ಹಿಂದಿನ ಕಾಲದಂತೆ ಸಾವಯವ ಪದ್ಧತಿಯ ಮೂಲಕ ಬೆಳೆಯುವ ಹಣ್ಣು, ತರಕಾರಿ, ಧವಸ, ಧಾನ್ಯಗಳಿಗೆ ಬೇಡಿಕೆ ಬರುತ್ತಿವೆ. ಕೆಲ ದೇಶಗಳಲ್ಲಿ ಸಾವಯವ ಪದ್ಧತಿ ಮೂಲಕ ಬೆಳೆಯವ ಹಣ್ಣು, ತರಕಾರಿ, ಧವಸ ಧಾನ್ಯಗಳಿಗೆ ಭಾರಿ ಬೇಡಿಕೆಯಿದೆ. ಇದೀಗ ವಿಜಯಪುರದ ರೈತರೊಬ್ಬರು ಸಾವಯವ ಪದ್ಧತಿ ಮೂಲಕ ಬಾಳೆ ಹಣ್ಣುಗಳನ್ನು ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾನೆ.
ಕರಿಮೆಣಸಿನ ಬಳ್ಳಿ ಸಾಯುತ್ತಿದೆಯೇ : ಇದು ಯಾವ ಕೀಟ, ಇದಕ್ಕೆ ಪರಿಹಾರ ಇಲ್ಲಿದೆ!
ರಾಸಾಯನಿಕ ಗೊಬ್ಬರ ಔಷಧಗಳನ್ನು ಉಪಯೋಗ ಮಾಡಿ ಬೆಳೆದ ಬಾಳೆಗಿಂತ ಈರಣ್ಣ ಹಲ್ಳಿಯವರ ಜಮೀನಿನಲ್ಲಿರೋ ಬಾಳೆ ಭರಪೂರವಾಗಿ ಬೆಳೆದು ನಿಂತಿದೆ. 12 ಎಕರೆ ಬಾಳೆ ಬೆಳೆಯೋಕೆ ಇವರು 5 ರಿಂದ 6 ಲಕ್ಷ ಖರ್ಚು ರೂಪಾಯಿ ಖರ್ಚು ಮಾಡಿದ್ದಾರೆ. ಗೋಕುಪಾಮೃತ, ಗೋಮೂತ್ರ, ಜೀವಾಮೃತ, ಬಯೋ ಡೈಜಿಸ್ಟ್, ಎರೆಹುಳು ಜಲ ಮಾತ್ರ ಬಳಕೆ ಮಾಡಿ ಬೆಳೆದಿದ್ದಾರೆ. ವಿವಿಧ ವ್ಯಾಪಾರಸ್ಥರು 22 ರಿಂದ 25 ರೂಪಾಯಿಗೆ ಕೆಜಿ ಹಣ್ಣು ಖರೀದಿಗೆ ಮುಗಿ ಬಿದ್ದಿದ್ದಾರೆ. ಖರ್ಚು ವೆಚ್ಚಗಳನ್ನು ತೆಗೆದು ಇವರು ನಿವ್ವಳ 60 ರಿಂದ 70 ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದಾರೆ.
ವಿಜಯಪುರದ ಕೊಲ್ಹಾರ ತಾಲೂಕಿನ ಕುಪಕಡ್ಡಿ ಗ್ರಾಮದ ಈರಣ್ಣ ಹಳ್ಳಿ ಸಾವಯವ ಪದ್ದತಿ ಮೂಲಕ ಬಾಳೆ ಬೆಳೆದು ಸೈ ಎನಿಸಿಕೊಂಡ ರೈತ. 2008 ರಿಂದಲೂ ಬಾಳೆ ಕೃಷಿಯನ್ನು ಮಾಡಿ ಅಧಿಕ ಲಾಭ ಮಾಡಿಕೊಂಡಿರುವ ಈರಣ್ಣ ಈ ಬಾರಿ 12 ಎಕರೆ ಸಾವಯವ ಪದ್ಧತಿ ಮೂಲಕ ಬಾಳೆ ಬೆಳೆಯನ್ನು ಬೆಳೆದಿದ್ದಾರೆ.
2008 ರಲ್ಲಿ ಇವರು ಇತರೆ ರೈತರಂತೆ ಬಾಳೆ ಬೆಳೆದು 9 ಲಕ್ಷ ರೂಪಾಯಿ ಗಳಿಕೆ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಕನಿಷ್ಟವೆಂದರೂ 25 ಎಕರೆ ಬಾಳೆ ಬೆಳೆಯುತ್ತಿದ್ದಾರೆ. ಈ ಬಾರಿ 12 ಎಕರೆ ಅಪ್ಪಟವಾಗಿ ಸಾವಯವ ಪದ್ಧತಿಯಲ್ಲಿ ಬಾಳೆ ಹಣ್ಣನ್ನು ಬೆಳೆದಿದ್ದಾರೆ. ಸುಮಾರು 400 ಟನ್ ಫಸಲು ಬರುತ್ತದೆ ಎಂಬ ಲೆಕ್ಕವಿದೆ