ಬೆಂಗಳೂರು: ಹೆಜ್ಜಾಲ ಕೆಂಗೇರಿ ನಡುವಣ ರೈಲ್ವೆ ಅಂಡರ್ಪಾಸ್ ಕಾಮಗಾರಿ ವಿಳಂಬದಿಂದಾಗಿ, ಬೆಂಗಳೂರು ಮೈಸೂರು ಮಾರ್ಗದ ರೈಲುಗಳು ಬುಧವಾರ ಬೆಳಿಗ್ಗೆ ಹಳಿಗಳಲ್ಲೇ ಸುಮಾರು ಒಂದೂವರೆ ತಾಸು ನಿಂತವು. ಇದರಿಂದಾಗಿ, ಪ್ರಯಾಣಿಕರು ಪರದಾಡಬೇಕಾಯಿತು.
ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುತ್ತಿರೋದ್ಯಾಕೆ?: ಕಾರಣಗಳು ಇಲ್ಲಿದೆ ನೋಡಿ!
ಬೆಳಿಗ್ಗೆ 7.30ರಿಂದ 9 ಗಂಟೆವರೆಗೆ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಯಿತು. ಇದರಿಂದಾಗಿ ರೈಲುಗಳು ಚನ್ನಪಟ್ಟಣ, ರಾಮನಗರ ಹಾಗೂ ಬಿಡದಿ ನಿಲ್ದಾಣದಲ್ಲೇ ಬೀಡು ಬಿಟ್ಟವು. ಇನ್ನೇನು ಕೆಲ ಹೊತ್ತಿನಲ್ಲೇ ರೈಲು ಹೊರಡಲಿದೆ ಎಂದುಕೊಂಡ ಪ್ರಯಾಣಿಕರು ಕಾದು ಹೈರಾಣಾದರು. ಕಡೆಗೆ ವಿಧಿ ಇಲ್ಲದೆ ರೈನಿನಿಂದಿಳಿದು ಬಸ್ ಸೇರಿದಂತೆ ಇತರ ವಾಹನಗಳನ್ನು ಏರಿ ಹೊರಟರು.
‘ಹೆಜ್ಜಾಲ ಕೆಂಗೇರಿ ಮಧ್ಯೆ ರೈಲ್ವೆ ಅಂಡರ್ಪಾಸ್ ಕಾಮಗಾರಿಯನ್ನು ಮಂಗಳವಾ ರಾತ್ರಿ 10 ಗಂಟೆಯಿಂದಲೇ ಆರಂಭಿಸಲಾಗಿತ್ತು. ಸಿಮೆಂಟ್ ಬ್ಲಾಕ್ಗಳ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳು ಬೆಳಿಗ್ಗೆ 7ರ ಹೊತ್ತಿಗೆ ಮುಗಿಯಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಕೆಲಸ ವಿಳಂಬವಾಯಿತು.