ಬೆಂಗಳೂರು:- ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಅವರು ಈಗ ಪೊಲೀಸರಿಗೆ ವರದಿ ನೀಡಿದ್ದಾರೆ. ರೇಣುಕಾ ಸ್ವಾಮಿ ದೇಹಕ್ಕೆ ಹಲವಾರು ಗಂಭೀರ ಹೊಡೆತಗಳು ಬಿದ್ದಿದ್ದವು. ಈ ಏಟುಗಳಿಂದ ರೇಣುಕಾ ಸ್ವಾಮಿ ನಲುಗಿ ಹೋಗಿದ್ದರು. ನೋವ ತಾಳಲಾರದೆ ಹಂತ ಹಂತವಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ನಿರಂತರವಾಗಿ ಹಲ್ಲೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Lokayukta Raid: ಕರ್ನಾಟಕದ 55 ಕಡೆ ಲೋಕಾಯುಕ್ತ ರೇಡ್: ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ತಲಾಶ್!
ಪವಿತ್ರಾ ಗೌಡ ಸ್ನೇಹಿತೆಯ ಪತಿಯಿಂದಲೇ ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷೆ ನಡೆದಿದೆ ಎಂದು ವರದಿ ಆಗಿತ್ತು. ಅವರು ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ನಡೆಸಿ ಸಹಿ ಮಾಡಿದ ವರದಿಯಲ್ಲಿ ಅವರ ಹೆಸರಿಲ್ಲ.