ಬೆಂಗಳೂರು: ಆಷಾಡದಲ್ಲೂ ಹೂ ಬೆಳೆಗಾರರಿಗೆ ಡಬಲ್ ಶಾಕ್ ಎದುರಾಗಿದೆ. ಮಾರುಕಟ್ಟೆಯಲ್ಲಿರುವ ಬೆಲೆ ರೈತನ ಕೈಸೇರುತ್ತಿಲ್ಲ. ಒಂದು ಕಡೆ ಈ ಬಾರಿ ಬೇಸಿಗೆಯಲ್ಲಿ ಆದ ನೀರಿನ ಅಭಾವ, ಇನ್ನೊಂದೆಡೆ ಮಳೆಯ ಅವಾಂತರದಿಂದಾಗಿ ಹೂವಿನ ಫಸಲಿನಲ್ಲಿ ಗಣನೀಯ ಇಳಿಕೆ ಕಂಡು ಬರುತ್ತಿದೆ. ಹೂ ಬೆಳೆಗಾರರಿಗೆ ನಷ್ಟವಾಗುವ ಪರಿಸ್ಥಿತಿ ಇದ್ದರೂ ಮಾರುಕಟ್ಟೆಯಲ್ಲಿ ಮಾತ್ರ ಹೂಗಳ ದರ ಏರಿಕೆಯಲ್ಲಿದೆ. ಸದ್ಯ ಗ್ರಾಹಕನಿಗೆ ಕೈಸೇರುವ ಹೂಗಳ ದರ ಹಾಗೂ ರೈತನಿಗೆ ಸಿಗುವ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.. ಇದರ ಬಗ್ಗೆ ಮತ್ತಷ್ಟು ಡೀಟೇಲ್ಸ್ ಇಲ್ಲಿದೆ ನೋಡಿ..
Guru Purnima: ಇಂದು ʼʼಗುರು ಪೂರ್ಣಿಮೆʼʼ: ಈ ದಿನದ ಮಹತ್ವ, ಇತಿಹಾಸ ಇಲ್ಲಿದೆ ನೋಡಿ..!
ಹೌದು, ಆಷಾಢದಲ್ಲಿ ಸಾಮಾನ್ಯವಾಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಹೂಗಳು ಸಿಗುತ್ತಿತ್ತು . ಈ ಸಂಧರ್ಭದಲ್ಲಿ ಶುಭಸಮಾರಂಭಗಳು ಕಡಿಮೆ ಹಿನ್ನೆಲೆ ಹೂಗಳು ಬೇಡಿಕೆ ಕಳೆದುಕೊಳ್ಳುತ್ತಿತ್ತು. ಇದರಿಂದ ಹೂಗಳ ಬೆಲೆ ಗಣನೀಯ ಇಳಿಕೆ ಕಾಣುತ್ತಿತ್ತು. ಆದರೆ ಈ ಬಾರಿ ಚಿತ್ರಣ ಬದಲಾಗಿದ್ದು, ಮಾರುಕಟ್ಟೆಯಲ್ಲಿ ಆಷಾಢದಲ್ಲೂ ಹೂಗಳ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಹೂ ದುಬಾರಿ ಹೂ ಬೆಳೆಗಾರರಿಗೆ ನಷ್ಟವಾಗುವ ಪರಿಸ್ಥಿತಿ ಇದ್ದರೂ ಮಾರುಕಟ್ಟೆಯಲ್ಲಿ ಮಾತ್ರ ಹೂಗಳು ದರ ಕಾಯ್ದುಕೊಳ್ಳುತ್ತಿದೆ. ರೈತರಿಗೆ ಬೆಲೆ ಸಿಗದಿದ್ದರೂ ಮಧ್ಯವರ್ತಿಗಳಿಗೆ, ಲಾಭವಾಗುವಂತಹ ದರ ಮಾರುಕಟ್ಟೆಯಲ್ಲಿ ನಿಗದಿಯಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ
- ಗುಲಾಬಿ- 80-100
- ಸೇವಂತಿಗೆ- 300,
- ಸುಗಂಧ ರಾಜ 40-50,
- ಕಾಕಡ 400-500
- ಮಲ್ಲಿಗೆ 300,
- ಕನಕಾಂಬರ 600-800 ರೂ.
ಇದೆ ಇದಲ್ಲದೆ ಬಹುತೇಕ ಎಲ್ಲಾ ಹೂಗಳ ದರ ಹೆಚ್ಚಳದಲ್ಲಿಯೇ ಮಾರಾಟವಾಗುತ್ತಿದೆ. ಇನ್ನು ಜಿಲ್ಲೆಯಾದ್ಯಂತ ಆಷಾಢದ ಹಿನ್ನೆಲೆ ಶುಭ ಸಮಾರಂಭಗಳ ಆಯೋಜನೆಯಿಲ್ಲ. ಇದರಿಂದ ಕೆಲ ರೈತರು ಮುಂದೆ ಬರುವ ವರಮಹಾಲಕ್ಷ್ಮಿ ಹಬ್ಬ, ಗಣೇಶ ಹಬ್ಬಗಳಿಗೆ ಫಸಲು ಬರುವಂತೆ ಹೂ ಬೆಳೆಯುತ್ತಿದ್ದಾರೆ. ಇದರಿಂದ ಸದ್ಯ ಹೂಗಳ ಕೊರತೆ ಉಂಟಾಗಬಹುದು. ಇದರಿಂದ ಬೇಡಿಕೆ ಕೂಡ ಹೆಚ್ಚಲಿದ್ದು ಮುಂದಿನ ದಿನಗಳಲ್ಲಿ ಹೂವಿನ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ..
ಮಾರುಕಟ್ಟೆಯಲ್ಲಿ ಹೂಗಳಿಗೆ ಉತ್ತಮ ದರವಿದೆ. ಆದರೆ ನಮಗೆ ಮಾತ್ರ ಕಡಿಮೆ ದರ ಕೈಸೇರುತ್ತಿದೆ. ಹಾಕಿದ ಬಂಡಾವಳ ಕೈಸೇರಲೂ ಕಷ್ಟವಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ ಒಟ್ಟಾರೆಯಾಗಿ, ಈಗಾಗಲೇ ಪೆಟ್ರೋಲ್ ಡೀಸೆಲ್, ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಕ್ಕೆ,ಆಷಾಢದಲ್ಲಿ ಹೂ ಗಳ ಬೆಲೆ ಕಡಿಮೆ ಇರುತ್ತೆ ಎಂದು ಕೊಂಡಿದ್ರು, ಇದೀಗ ಹೂ ಬೆಲೆ ಏರಿಕೆಯಿಂದ ಜನರ ನಿರೀಕ್ಷೆ ಹುಸಿಯಾಗಿದ್ದು, ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ.