ಉಡುಪಿ: ಕರಾವಳಿ ಮತ್ತು ಮಲೆನಾಡು ತಪ್ಪಲಿನಲ್ಲಿ ಬಿದ್ದ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದೆ. ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಚೋರಾಡಿ ಕಿರು ಸೇತುವೆಗೆ ಸಂಪರ್ಕಿಸುವ ರಸ್ತೆಯ ಮಣ್ಣು ಕೊಚ್ಚಿಹೋಗಿದೆ. ಎರಡು ವರ್ಷಗಳ ಹಿಂದೆ ಈ ಸೇತುವೆ ನಿರ್ಮಾಣವಾಗಿತ್ತು.
Bitter Gourd: ಎಚ್ಚರ..! ಹಾಗಲಕಾಯಿ ತಿಂದ ನಂತರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತಿನ್ನಬೇಡಿ!
ಸೇತುವೆಗೆ ಹೊಂದಿಕೊಂಡಿರುವ ಭೂಮಿಗೆ ಕಾಂಕ್ರೀಟ್ ವಾಲ್ ಹಾಕಿದ್ದು, ಅದೂ ಕೂಡಾ ಕುಸಿತವಾಗಿದೆ. ಘಟನೆಯಿಂದ ಹಾಲಾಡಿಯಿಂದ ಮುದೂರು ವ್ಯಾಪ್ತಿಗೆ ಹೋಗುವ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಕುಂದಾಪುರ ಎಸಿ ರಶ್ಮಿ ಭೇಟಿ ಕೊಟ್ಟಿದ್ದಾರೆ.