ಜೀವಕ್ಕೆ ಸೂಕ್ತ ಭದ್ರತೆ ಇಲ್ಲ.ವಿಶ್ರಾಂತಿಗೆ ಸುಸಜ್ಜಿತ ಕೋಣೆ ಇಲ್ಲ. ದಿನದ 24 ಗಂಟೆ ಕೆಲಸ ಮಾಡಿದರೂ ಸೂಕ್ತ ವ್ಯವಸ್ಥೆಯೂ ಇಲ್ಲ. ಹೀಗೆ ಇಲ್ಲಗಳ ಮಧ್ಯೆ ಯೇ 108 ವಾಹನ (ಆರೋಗ್ಯ ಕವಚ) ಸಿಬ್ಬಂದಿಗಳ ಬದುಕು ಅತಂತ್ರವಾಗಿದೆ.
ಕರ್ನಾಟಕ ಮತ್ತು ಭಾರತ ಸರಕಾರದ ಸಹಭಾಗಿತ್ವದಲ್ಲಿ ರಾಷ್ಟ್ರೀಯ ತುರ್ತು ವಾಹನ ಸೇವೆಯಡಿ ಬೀದರ್ ಜಿಲ್ಲೆಯ ಆರೋಗ್ಯ ಕವಚ ಆ್ಯಂಬುಲೆನ್ಸ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತುರ್ತು ವೈದ್ಯಕೀಯ ಚಿಕಿತ್ಸಕರಿಗೆ (ಇಎಂಟಿ) ಮತ್ತು ಚಾಲಕರು (ಪಾಯಲೆಟ್) ಕಳೆದ ಸುಮಾರು ವರ್ಷದಿಂದ ಸೇವೆ ಸಲ್ಲಿಸಲಿದ್ದಾರೆ. ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸಕರು 50 ಮತ್ತು ವಾಹನ ಚಾಲಕರು 51 ಸೇರಿ ಒಟ್ಟು 101 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ..
108ವಾಹನ ಸಿಬ್ಬಂದಿಗಳ ಸ್ಥಿತಿ ಕೇಳೋರಿಲ್ಲ.
ತುರ್ತು ವೇಳೆ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸವನ್ನು 108 ಆ್ಯಂಬ್ಯುಲೆನ್ಸ್ ನೌಕರರು ಮಾಡುತ್ತಾರೆ.
ಸಾರ್ವಜನಿಕರಿಗೆ ಜೀವ ಉಳಿಸುವ ಕೆಲಸ ಮಾಡುತ್ತಾರೆ ಆದರೆ 108 ವಾಹನ ಸಿಬ್ಬಂದಿಗೆ ಸುಸಜ್ಜಿತ ವಿಶ್ರಾಂತಿ ಕೋಣೆ ಇಲ್ಲ ಬೀದರ ಬ್ರೀಮ್ಸ ಆಸ್ಪತ್ರೆ ಒಂದು ಮೂಲೆ ಯಲ್ಲಿ ಹಳೆ ಕಟ್ಟಡದಲ್ಲಿ ವಿಶ್ರಾಂತಿ. ಮಳೆ ಬಂದರೆ ಸಾಕು ಟಿಪ…. ಟಿಪ್…. ಅಂತ ನೀರಿನ ಹನಿ ಮೇಲಿಂದ ಕಡಿಯತ್ತವೇ ಮೇಲ್ಛಾವಣಿ ಮೇಲಿಂದಾ ಬಿಳುತಲೆ ಇದ್ದೆ ಕೋಣೆ ತುಂಬಾ ತಂಪಾಗಿದ್ದೆ ಈ ಕಟ್ಟಡ ಯಾವಾಗ ಬೀಳುತ್ತದೆ ಎಂಬ ಭಯದಲ್ಲಿ ನಿದ್ರೆ ಕೂಡ ಮಾಡಲಾಗುತಿಲ್ಲ.
ದಿನದ 24ಗಂಟೆ ಸೇವೆ ಮಾಡಿದ ಸಿಬ್ಬಂದಿ ದಣಿದು ಬಂದು ಸ್ವಲ್ಪ ನೇಲಸಿಕ್ಕರೆ ಸಾಕು ಅಂತ ವಿಶ್ರಾಂತಿ ಮಾಡಲು ಕೋಣೆಯಲ್ಲಿ ಭಯದಲ್ಲೇ ಸಿಬ್ಬಂದಿ ವಿಶ್ರಾಂತಿ. ನಿದ್ರೆ ಬಾರದಂತಾಗಿದ್ದೆ.. ಶಿಥಿಲಗೊಂಡ ಕೋಣೆ ಕುಸಿದು ಜೀವಕ್ಕೆ ಆಪತ್ತು ಎದುರಾಗುವ ಸಾಧ್ಯತೆ ಇದೆ. ಈ ಸಾಕಷ್ಟು ಸಲ ಸಂಬಂಧಿಸಿದ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಕ್ರಮ ಕೈ ಗೊಂಡಿಲ್ಲ.ಅನುತ್ತಾರೆ ನವೀನ್ಕುಮಾರ ದಯಾಸಾಗರ, ತುರ್ತು ವೈದ್ಯ ಚಿಕಿತ್ಸಕರು .