ಮಳೆಹಾನಿಗೊಳಗಾದ ಪ್ರದೇಶಗಳಿಗೆ ಶಿಕಾರಿಪುರ ಶಾಸಕರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ತಾಳಗುಂದ,ಉಡುಗಣಿ, ಕಸಬಾ, ಅಂಜನಪುರ ಹೋಬಳಿ ವ್ಯಾಪ್ತಿಯಲ್ಲಿ ತುಂಬಿರುವ ಕೆರೆ,ಕಟ್ಟೆಗಳು, ಮಳೆಯಿಂದ ಜಲಾವೃತಗೊಂಡಿರುವ ಬೆಳೆಗಳನ್ನು ವೀಕ್ಷಿಸಿದರು. ನಂತರ ಮಂಚಿಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಕ್ಕಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಹಾನಿಗೊಳಗಾದ ಮನೆಗಳಿಗೆ ಪರಿಹಾರ ವಿತರಿಸಿದರು. ಇದೇ ಗ್ರಾಮದ ಮೃತ ಗಂಗಮ್ಮ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಮಳೆಯಿಂದ ಮನೆ ಹಾನಿಗೊಳಗಾಗಿರುವ ಬಿಳಿಕಿ ಗ್ರಾಮದ ಮುಬಾರಕ್, ಹನುಮಮ್ಮ,ರೆಹಾನ ಕಲೀಂವುಲ್ಲಾ ಅವರ ಮನೆಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿ ಎಲ್ಲರಿಗೂ ವೈಯುಕ್ತಿಕ ಧನ ಸಹಾಯ ಮಾಡಿದರು. ನಂತರ ಇನಾಂ ಅಗ್ರಹಾರ ಮುಚಡಿ ಗ್ರಾಮಕ್ಕೆ ಭೇಟಿ ನೀಡಿ ಶುಕ್ರವಾರ ನಡೆದ ದುರಂತದಲ್ಲಿ 5 ಜಾನುವಾರುಗಳನ್ನು ಕಳೆದುಕೊಂಡು ನೊಂದಿರುವ ರೈತ ಹನುಮ ಗೌಡ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಸರ್ಕಾರದಿಂದ ರೂ 1.75 ಸಾವಿರ ಪರಿಹಾರ ವಿತರಿಸಲಾಯಿತು ಜೊತೆಗೆ ಶಾಸಕರು ವೈಯುಕ್ತಿಕ ಧನ ಸಹಾಯ ಮಾಡಿದರು.
ಬಿಳಿಕಿಯಲ್ಲಿ ಶಾಲಾ ಮಕ್ಕಳು ಹಾಗೂ ಇನಾಂ ಅಗ್ರಹಾರ ಮುಚಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಶಿರಾಳಕೊಪ್ಪ,ತಾಳಗುಂದ,ಬಿಳಿಕಿ,ಇನಾಂ ಅಗ್ರಹಾರ ಮುಚಡಿ,ಚಿಕ್ಕೇರೂರು ಮಾರ್ಗಕ್ಕೆ ಖಾಯಂ ಬಸ್ ಅನ್ನು ಒದಗಿಸಲು ಕೋರಿದರು. ತತಕ್ಷಣ ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಶೆಟ್ಟಿಹಳ್ಳಿ ಗ್ರಾಮದಲ್ಲಿ ಕೆರೆಯಲ್ಲಿ ಮುಳುಗಿ ಆಕಸ್ಮಿಕವಾಗಿ ಸಾವನ್ನಪ್ಪಿದ ನಾಗರಾಜ್ ಅವರಿಗೆ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕಟ್ಟಿಗೆ ಹಳ್ಳ ಮರಾಠ ಕ್ಯಾಂಪ್ ಭೇಟಿ ನೀಡಿ ಕೊಟ್ಟಿಗೆ ಬಿದ್ದು ಹಾಕುವ ತೀರಿಕೊಂಡ ರೈತ ಜಯಪ್ಪ ರವರ ಮನೆಗೆ ತೆರಳಿ ಸರ್ಕಾರದಿಂದ ಪರಿಹಾರ ವಿತರಿಸಲಾಯಿತು.