ಬೆಳಗಾವಿ:- ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿದ್ದು, ಪಂಡರಾಪುರದ ವಿಠ್ಠಲನ ದರ್ಶನಕ್ಕೆ ಹೋಗಿದ್ದ ವೇಳೆ ಕೃತ್ಯ ನಡೆದಿದೆ.
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಡರಾಪುರಕ್ಕೆ ತಾಲೂಕಿನ ತುರುಮುರಿ ಗ್ರಾಮದ 35ಕ್ಕೂ ಹೆಚ್ಚು ಜನರು ಪಂಡರಾಪುರ ಪ್ರವಾಸ ಕೈಗೊಂಡಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಬರುವಾಗ ಹಲ್ಲೆ ಮಾಡಿದ್ದಾರೆ.
ವಿದ್ಯುತ್ ತಂತಿ ಸ್ಪರ್ಶಿಸಿ ಆನೆಗಳ ಸಾವು: ಎಸ್ಕಾಂಗಳಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್!
ಭಕ್ತ ಸುರೇಶ್ಕುಮಾರ್ ವಾರಕರಿ, ಪರಶುರಾಮ್ ಜಾಧವ್, ಲಾರಿ ಚಾಲಕ ಪರಶುರಾಮ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದವರ ಮೇಲೆ ಮಿರಜ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಂಡರಾಪುರದಿಂದ ವಾಪಸ್ ಆಗುವಾಗ 35ಕ್ಕೂ ಹೆಚ್ಚು ಭಕ್ತರು ಲಾರಿ ಹತ್ತಿದ್ದಾರೆ. ಮಿರಜ್ ಮಾರ್ಗವಾಗಿ ಬೆಳಗಾವಿಗೆ ಬರುತ್ತಿದ್ದಾಗ ಟ್ರಕ್ ದಾರಿ ತಪ್ಪಿ ಮಹಾರಾಷ್ಟ್ರದ ಮಾಳಗಾಂವ್ ಗ್ರಾಮಕ್ಕೆ ತಲುಪಿದೆ. ದಾರಿ ಸಿಗದೆ ಕಿರಿದಾದ ದಾರಿಯಲ್ಲಿ ಲಾರಿ ಸಾಗುವಾಗ ಸ್ಥಳೀಯ ಕಾರು ಚಾಲಕರಿಂದ ತಗಾದೆ ತೆಗೆದಿದ್ದು, ಲಾರಿಯಲ್ಲಿ ಪ್ರಯಾಣಿಸುತ್ತಿದ್ದರ ಮೇಲೆ ಹಲ್ಲೆ ಮಾಡಿದ್ದಾರೆ.
ಸದ್ಯ ಮಹಾರಾಷ್ಟ್ರ ಮಿರಜ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.