ಶಿವಮೊಗ್ಗ: ಶಿವಮೊಗ್ಗದ ಸಾಗರದ ಶುಂಠಿಕೊಪ್ಪದ ಬಳಿ ವರದಾನದಿಯಿಂದಾಗಿ ಕೃಷಿ ಭೂಮಿ ಜಲಾವೃತಗೊಂಡಿದೆ. ಸೊರಬದ ಲಕ್ಕವಳ್ಳಿಯಲ್ಲಿ ವರದಾ-ದಂಡಾವತಿ ಸಂಗಮಕ್ಷೇತ್ರ ಜೈನಮಠ ಹೊಳೆಲಿಂಗೇಶ್ವರ ದೇವಾಲಯ ಸೇರಿದಂತೆ ಗದ್ದೆ, ತೋಟಗಳ ಮುಳುಗಿವೆ. ಶಿಕಾರಿಪುರದ ಧನರಾಜ್ ಹೇಮರಾಮ್ ಸರ್ಕಾರಿ ಶಾಲೆಯಲ್ಲಿ ನೀರು ತುಂಬಿಕೊಂಡಿದೆ.
ಖಾಲಿ ಹೊಟ್ಟೆಗೆ ನಿಂಬೆ ಹಾಕಿ ಕುದಿಸಿದ ನೀರು ಕುಡಿಯುವುದರಿಂದ ಸಿಗುವ ಪ್ರಯೋಜಗಳೇನು ಗೊತ್ತಾ..?
ದಾವಣಗೆರೆಯ ಹರಿಹರ ಪಕ್ಕದಲ್ಲಿ ತುಂಗಾಭದ್ರಾ ನದಿ ಮೈದುಂಬಿ ಹರೀತಿದೆ. ಕೊಪ್ಪಳದ ತುಂಗಭದ್ರಾ ಡ್ಯಾಮ್ಗೆ 1.27 ಲಕ್ಷ ಕ್ಯುಸೆಕ್ ಒಳಹರಿವಿದ್ದು, 105 ಟಿಎಂಸಿ ಪೈಕಿ 80 ಟಿಎಂಸಿಗೂ ಹೆಚ್ಚು ನೀರಿನ ಸಂಗ್ರವಾಗಿದೆ. 2 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ವಿಜಯನಗರ ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯಕ್ಕೆ ಶಾಸಕ ನೇಮಿರಾಜ್ ನಾಯ್ಕ್ ಮುಂದಾಳತ್ವದಲ್ಲಿ ರಾಜವಾಳ್ ಜಾಕ್ ವೆಲ್ ಮೂಲಕ ನೀರು ಬಿಡುಗಡೆ ಮಾಡಲಾಯಿತು.