ಧಾರವಾಡ:- , ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಮನೆ ಮೇಲೆ ದಾಳಿ ನಡೆದಿದೆ.
ಅಧಿಕಾರಿಯ ನಾಮಿ ಮತ್ತು ಬೇನಾಮಿ ಆಸ್ತಿಗಳ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ,, ಬೆಳಗಾವಿಯ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ಅಧಿಕಾರಿಯಾಗಿರುವ ಶೇಖರಗೌಡ ಎಂಬುವವರು ಧಾರವಾಡದಲ್ಲಿ ಎರಡು ಪಿಜಿಗಳನ್ನ ನಡೆಸುತ್ತಿರುವುದನ್ನ ಪತ್ತೆ ಹಚ್ಚಿರುವ ಲೋಕಾಯುಕ್ತ ಪೊಲೀಸರು, ಇದೀಗ ದಾಳಿ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಧಾರವಾಡ, ಗದಗ, ಕೊಪ್ಪಳದಲ್ಲಿರೋ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಇನ್ನೂ ಧಾರವಾಡದ ಕೆಸಿಡಿ ರಸ್ತೆಯಲ್ಲಿರುವ ಪಿಜಿ ಮೇಲೂ ದಾಳಿ ನಡೆದಿದೆ. ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಯಾಗಿರುವ ಶೇಖರಗೌಡ ಎನ್ನಲಾಗಿದೆ.
ಧಾರವಾಡದ ಎರಡು ಕಡೆ ಶೇಖರ್ ಗೌಡ ಪಿಜಿಗಳನ್ನು ಹೊಂದಿದ್ದ. ಕೆಸಿಡಿ ರಸ್ತೆಯ ಸಪ್ತಾಪುರ ಹಾಗೂ ರಾಧಾಕೃಷ್ಣ ನಗರದಲ್ಲಿರುವ ಪಿಜಿ ಎನ್ನಲಾಗಿದೆ. ಸುಕ್ಷೇಮ ಹೆಸರಿನಲ್ಲಿರುವ ಪಿಜಿಗಳು ಎಂದು ತಿಳಿದು ಬಂದಿದ್ದು, ಎರಡೂ ಪಿಜಿ ಹಾಗೂ ಒಂದು ಫಾರ್ಮ್ ಹೌಸ್ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆದಿದೆ. ಅಳ್ನಾವರ ರಸ್ತೆಯ ವರವ ನಾಗಲಾವಿ ಬಳಿ ಇರುವ 6ಎಕರೆ ಫಾರ್ಮ್ ಹೌಸ್ ಹೊಂದಿದ್ದಾರೆ ಎನ್ನಲಾಗಿದೆ.