ಭಾರತ ಟಿ20 ತಂಡದ ನಾಯಕತ್ವವನ್ನು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ನೀಡದೆ ಇರಲು ಕಾರಣವೇನೆಂದು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಬಹಿರಂಗಪಡಿಸಿದ್ದಾರೆ.
2026 ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಆಯ್ಕೆ ಸಮಿತಿಯು ಭಾರತ ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. ಅಂದ ಹಾಗೆ ರೋಹಿತ್ ಶರ್ಮಾ ಬಳಿಕ ಭಾರತ ಟಿ20 ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಬಿಸಿಸಿಐ ವಿಶ್ವದ ನಂ.1 ಟಿ20 ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ಗೆ ನಾಯಕತ್ವವನ್ನು ನೀಡಿ ಅಚ್ಚರಿ ಮೂಡಿಸಿತ್ತು.
ವಿರಾಟ್ ಕೊಹ್ಲಿ ತುಳಿಯಲು ಯತ್ನಿಸಿದ್ದವರು ಯಾರು?: ಇಂಥಾ ವ್ಯಕ್ತಿಯನ್ನು ಬಗ್ಗಿಸಿದ್ರಾ ರನ್ ಮೆಷಿನ್
ಹಾರ್ದಿಕ್ ಪಾಂಡ್ಯ ಅವರ ಬದಲು ಸೂರ್ಯಕುಮಾರ್ ಯಾದವ್ಗೆ ಭಾರತ ಟಿ20 ತಂಡದ ನಾಯಕತ್ವ ನೀಡಲು ಪ್ರಮುಖ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಭಾರತಕ್ಕೆ ಅತ್ಯಂತ ನಿರ್ಣಾಯಕ ಆಟಗಾರ. ಹಾಗಾಗಿ ಅವರ ಫಿಟ್ನೆಸ್ ಉಳಿಸಿಕೊಳ್ಳುವುದು ಇಲ್ಲಿ ತುಂಬಾ ಮುಖ್ಯ. ಈ ಕಾರಣದಿಂದ ಅವರಿಗೆ ನಾಯಕತ್ವ ನೀಡಲಾಗಿಲ್ಲ ಎಂದು ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ಈಗಲೂ ಭಾರತ ತಂಡಕ್ಕೆ ಅತ್ಯಂತ ನಿರ್ಣಾಯಕ ಆಟಗಾರ. ಫಿಟ್ನೆಸ್ ಉಳಿಸಿಕೊಳ್ಳುವುದು ನಿಜಕ್ಕೂ ತುಂಬಾ ಸವಾಲಾಗಿದೆ. ಇದು ಕೋಚ್ಗಳು ಹಾಗೂ ಆಯ್ಕೆದಾರರಿಗೆ ಕಠಿಣವಾಗಲಿದೆ. ಫಿಟ್ನೆಸ್ ಎಂಬುದು ಸವಾಲಾಗಿದ್ದು, ತಂಡಕ್ಕೆ ದೀರ್ಘಾವಧಿ ಲಭ್ಯರಾಗುವವರಿಗೆ ಮಾತ್ರ ನಾವು ನಾಯಕತ್ವಕ್ಕೆ ನೀಡಲು ಬಯಸಿದ್ದೇವೆ. ನಾಯಕತ್ವಕ್ಕೆ ಸೂರ್ಯಕುಮಾರ್ ಯಾದವ್ ಅವರು ಗುಣಮಟ್ಟವನ್ನು ಹೊಂದಿದ್ದಾರೆಂದು ನಾವು ನಂಬಿದ್ದೇವೆ. ಹಾರ್ದಿಕ್ ಪಾಂಡ್ಯ ಅವರನ್ನು ನಾವು ಉತ್ತಮವಾಗಿ ನಿರ್ವಹಿಸಲಿದ್ದೇವೆ. ಏಕೆಂದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು ಬ್ಯಾಟ್ ಹಾಗೂ ಬಾಲ್ ಮೂಲಕ ಏನು ಮಾಡಿದ್ದಾರೆಂದು ನಮಗೆ ಗೊತ್ತಿದೆ. ಪ್ರತಿಯೊಬ್ಬ ಆಟಗಾರನ ಪಾತ್ರ ಬದಲಾಗಿದೆ ಹಾಗೂ ಈ ಬಗ್ಗೆ ನಾವು ಆಟಗಾರರ ಬಳಿ ಮಾತನಾಡಿದ್ದೇವೆ,” ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.