ಹಾವೇರಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ವಂಶಾಡಳಿತದ ಪರವಾಗಿ ಟಿಕೆಟ್ ನೀಡಿದರೆ ಶ್ರೀರಾಮಸೇನೆ ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗುತ್ತದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಬೆನ್ನು ನೋವು ಪ್ರಾಣ ಹಿಂಡುತ್ತಿದೆಯೇ..? ಇಲ್ಲಿದೆ ನೋಡಿ ಮುಕ್ತಿ ಹೊಂದಲು ಪರಿಹಾರ
ನಾನು, ನನ್ನ ಮಗ, ನನ್ನ ಮೊಮ್ಮಗ ನನ್ನ ಹೆಂಡತಿ ಎಂದು ಅಲ್ಲಿಗೆ ಯಾರಾದರೂ ವಂಶದ ಸಂಬಂಧ ಟಿಕೆಟ್ ಕೊಟ್ಟರೆ ಅಲ್ಲಿ ಶ್ರೀರಾಮಸೇನೆ ಹಿಂದೂ ಅಭ್ಯರ್ಥಿ ಕಣಕ್ಕಿಳಿಸಲಿದೆ ಎಂದು ಸ್ಪಷ್ಟಪಡಿಸಿದರು. ಕಾರ್ಯಕರ್ತರ ಬೆವರು ರಕ್ತದಿಂದ ಕಟ್ಟಿದ ಬಿಜೆಪಿಯನ್ನು ನಿಮ್ಮ ದತ್ತಕ ತಗೆದುಕೊಳ್ಳಲು ಹೋಗಬೇಡಿ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು. ಬಿಜೆಪಿ ಕಟ್ಟುವಲ್ಲಿ ನಮ್ಮದೂ ಪಾತ್ರವಿದೆ. ನಾವು ರಕ್ತ ಸುರಿಸಿದ್ದೇವೆ. ಕೇಸ್ ಹಾಕಿಸಿಕೊಂಡಿದ್ದೇವೆ. ಕಾರಾಗೃಹಕ್ಕೆ ಹೋಗಿದ್ದೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.