ಬೆಂಗಳೂರು:- ಸಿಎಂ ಕಪ್ ನಡೆಯುವ ವೇಳೆ ಫುಟ್ಬಾಲ್ ಸ್ಟ್ಯಾಂಡ್ ಕುಸಿದು ಬಿದ್ದ ಘಟನೆ ಅಶೋಕ್ ನಗರದಲ್ಲಿರುವ ಮೈದಾನದಲ್ಲಿ ಜರುಗಿದೆ.
“ಕೈ” ಗ್ಯಾರಂಟಿ ಎಫೆಕ್ಟ್: ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಕೊಟ್ಟ ಸರ್ಕಾರ!
ಮೊನ್ನೆ ಸಿಎಂ ಫುಟ್ಬಾಲ್ ಕಂಪ್ ಪಂದ್ಯವನ್ನು ಜನತೆ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಪುಟ್ಬಾಲ್ ಅಭಿಮಾನಿಗಳು ನಿಂತಿದ್ದ ಆಡಿಯನ್ಸ್ ಸ್ಟ್ಯಾಂಡ್ ಕುಸಿತ ಆಗಿದೆ. ಹಲವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಶೋಕ್ ನಗರದಲ್ಲಿರುವ ಫುಟ್ಬಾಲ್ ಮೈದಾನ ಇದಾಗಿದ್ದು, ರಾಜ್ಯ ಸರ್ಕಾರ ಅಧೀನದಲ್ಲಿದೆ. ಮೊನ್ನೆ ಪಂದ್ಯಾವಳಿ ನಡೆಯುವ ವೇಳೆ ಕುಸಿತ ಆಗಿದ್ದು, ಭಾರೀ ಅನಾಹುತ ತಪ್ಪಿದೆ.
ಕೂದಲೆಳೆಯ ಅಂತರದಲ್ಲಿ ದುರಂತ ತಪ್ಪಿದ್ದು, ಆವತ್ತಿನ ಕಾರ್ಯಕ್ರಮಕ್ಕೆ ಸಿಎಂ ಬರ್ಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿಎಂ ಬರೋದು ಕ್ಯಾನ್ಸಲ್ ಆಗಿತ್ತು. ಬಟ್ ಸಿಎಂ ಬಂದಿದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರ್ತಿದ್ರು. ಇದರಿಂದ ಮತ್ತಷ್ಟು ಜನರು ಗಂಭೀರ ಗಾಯಗೊಳ್ತಿದ್ದ ಆತಂಕ ಇತ್ತು. ಮೊನ್ನೆ ಘಟನೆಯಲ್ಲಿ 10 ಜನರಿಗೆ ಗಾಯವಾಗಿದೆ.
ಇನ್ನಾದ್ರೂ ಎಚ್ಚೆತ್ತುಕೊಳ್ತಾರಾ? ಇಲ್ಲದಿದ್ರೆ ಅಪಾಯ ಫಿಕ್ಸ್!?
ಬಿರುಕು ಬಿಟ್ಟಿರುವ ಗೋಡೆಗಳು, ಕಬ್ಬಿಣದ ರಾಡ್ ಗಳು ಹೊರಗೆ ಬಂದಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಖದಿದ್ರೆ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.