಕೋಡಿ:- ಭಾರೀ ಮಳೆಯಿಂದಾಗಿ ರಾಯಬಾಗ ತಾಲೂಕಿನ ಕುಡಚಿಯಲ್ಲಿರುವ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆ ಸಚಿವ ಸತೀಶ್ ಜಾರಕಿಹೋಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
1 ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ!
ಬಳಿಕ ಮಾತನಾಡಿದ ಅವರು, ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ರಕ್ಷಣಾ ತಂಡ ಕಾಳಜಿ ಕೇಂದ್ರಗಳ ಕುರಿತು ಎಲ್ಲಾ ಪರಿಶೀಲನೆ ಮುಗಿದಿದೆ. ಸದ್ಯಕ್ಕೆ ಯಾವುದೆ ಪ್ರವಾಹ ಪರಿಸ್ಥಿತಿ ಇಲ್ಲಾ. ಮುಂದೆ ಏನಾದರೂ ಸಮಸ್ಯೆಯಾದಲ್ಲಿ ಎಲ್ಲಾ ರೀತಿಯ ತಯಾರಿ ಮಾಡಲಾಗಿದೆ. ಮಹಾರಾಷ್ಟ್ರ ಬಾಗಲಕೋಟೆ ರಾಯಚೂರು ಮೂರು ಕಡೆಯ ಅಧಿಕಾರಿಗಳು ಹೊಂದಾಣಿಕೆಯಲ್ಲಿದ್ದಾರೆ.
ಇನ್ನು ಸ್ವಲ್ಪ ನೀರು ಹೆಚ್ಚಾಗಬಹುದು ಜಾಸ್ತಿ ನೀರಿಕ್ಷೆ ಯಾವುದು ಇಲ್ಲಾ. ಕಾಳಜಿ ಕೇಂದ್ರಗಳು ಇದೆ. ಜನ ಬಂದ್ರೆ ಸ್ಟಾರ್ಟ್ ಮಾಡ್ತಿವಿ. ಸಂಪೂರ್ಣ ಮನೆ ಹಾನಿಯಾದ್ರೆ 5 ಲಕ್ಷ ನೀಡಲು ಆಗಲ್ಲಾ ಮೂರು ಲಕ್ಷದ ವರೆಗೆ ನೀಡ್ತಿವಿ. ಈ ಬಾರಿ 1.5 ಲಕ್ಷ ಹಣ ಹಾಗೂ ಒಂದು ಮನೆ ಮಂಜುರು ಮಾಡ್ತಿವಿ. ಕಳೆದ 8 ವರ್ಷಗಳಿಂದ ಸೇತುವೆ ಕಾಮಗಾರಿಗಳು ಮುಗಿದಿಲ್ಲಾ. ಈ ಬಾರಿ ಎಲ್ಲಾ ಸೇತುವೆಗಳನ್ನ ಮುಗಿಸ್ತಿವಿ. ಈ ವರ್ಷದ ಅಂತ್ಯಕ್ಕೆ ಕುಡಚಿ ಸೇತುವೆ ಕಾಮಗಾರಿ ಕೂಡ ಮುಗಿಯಲಿದೆ ಎಂದರು. ದಲಿತರ ಹಣ ದುರ್ಬಳಕೆ ವಿಚಾರವಾಗಿ ಮಾತನಾಡಿ, ತನಿಖೆ ನಡೆಯುತ್ತಿದೆ ಆರೋಪ ಸಾಬಿತವಾಗಲಿ ನೊಡುವ ಎಂದರು.
ಮುಖ್ಯಮಂತ್ರಿಗಳ ರಾಜೀನಾಮೆ ವಿಚಾರವಾಗಿ ಮಾತನಾಡಿ, ಯಾರೊ ಮಾಡಿದ ತಪ್ಪಿಗೆ ಅವರು ಯಾಕೆ ರಾಜೀನಾಮೆ ನೀಡಬೇಕು. ತಪ್ಪು ಮಾಡಿದವರು ಈಗಾಗಲೇ ಶಿಕ್ಷೆ ಆಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.