ಸಹೋದ್ಯೋಗಿಗಳ ಕಿರುಕುಳದಿಂದ ಮನನೊಂದು ಬ್ಯಾಂಕ್ ಉದ್ಯೋಗಿ ಡೆತ್ ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಂಡ ಘಟನೆ ನೋಯ್ಡಾದ ಆಕ್ಸಿಸ್ ಬ್ಯಾಂಕ್ನಲ್ಲಿ ಜರುಗಿದೆ.
ಯುವತಿ ಸಹೋದರ ನಾಲ್ಕೈದು ಸಹೋದ್ಯೋಗಿಗಳ ವಿರುದ್ಧ ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ಐದಾರು ತಿಂಗಳಿನಿಂದ ತನ್ನ ಸಹೋದರಿ ಶಿವಾನಿ ತ್ಯಾಗಿಗೆ ಕೆಲಸದ ಸ್ಥಳದಲ್ಲಿ ತನ್ನ ಸಹೋದ್ಯೋಗಿಗಳು ಕಿರುಕುಳ ನೀಡಿದ್ದಾರೆ ಎಂದು ಹರಿನಗರ ನಿವಾಸಿ ಗೌರವ್ ತ್ಯಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಹಾಸನ: ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಕುಸಿದ ಗುಡ್ಡ; ವಾಹನ ಸಂಚಾರ ಬಂದ್!
ಆಕೆಯ ಕೆಲಸದಲ್ಲಿ ಸುಖಾಸುಮ್ಮನೆ ತಪ್ಪು ಕಂಡುಹಿಡಿಯುವುದು, ಬಾಡಿ ಶೇಮಿಂಗ್, ಕಿರುಕುಳ ನೀಡುತ್ತಿದ್ದರು, ಗೇಲಿ ಮಾಡುತ್ತಿದ್ದರು ಇದರಿಂದ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕರಣದಲ್ಲಿ ಮೂವರು ಸಹೋದ್ಯೋಗಿಗಳಾದ ಜ್ಯೋತಿ ಚೌಹಾನ್, ಅಕ್ರಂ ಮತ್ತು ನಜ್ಮುಸ್ ಶಾಕಿಬ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ನಗರ ಡಿಸಿಪಿ ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾ