ದೊಡ್ಡಬಳ್ಳಾಪುರ: ರಾಜ್ಯದಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರ ಆರೋಪ ದೂರು ದಾಖಲಾಗಿರುವ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅದೇ ರಿತಿ ಪಶು ಆಸ್ವತ್ರೆಯ ಹಿರಿಯ ವೈದ್ಯನ ಮನೆ ಮೇಲೆ ಲೋಕಾ ದಾಳಿ ಮಾಡಿದ್ದಾರೆ.
ಹಿರಿಯ ಪಶು ವೈದ್ಯ ಆರ್ ಸಿದ್ದಪ್ಪ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರದಲ್ಲಿ ಪಶು ವೈದ್ಯನಾಗಿದ್ದಾರೆ. ನೆಲಮಂಗಲದ ಸುಭಾಷ್ ನಗರದ ಮನೆ ಮೇಲೆ ಮೂರು ಕಾರುಗಳಲ್ಲಿ ಬಂದು ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಿದ್ದಪ್ಪ ಮಾಜಿ ಸಿಎಂ ಯಡಿಯೂರಪ್ಪ ಅವರ ಸಂಬಂಧಿಯಾಗಿದ್ದಾರೆ. ಎರಡು ಕಡೆ ಮನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತದಲ್ಲಿ 12 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರು 3 ಪ್ರಕರಣ, ಮೈಸೂರು 2, ಶಿವಮೊಗ್ಗ 2, ಯಾದಗಿರಿ 1 ಸೇರಿ ಒಟ್ಟು 12 ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಇಂದು ದಾಳಿಗಳು ನಡೆದಿವೆ.