ಬೆಂಗಳೂರು:– ಸಿದ್ದರಾಮಯ್ಯ ಹೇಡಿಯಂತೆ ಸದನದಿಂದ ಪಲಾಯನಗೈದಿದ್ದಾರೆ ಎಂದು ಮಾಜಿ ವಿಪಕ್ಷ ನಾಯಕ ಅಶೋಕ್ ಹೇಳಿದ್ದಾರೆ.
ರಾಜ್ಯಪಾಲರಿಗೆ ದೂರು ಸಲ್ಲಿಸಿ ಮಾತನಾಡಿದ ಅವರು, ಮುಡಾದಲ್ಲಿ ನಡೆದಿರೋದು ದೊಡ್ಡ ಹಗರಣ, ನಿವೇಶನಗಳಿಗಾಗಿ 86,000 ಅರ್ಜಿ ಸಲ್ಲಿಸಿದ್ದರೂ ಕೇವಲ ಸಿದ್ದರಾಮಯ್ಯ ಕುಟುಂಬಕ್ಕೆ ಮಾತ್ರ ಹೇಗೆ 14 ಸೈಟುಗಳನ್ನು ನೀಡಲಾಯಿತು? 3.16 ಎಕರೆ ಜಮೀನು 4 ದಲಿತ ಸಹೋದರರಿಗೆ ಸೇರಿದ್ದು, ಕ್ರಯ ಪತ್ರದಲ್ಲಿ ಕೇವಲ ಒಬ್ಬನ ಸಹಿ ಮಾತ್ರ ಇದೆ. ಆದರೆ ಈ ಸಹೋದರರು ಈಗ ರಾಷ್ಟ್ರೀಯ ಪರಿಶಿಷ್ಟ ಜಾತಿ/ ಪಂಗಡ ನಿಗಮಕ್ಕೆ ಪತ್ರ ಬರೆದಿದ್ದಾರೆ ಎಂದು ಅಶೋಕ ಹೇಳಿದರು.
ವಿರೋಧ ಪಕ್ಷಗಳಿಗೆ ಸದನದಲ್ಲಿ ಪ್ರಶ್ನೆ ಕೇಳುವ, ಸಂವೈಧಾನಿಕ ಅಧಿಕಾರವಿದೆ. ಆದರೆ ಸ್ಪೀಕರ್ ಅವರನ್ನು ತಮ್ಮ ಕಡೆ ವಾಲಿಸಿಕೊಂಡಿರುವ ಸಿದ್ದರಾಮಯ್ಯ ನಮ್ಮ ಹಕ್ಕು ಮತ್ತು ಅಧಿಕಾರಗಳನ್ನು ಮೊಟಕುಗೊಳಿಸಿದ್ದಾರೆ. ಮುಖ್ಯಮಂತ್ರಿಯ ವಿರುದ್ಧ ಮಾಡಿರುವ ಅರೋಪಗಳಿಗೆ ಇವತ್ತು ನಾವೆಲ್ಲಿ ದಾಖಲೆಗಳನ್ನು ಸದನದ ಮುಂದೆ ಇಡುತ್ತೇವೆಯೋ ಅಂತ ಹೆದರಿ ಹೇಡಿಯಂತೆ ಸದನದಿಂದ ಪಲಾಯನಗೈದಿದ್ದಾರೆ ಎಂದರು.