ಬೆಂಗಳೂರು:- ಪರಿಶಿಷ್ಟರ ಕನಸಿಗೆ ಸರ್ಕಾರ ಕಲ್ಲು ಹಾಕಿದೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
Athani:ಅಪಘಾತದ ಮದ್ಯ ಡೆಡ್ಲಿ ಮರ್ಡರ್; ಗಡಿಯಲ್ಲಿ ಮತ್ತೊಂದು ರಕ್ತ ಚರಿತ್ರೆ!
ಈ ಬಗ್ಗೆ X ಮಾಡಿರುವ ಅವರು, ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್ಡಿ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದ ಎಸ್.ಸಿ-ಎಸ್.ಟಿ ಸಮುದಾಯಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ‘ಪ್ರಬುದ್ಧ’ ಯೋಜನೆ ಅಡಿ ನೀಡುತ್ತಿದ್ದ ಸಹಾಯಧನವನ್ನೇ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದೆ. ಇವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಕೊಳ್ಳೆ ಹೊಡೆದು, ಪರಿಶಿಷ್ಟ ಜಾತಿ, ಸಮುದಾಯಗಳ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಹಣವನ್ನೆಲ್ಲಾ ಅನ್ಯ ಕಾರ್ಯಕ್ಕೆ ಬಳಸಿಕೊಂಡು, ಇದೀಗ ಈ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳು ಹೊರ ದೇಶದಲ್ಲಿ ಪಿ.ಹೆಚ್.ಡಿ ಮಾಡುವ ಅವಕಾಶಕ್ಕೂ ತಿಲಾಂಜಲಿ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಸಮುದಾಯಗಳ ವಿರೋಧಿ ಎಂಬುದು ಬಹಿರಂಗವಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ಆದೇಶಿಸಿರುವ ಇಲಾಖೆ, ‘ಪಿ.ಎಚ್.ಡಿಯ ಒಬ್ಬ ಅಭ್ಯರ್ಥಿಗೆ ನೀಡುವ ಸಹಾಯಧನದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವ ಕನಿಷ್ಠ ಇಬ್ಬರು ಅಥವಾ ಮೂವರು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬಹುದು’ ಎಂದು ಉಲ್ಲೇಖಿಸಿದೆ.