ಬೆಂಗಳೂರು:– ನಡುರಸ್ತೆಯಲ್ಲೇ ಆನೇಕಲ್ ಪಟ್ಟಣದ ಪುರಸಭೆ ಸದಸ್ಯನ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿಕೆ ಬಾಬ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನಿನ್ನೆ ಸಾಯಾಂಕಾಲ 8.30 ಸುಮಾರಿಗೆ ವ್ಯಕ್ತಿ ಒಬ್ಬ ಬಂದಿದ್ದಾನೆ. ಹೊರ ಬಂದ ನಂತರ ಮೂವರು ಅಟ್ಯಾಕ್ ಮಾಡಿದ್ದಾರೆ. ಕೂಡಲೆ ರವಿಯನ್ನು ಆಸ್ಪತ್ರೆಗೆ ತರಲಾಗಿತ್ತು. ಆರೋಪಿಗಳು ಯಾರು ಎಂದು ಗೊತ್ತಾಗಿದೆ. ಎರಡು ತಂಡಗಳನ್ನು ರಚನೆ ಮಾಡಿದ್ದೇವೆ. ಸ್ವಲ್ಪ ದಿನದ ಹಿಂದೆ ಕಾರಿನ ಗ್ಲಾಸ್ ಹಾಗೂ ಮನೆಗೆ ಕಲ್ಲು ಹೊಡೆದಿದ್ರು. ಆ ಗ್ಯಾಂಗ್ ರವಿ ಜೊತೆಗೆ ಇದ್ರು. ಹೀಗಾಗಿ ರವಿಯನ್ನು ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಇನ್ನು ಮುಂದೆ ಇಂತಹ ಸಮಾಜಘಾತುಕರ ವಿರುದ್ದ ಕ್ರಮ ವಹಿಸುತ್ತೇವೆ ಎಂದರು.
ಇನ್ನೂ ಆನೇಕಲ್ ಪಟ್ಟಣದ ಬಹದ್ದೂರ್ ಪುರ ಬಳಿ ನಡುರಸ್ತೆಯಲ್ಲೇ ಪುರಸಭಾ ಸದಸ್ಯನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜರುಗಿದೆ.
ಆನೇಕಲ್ ಪುರಸಭಾ ಸದಸ್ಯ ರವಿ ಕೊಲೆಯಾದ ಯುವಕ. ಹೊಂಚು ಹಾಕಿ ರವಿ ಅಡ್ಡಗಟ್ಟಿ ಮಾರಕಸ್ತ್ರದಿಂದ ಹಲ್ಲೆ ಮಾಡಲಾಗಿದೆ. ಕೊಲೆ ಬಳಿಕ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಕಳೆದ 15 ದಿನದಿಂದ ಲಾಂಗ್ ಹಿಡಿದು ಯುವಕರು ಓಡಾಡುತ್ತಿದ್ದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿ ಎಚ್ಚರಿಸಿತ್ತು..ಅದೇ ಯುವಕರಿಂದ ಇಂದು ಪುರಸಭಾ ಸದಸ್ಯರ ಕೊಲೆ ನಡೆದಿದೆ.
ಸ್ಥಳಕ್ಕೆ ಆನೇಕಲ್ ಪೊಲೀಸರು ಬೇಟಿ ನೀಡಿ ಪರಿಶೀಲನೆ ಮಾಡಿದ್ದು, ತನಿಖೆ ಮುಂದುವರಿದಿದೆ.