ರಾಮನಗರ:– ಛೇ ಎಂಥಾ ಕಾಲ ಬಂತು ಗುರು. ಅದು ಆಡುವ ಕಂದಾ ಪ್ರಪಂಚಕ್ಕೆ ಬಂದು 4 ವರ್ಷಗಳಾಗಿದೆ ಅಷ್ಟೇ. ಆಗಲೇ ಆ ಪುಟ್ಟ ಮಗುವಿನ ಮೇಲೆ ಕಾಮುಕನ ಕಣ್ಣು ಬಿದ್ದಿದೆ.
ಮುದ್ರಾ ಯೋಜನೆ ಸಾಲಮಿತಿ 10 ಲಕ್ಷದಿಂದ 20 ಲಕ್ಷ ರೂಪಾಯಿಗಳಿಗೆ ಏರಿಕೆ: ಬೆಲ್ಲದ ಸ್ವಾಗತ
ಹೌದು, ನಗರದ ಮಾಗಡಿ ಪಟ್ಟಣದಲ್ಲಿ ಹೇಯ ಕೃತ್ಯ ನಡೆದಿದೆ.
ಈ ಪೈಶಾಚಿಕ ಕೃತ್ಯ ಗೌರಿಪಾಳ್ಯದ ನಿವಾಸಿ ಇಮ್ರಾನ್ ಖಾನ್ ಎಂಬಾತನಿಂದ ನಡೆದಿದೆ. ಕಳೆದ ಸೋಮವಾರ ಮಾಗಡಿ ಪಟ್ಟಣದ ಸಂಬಂಧಿಕರ ಮನೆಗೆ ಬಂದಿದ್ದ ಇಮ್ರಾನ್ ಖಾನ್, ಬಾಲಕಿ ಮೇಲೆ ಕಣ್ಣಾಕಿದ್ದ. ಐಸ್ ಕ್ರೀಂ ಕೊಡಿಸುವುದಾಗಿ ಬಾಲಕಿಯನ್ನು ಪುಸಲಾಯಿಸಿದ್ದ. ಬಳಿಕ ಅತ್ಯಾಚಾರ ಎಸಗಿ ವಿಷ ಯಾರಿಗೂ ತಿಳಿಯಬಾರೆಂದು ಕೊಂದು ಹಾಕಿ, ಕಾಲ್ಕಿತ್ತಿದ್ದ. ತಿಪ್ಪಗೊಂಡನಹಳ್ಳಿ ತಪ್ಪಲಿನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಸಿಸಿಟಿವಿ ಪರಿಶೀಲಿಸಿದಾಗ ಬಾಲಕಿಯನ್ನು ಕರೆದುಕೊಂಡು ಹೋಗಿರುವುದು ಪತ್ತೆಯಾಗಿತ್ತು. ಕಲಾಸಿಪಾಳ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಇಮ್ರಾನ್ ಖಾನ್ನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.