ಶಿವಮೊಗ್ಗ: ಈ ಕಾಲದಲ್ಲಿಯು ವಾಮಾಚಾರ ನಡೆಯುತ್ತಾ ಅಂತಾ ಕೇಳುವ ಮೊದಲೇ ಹೇಳುತ್ತೇವೆ. ಇದು ನಂಬಿಕೆಗೆ ಬಿಟ್ಟ ವಿಚಾರ. ಸದ್ಯ ಇದೇ ವಿಚಾರವಾಗಿ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ. ಕಾಶೀಪುರದಲ್ಲಿ ಘಟನೆ ಶಿವಮೊಗ್ಗ ಕಾಶೀಪುರದ ಹನುಮಂತಪ್ಪ ಬಡಾವಣೆಯ 2ನೇ ಅಡ್ಡರಸ್ತೆ ನಿವಾಸಿ ಶಿವಲಿಂಗೇಗೌಡ ಅವರ ಮನೆ ಎದುರು ಬೈಕ್ನಲ್ಲಿ ಬಂದ ಇಬ್ಬರು ಮಂತ್ರಿಸಿದ ನಿಂಬೆ ಹಣ್ಣು ಬೆಲ್ಲ ಇರುವ ಪೊಟ್ಟಣ ಬಿಸಾಡಿದ್ದಾರೆ ಎಂದು ಹೇಳಲಾಗಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿಯು ಸಹ ಸೆರೆಯಾಗಿದ್ದು ವಿಡಿಯೋ ವೈರಲ್ ಆಗುತ್ತಿದೆ.
ಕುತೂಹಲ ಕಾರಿ ಸಂಗತಿ ಅಂದರೆ ಬೈಕ್ನಲ್ಲಿದ್ದ ಮುಸುಕು ದಾರಿಗಳು ಎಸೆದ ನಿಂಬೆಹಣ್ಣು ಹಾಗೂ ಬೆಲ್ಲದ ಪೊಟ್ಟಣ ಅಲ್ಲಿದ್ದ ಮನೆಯವರೆಗೂ ಉರುಳಿಕೊಂಡು ಬಂದಿದೆ. ರಸ್ತೆಯಲ್ಲಿ ಬಿದ್ದಿದ್ದ ಪೊಟ್ಟಣ ಇದ್ದಕ್ಕಿದ್ದಾಗೆ ಉರುಳಿ ಬಂದಿರುವುದು ಸಹ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಇದನ್ನ ಗಮನಿಸಿದ ಮನೆಯವರು ಗಾಬರಿಗೊಂಡಿದ್ದಾರೆ.
Pomegranate Juice: ದಿನಕ್ಕೊಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಈ ಕಾಯಿಲೆಗಳು ಹತ್ತಿರವೂ ಸುಳಿಯಲ್ಲ!
ವಾಮಾಚಾರ ಇದೊಂದು ಉದ್ದೇಶ ಪೂರ್ವಕ ಕೃತ್ಯ ಎನ್ನುವುದಕ್ಕೆ ಸಾಕ್ಷಿಯಾಗಿ ಬೈಕ್ನಲ್ಲಿ ಬಂದವರು ಮುಸುಕು ಧರಿಸಿದ್ದರು. ಇನ್ನೊಂದೆಡೆ ಮೊದಲು ಎಸೆದು ಹೋಗುವ ಅವರಿಬ್ಬರು ಪುನಃ ಅದೇ ದಾರಿಯಲ್ಲಿ ಬಂದು ನೋಡಿಕೊಂಡು ಹೋಗುತ್ತಾರೆ. ಅಲ್ಲದೆ ಮಂತ್ರಿಸಿದ ವಸ್ತು ನಿಗದಿತ ಸ್ಥಳಕ್ಕೆ ಹೋಗಿಲ್ಲ ಎಂದು ಪರಿಶೀಲಿಸುತ್ತಾರೆ. ಹೀಗೆ ಎರಡು ಸಲ ಅಲ್ಲಿಯೇ ಓಡಾಡಿದ್ದಾರೆ. ಸದ್ಯ ಘಟನೆಯಲ್ಲಿ ಬೈಕ್ ನಂಬರ್ ಪತ್ತೆಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.