ಚನ್ನಪಟ್ಟಣ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರಿ ನೌಕರರು ಬಹುದೊಡ್ಡ ಪಿಲ್ಲರ್ಗಳು. ಅದಕ್ಕಾಗಿಯೇ ವಿಧಾನಸೌಧದಲ್ಲಿ ಸರಕಾರಿ ಕೆಲಸ ದೇವರ ಕೆಲಸವೆಂದು ಬರೆಯಲಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಿದಾಗ ಜನ ನಿಮ್ಮಲ್ಲೇ ದೇವರನ್ನು ಕಾಣುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಬಹಳ ಮುಖ್ಯವಾದ ಅಂಗವಾಗಿದ್ದು, ಈ ಹಿಂದೆ 6ನೇ ವೇತನ ಆಯೋಗ ಜಾರಿ ಮಾಡಿದ್ದ ನಾವುಗಳೇ ಇದೀಗ 7ನೇ ವೇತನ ಆಯೋಗವನ್ನು ಸಹ ಜಾರಿ ಮಾಡುವ ಮೂಲಕ ಆಗಲೂ ಜತೆಗಿದ್ದು, ಮುಂದೆಯೂ ಜೊತೆಗೆ ಇರುತ್ತೇವೆ ಎಂದು ಆಶ್ವಾಸನೆ ನೀಡಿದರು.
Infosys is Hiring: ಫ್ರೆಶರ್ʼಗಳಿಗೆ ಇನ್ಫೋಸಿಸ್ʼನಲ್ಲಿ ʼʼWork From Homeʼʼ ಅವಕಾಶ..! ತಿಂಗಳಿಗೆ ವೇತನ 55,000/-
ಚುನಾವಣೆಗೂ ಮುನ್ನ ರಾಜ್ಯದ ಜನರಿಗೆ 5 ಗ್ಯಾರಂಟಿ ನೀಡಿ ಅದನ್ನು ಜಾರಿಗೊಳಿಸಿದ್ದ ನಾವುಗಳು ಇದೀಗ ನಿಮಗೆ 7ನೇ ವೇತನ ಆಯೋಗ ಜಾರಿಗೊಳಿಸುವ ಮೂಲಕ 6ನೇ ಗ್ಯಾರಂಟಿಯನ್ನು ನೀಡಿದ್ದು, ಈ ಮೂಲಕ 12 ಲಕ್ಷ ಕುಟುಂಬಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದು, ನಿಮ್ಮ ಮತ್ತೊಂದು ಬೇಡಿಕೆಯಾದ ಎಪಿಎಸ್, ಓಪಿಎಸ್ ವಿಚಾರವಾಗಿಯು ಚರ್ಚೆ ಮಾಡುವುದಾಗಿ ಭರವಸೆ ಇತ್ತರು.
ನಾನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಇಬ್ಬರೂ ಸರಕಾರಿ ನೌಕರರೇ, ಹಿಂದೆ ನಾನು ಜಿಪಂ ಮೆಂಬರ್, ಅವರು ಕಾರ್ಪೊರೇಟರ್, ಬಳಿಕ 8 ಬಾರಿ ಸತತ ಶಾಸಕರಾಗಿದ್ದೀವಿ. ನಿಮ್ಮ ಮೇಲೆ ಹೇಗೆ ಕೇಸ್ ಹಾಕ್ತಾರೊ ಹಾಗೆ ನಮ್ಮ ಮೇಲೂ ಕೇಸ್ ಹಾಕುತ್ತಾರೆ. ಬಿಜೆಪಿ ಸರಕಾರದವರು ನನ್ನ ಮೇಲೆ ಕೇಸ್ ಹಾಕಿದ್ದಾರೆ. ಕೊಡಬಾರದ ನೋವು ಕೊಟ್ಟಿದ್ದಾರೆ. ಎಲ್ಲವನ್ನು ದೇವರು ನೋಡಿಕೊಳ್ಳುತ್ತಾನೆ ಎಂದು ಹೇಳಿದರು.