ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಅಪ್ಪು ಅಭಿಮಾನಿಯೊಬ್ಬ ದೇವರೊಂದಿಗೆ ಅಪ್ಪು ಫೋಟೊ ಮುಂದೆ ಎಡೆಯಿಟ್ಟು ಪೂಜೆ ಸಲ್ಲಿಸಿದ್ದಾರೆ. ಅಪ್ಪು ಅಭಿಮಾನಿ ಯಾಗಿರುವ ವ್ಯಕ್ತಿ. ಬೆಳಗ್ಗೆಯೇ ವಿಶೇಷ ತಿಂಡಿ ತಯಾರಿಸಿ ಮನೆದೇವರಿಗೆ ಪೂಜೆ ಸಲ್ಲಿಸಿ ಅಪ್ಪು ಫೋಟೊಕ್ಕೂ ಪೂಜೆ ಮಾಡಿ ಎಡೆ ಇಟ್ಟು ಪೂಜಿಸಿದ್ದಾರೆ.
ಏಕಾದಶಿಯಂದು ಅಗಲಿದ ಪ್ರೀತಿಪಾತ್ರರಿಗೆ ಸದ್ಗತಿ ಸಿಗಲೆಂದು ಏಕಾದಶಿಯಂದು ಪೂಜಿಸುವ ಪದ್ಧತಿಯಿದೆ. ಹೀಗಾಗಿ ದಿವಂಗತ ನಟ ಪುನೀತ್ ರಾಜ್ಕುಮಾರ ಫೋಟೊಗೆ ಪೂಜೆ ಸಲ್ಲಿಸಲಾಗಿದೆ.
Budget 2024: ಕೇಂದ್ರ ಬಜೆಟ್ ಕುರಿತು ತಿಳಿಯಲೇಬೇಕಾದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ..!
ಕನ್ನಡನಾಡಿನ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ ಇಂದಿಗೆ ನಿಧನರಾಗಿ ಮೂರು ವರ್ಷಗಳೇ ಕಳೆದರೂ ನಾಡಿನ ಜನರು ಇಂದಿಗೂ ಅಪ್ಪುವಿನ ಸಾವು ಅರಗಿಸಿಕೊಳ್ಳಲಾಗುತ್ತಿಲ್ಲ. ಪ್ರತಿಮನೆಯಲ್ಲೂ ಅಪ್ಪುವಿನ ಅಭಿಮಾನಿಗಳಿದ್ದಾರೆ, ಅಪ್ಪು ಭೌತಿಕವಾಗಿ ನಿಧನರಾಗಿದ್ದಾಗಿ ಕೋಟ್ಯಂತರ ಅಭಿಮಾನಿಗಳ ಮನಸಿಲ್ಲಿ ಜೀವಂತವಾಗಿದ್ದಾರೆ.