ಕಾರವಾರ: ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು ನಗರದಲ್ಲಿರುವ ಕೆಎಸ್ಆರ್ಟಿಸಿ ಬಸ್ ಡಿಪೋ ಜಲಾವೃತವಾಗಿದೆ. 50ಕ್ಕೂ ಹೆಚ್ಚು ಬಸ್ಸುಗಳು ನೀರಿನಲ್ಲಿ ಜಲಾವೃತವಾಗಿದ್ದು ವಿವಿಧ ಭಾಗಗಳಿಗೆ ತೆರಳುವ ಬಸ್ಸುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.
ಹಬ್ಬುವಾಡ ರಸ್ತೆಯಲ್ಲಿ ಡಿಪೋ ಇದ್ದು ಬಸ್ಸುಗಳನ್ನು ಹೊರ ತೆಗೆಯಲು ಚಾಲಕರು ಹರಸಾಹಸ ಪಡುತ್ತಿದ್ದಾರೆ. ಮೂರು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಚರಂಡಿ ನೀರು ಡಿಪೋಗೆ ನುಗ್ಗಿದ ಪರಿಣಾಮ ಸಮಸ್ಯೆಯಾಗಿದೆ.
Bitter Gourd: ಎಚ್ಚರ..! ಹಾಗಲಕಾಯಿ ತಿಂದ ನಂತರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತಿನ್ನಬೇಡಿ!
ಹೊನ್ನಾವರ ಭಾಸ್ಕೇರಿ ವರ್ನಕೇರಿ ಬಳಿ ಮತ್ತೆ ಗುಡ್ಡ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿ 69 ಸಂಚಾರ ತಾತ್ಕಾಲಿಕ ಬಂದ್ ಆಗಿತ್ತು. ಹೊನ್ನಾವರ -ಬೆಂಗಳೂರು ರಸ್ತೆಯಲ್ಲಿ ನೂರಾರು ವಾಹನಗಳು ಬೆಳಗ್ಗೆ ನಿಂತಿದ್ದವು. ಗುಡ್ಡ ತೆರವು ಮಾಡಿದ ಬಳಿಕ ಈಗ ವಾಹನಗಳು ಸಂಚರಿಸುತ್ತಿವೆ.