ಬೆಂಗಳೂರು:- ರಾಜ್ಯದ 18 ಜಿಲ್ಲೆ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆ ಕಳೆದ ಎರಡು ವರ್ಷದಿಂದ ತಾಂತ್ರಿಕ ದೋಷದಿಂದಲೇ ಹೆಸರು ಪಡೆದಿದೆ. ದ್ವಿಚಕ್ರ, ಕಾರು, ಮಿನಿ ಗಾಡಿಗಳಿಗಷ್ಟೆ ಸೀಮಿತವಾಗಿದ್ದ ಪೀಣ್ಯಾ ಫ್ಲೈ ಓವರ್ ರಸ್ತೆಗೆ ಕಡೆಗೂ ಲಗ್ನ ಕೂಡಿ ಬಂದಿದೆ. ಪಿನ್ ಟು ಪಿನ್ ಅಧ್ಯಯನ ಮಾಡಿದ IISC ಸಂಸ್ಥೆ ಈಗ ಬಾರಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದ್ರೆ ಇಲ್ಲ ಅಂತ ವರದಿ ನೀಡಿದ್ದು. ಇದೇ 29 ರಿಂದ ಬಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.
ನಿಜ… ತುಮಕೂರು ರಸ್ತೆಯ ಟ್ರಾಫಿಕ್ ನಿಂದ ನೊಂದು, ಯಪ್ಪಾ ಸಾಕು ಈ ರೋಡ್ ಸಹವಾಸ ಅಂತ ಸುಸ್ತಾಗಿದ್ದ ಭಾರೀ ವಾಹನಗಳ ಚಾಲಕರಿಗೆ ಅಂತೂ ಇಂತೂ ಶುಭ ಸುದ್ದಿ ಸಿಕ್ಕಿದೆ. ತುಮಕೂರು ರಸ್ತೆಯ ಪೀಣ್ಯ ಮೇಲಸೇತುವೆಯ 120 ಪಿಲ್ಲರಗಳ ನಡುವೆ ಹೊಸದಾಗಿ 240 ಕೇಬಲ್ ಅಳವಡಿಕೆ ಕಾರ್ಯ ಮುಗಿದ್ದಿದ್ದು, ಐಐಎಸ್ಸಿ ಸಂಸ್ಥೆ ಭಾರೀ ವಾಹನಕ್ಕೂ ಪ್ರವೇಶ ಕಲ್ಪಿಸಬಹುದು ಎಂದು ವರದಿ ನೀಡಿದೆ. ಪ್ಲೈಓವರ್ ನ ಗುಣಮಟ್ಟದ ಪರೀಕ್ಷೆ ಮುಗಿಸಿ ವರದಿ ನೀಡಿರುವ ಐಐಎಸ್ಸಿ, ಬಾರಿ ವಾಹನಗಳು ಪ್ಲೈಓವರ್ ಮೇಲೆ ಸಂಚಾರ ಮಾಡಬಹುದು, ಸಂಚಾರ ಮಾಡಿದ್ರೆ ಯಾವುದೇ ತೊಂದರೆ ಇಲ್ಲ ಎಂದು ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ನೀಡಿದೆ. ವರದಿ ಬೆನ್ನಲ್ಲೇ ಸಂಚಾರಿ ಪೊಲೀಸರು ಸಭೆ ನಡೆಸಿ ಇದೆ 29 ರಿಂದ ಬಾರಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಿದೆ.
ಪ್ಲೈಓವರ್ ವರದಿ ಬಗ್ಗೆ ಐಐಎಸ್ಸಿ ಸಂಸ್ಥೆಯ ತಜ್ಞರು ಮಾಹಿತಿ ಪ್ರಕಾರ, ಕೇಬಲ್ ಅಳವಡಿಕೆ ನಂತರ ಮೇಲ್ಸೆತ್ತುವೇ ಮೇಲೆ ಲೋಡ್ ಟೆಸ್ಟ್ ಮಾಡಲಾಗಿದೆ. ಬಾರಿ ವಾಹನಗಳ ಸಂಚಾರದಿಂದ ಯಾವುದೇ ತೊಂದ್ರೆ ಇಲ್ಲ. ಸದ್ಯ ವಾರಕ್ಕೆ ಒಮ್ಮೆ ಅಂದ್ರೆ ಪ್ರತೀ ಶುಕ್ರವಾರ ಬಾರಿ ವಾಹನಗಳ ಸಂಚಾರ ನಿಷೇಧ ಮಾಡಿ. ಪ್ಲೈಓವರ್ ನ ಟೆಸ್ಟಿಂಗ್ ಮಾಡ್ತಿವಿ. ಬೇರೆ ದಿನಗಳಲ್ಲಿ ಬಾರಿ ವಾಹನಗಳು ಕೇವಲ 40ಕಿ.ಮೀ ವೇಗದಲ್ಲಿ ವಾಹನ ಚಾಲಯಿಸಬೇಕು ಅಂತ ರಿಪೋರ್ಟ್ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಅದೇನೆ ಇರಲಿ.. ಕಳೆದ ಎರಡು ವರ್ಷಗಳಿಂದ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದ ಕಾರಣ ಭಾರೀ ಟ್ರಾಫಿಕ್ ಆಗ್ತಿತ್ತು. ಲಾರಿ, ಬಸ್ಸು, ಸೇರಿ ಇನ್ನಿತರ ವಾಹನಗಳು ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಸಿಲುಕಿ ಪರದಾಟ ಮಾಡಬೇಕಾಗಿತ್ತು. ಇದೀಗ ಐಐಎಸ್ಸಿ ನಡೆಸಿದ ಪರೀಕ್ಷೆ ಪಾಸ್ ಆಗಿದ್ದು, ಪೀಣ್ಯ ಮೇಲ್ಸೇತುವೆ ಇದೆ 29 ರಿಂದ ಬಾರಿ ವಾಹನಗಳ ಸಂಚಾರಕ್ಕೆ ಮುಕ್ತಿ ಸಿಗ್ತಿದೆ. ಈ ಮೂಲಕ ಇದೇ ಮಾರ್ಗದಲ್ಲಿ ಸಂಚರಿಸುವ ಬಸ್, ಲಾರಿ, ಟ್ರಕ್ ಚಾಲಕರ ಮೊಗದಲ್ಲಿ ಮಂದಹಾಸ ಮೂಡಿದೆ.