ಬೆಳಗಾವಿ: ಕೆಳಗಿನವರು ಸಮಸ್ಯೆ ಮಾಡಿದರೆ ಅದು ಮುಖ್ಯಮಂತ್ರಿಗಳಿಗೆ ಸಂಬಂಧ ಇಲ್ಲ. ನಮ್ಮ ಇಲಾಖೆ ನಾವು ನೋಡಿಕೊಳ್ಳಬೇಕಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,
ಸಿಎಂಗೆ ಇದರಿಂದ ಏನೂ ಸಮಸ್ಯೆ ಇಲ್ಲ. ಕೆಳಗಿನವರು ಸಮಸ್ಯೆ ಮಾಡಿದರೆ ಅದು ಮುಖ್ಯಮಂತ್ರಿಗಳಿಗೆ ಸಂಬಂಧ ಇಲ್ಲ. ನಮ್ಮ ಇಲಾಖೆ ನಾವು ನೋಡಿಕೊಳ್ಳಬೇಕಾಗುತ್ತದೆ. ಅದಕ್ಕೆ ನಾವೇ ಜವಾಬ್ದಾರರು. ಹಾಗಾಗಿ, ಸಿಎಂಗೂ ಇದಕ್ಕೂ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡರು.
ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಶುಭ ಸುದ್ದಿ: ಶೀಘ್ರದಲ್ಲಿಯೇ 10 ಸಾವಿರ ಶಿಕ್ಷಕರ ನೇಮಕ – ಮಧು ಬಂಗಾರಪ್ಪ
ಮುಡಾ ಹಗರಣ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಮೈಸೂರು ಚಲೋ ವಿಚಾರಕ್ಕೆ, ಅದರಿಂದ ಏನೂ ಆಗುವುದಿಲ್ಲ. ಅಂಥ ಬಹಳಷ್ಟು ಕೇಸ್ಗಳಾಗಿವೆ. ಮುಡಾ ಹಾಗೂ ವಾಲ್ಮೀಕಿ ನಿಗಮ ಎರಡನ್ನೂ ಹೋಲಿಸಲು ಆಗಲ್ಲ. ಅವು ಬೇರೆ, ಬೇರೆ. ಲ್ಯಾಂಡ್ ಹೋಗಿದ್ದು, ಲ್ಯಾಂಡ್ ಬಂದಿದೆ. ನಾವು ಕೂಡಾ ಬುಡಾದಲ್ಲಿ ಆ ರೀತಿ ಕೊಟ್ಟಿದ್ದೇವೆ. ಆ ರೀತಿ ಬೇರೆ ಕಡೆಯೂ ಆಗಿದೆ. ಆದ್ದರಿಂದ ಮುಡಾವನ್ನು ರಾಜಕೀಯ ಅಂತಾ ಹೇಳಬಹುದು ಎಂದು ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.