ಆನೇಕಲ್:-ಪುರಸಭೆ ಸದಸ್ಯ ರವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನದ ಹಿನ್ನೆಲೆ ಮೃತ ವ್ಯಕ್ತಿ ಸಂಬಂಧಿಕರು ಇಬ್ಬರು ಮನೆಗಳನ್ನು ಪುಡಿ ಪುಡಿ ಮಾಡಿದ್ದಾರೆ.
ರಮೇಶ್ ಹಾಗೂ ಹರೀಶ್ ಮನೆಗಳು ಸಂಪೂರ್ಣ ಪುಡಿಪುಡಿ ಮಾಡಲಾಗಿದೆ. ಮನೆಯ ಕಿಟಕಿ ಗಾಜು ಹಾಗೂ ವಸ್ತುಗಳೆಲ್ಲ ಪುಡಿಪುಡಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೂ ನಿನ್ನೆ ರಾತ್ರಿ ನಡುರಸ್ತೆಯಲ್ಲೇ ರವಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ.