ದೆಹಲಿ :– ತಮಿಳುನಾಡನ್ನು ನಿರ್ಲಕ್ಷಿಸಲಾಗಿದೆ ಎಂಬ ಎಂಕೆ ಸ್ಟಾಲಿನ್ ಆರೋಪ ‘ಸತ್ಯಕ್ಕೆ ದೂರ’ವಾದುದು ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.
ಮುಖ್ಯಮಂತ್ರಿಯವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ನಿಜ ಸಂಗತಿ ಏನೆಂದರೆ ಕಳೆದ 10 ವರ್ಷಗಳಲ್ಲಿ ಪ್ರಸ್ತುತ ಎನ್ಡಿಎ ಸರ್ಕಾರವು ರೈಲ್ವೆ, ಹೆದ್ದಾರಿಗಳು, ವಿಮಾನ ನಿಲ್ದಾಣಗಳು ಮತ್ತು ತಮಿಳುನಾಡಿನ ಸಾಮಾಜಿಕ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿನ ಯೋಜನೆಗಳಿಗೆ ಧನಸಹಾಯವನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ಮೂಲ ತಿಳಿಸಿದೆ.
ಗೆಳತಿಗೆ ಇನ್ಸ್ಟಾದಲ್ಲಿ ಮೆಸೇಜ್ ಮಾಡಿದ್ದ ಹುಡುಗನನ್ನು ಕೊಂದ ಅಪ್ರಾಪ್ತ!
2009 ರಿಂದ 2014 ರ ನಡುವೆ ರೈಲ್ವೆ ಅಭಿವೃದ್ಧಿಗಾಗಿ ತಮಿಳುನಾಡಿಗೆ ಮೀಸಲಿಟ್ಟ ಬಜೆಟ್ ಸರಾಸರಿ ₹ 879 ಕೋಟಿ. ಈಗ ಕೇಂದ್ರವು 2024-25ರಲ್ಲಿ ರಾಜ್ಯಕ್ಕೆ ರೈಲ್ವೆಗಾಗಿ ₹ 6,331 ಕೋಟಿಗಳ ದಾಖಲೆಯ ಬಜೆಟ್ ಅನ್ನು ನಿಗದಿಪಡಿಸಿದೆ.
ತಮಿಳುನಾಡಿನಲ್ಲಿ ಮೊದಲ ವಂದೇ ಭಾರತ್ ರೈಲನ್ನು ನವೆಂಬರ್ 11, 2022 ರಂದು ಚಾಲನೆ ಮಾಡಲಾಗಿದೆ. ಪ್ರಸ್ತುತ, ರಾಜ್ಯದಲ್ಲಿ 8 ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. 2014ರಲ್ಲಿ ರಾಜ್ಯದ ಒಟ್ಟು ರಾಷ್ಟ್ರೀಯ ಹೆದ್ದಾರಿಗಳ ಉದ್ದ 4,985 ಕಿಲೋಮೀಟರ್ಗಳಾಗಿದ್ದು, ಈಗ ಶೇ.40ರಷ್ಟು ಏರಿಕೆಯಾಗಿ 6,806 ಕಿಲೋಮೀಟರ್ಗಳಿಗೆ ತಲುಪಿದೆ ಎಂದು ಕೇಂದ್ರ ಹೇಳಿದೆ.
64,704 ಕೋಟಿ ವೆಚ್ಚದಲ್ಲಿ 2,094 ಕಿಲೋಮೀಟರ್ ಉದ್ದದ ಯೋಜನೆಗಳನ್ನು 2014 ರಿಂದ ತಮಿಳುನಾಡಿಗೆ ನೀಡಲಾಗಿದೆ. ಭಾರತ ಸರ್ಕಾರವು ತಮಿಳುನಾಡಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು ₹ 2 ಲಕ್ಷ ಕೋಟಿ ಹೂಡಿಕೆ ಮಾಡುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ನಾಗರಿಕ ವಿಮಾನಯಾನ ವಲಯದಲ್ಲಿ ತಮಿಳುನಾಡಿನಲ್ಲಿ ₹ 4,000 ಕೋಟಿ ಮೌಲ್ಯದ ಐದು ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಪೈಕಿ ಎರಡು ಪೂರ್ಣಗೊಂಡಿವೆ. ₹ 2,467 ಕೋಟಿ ವೆಚ್ಚದಲ್ಲಿ ಚೆನ್ನೈ ವಿಮಾನ ನಿಲ್ದಾಣದ ಆಧುನೀಕರಣವು ಎರಡು ಹಂತಗಳಲ್ಲಿ ಅನುಷ್ಠಾನದಲ್ಲಿದೆ, ಮೊದಲನೆಯದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 2023 ರಲ್ಲಿ ಉದ್ಘಾಟಿಸಿದರು.
ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ₹ 1,112 ಕೋಟಿ ಮೌಲ್ಯದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡದ ನಿರ್ಮಾಣ ಪೂರ್ಣಗೊಂಡಿದೆ. ಇದನ್ನು 2024 ರ ಜನವರಿಯಲ್ಲಿ ಪ್ರಧಾನ ಮಂತ್ರಿಯವರು ಉದ್ಘಾಟಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.