ಬೆಂಗಳೂರು: ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾವಣೆ ಮಾಡುವ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚನ್ನಪಟ್ಟಣ ಬೈ ಎಲೆಕ್ಷನ್ ಬೆನ್ನಲ್ಲೇ ಜಿಲ್ಲೆ ಹೆಸರು ರಾಜಕೀಯವಾಗಿ ಚರ್ಚೆಯಾಗುತ್ತಿದ್ದು ಇದೆಲ್ಲರ ನಡುವೆ ಬೆಂಗಳೂರು ನಗರ ಪುನರ್ ರಚನೆ ಸಂಬಂಧ ಬಿಬಿಎಂಪಿ ಸುಧಾರಣ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿದೆ. ಇದೇ ವಿಚಾರ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದ್ದು ಬಿಜೆಪಿ ರಾಮನ ಹೆಸರಲ್ಲಿ ಹೋರಾಟ ಶುರುಮಾಡಿರೋದು ಕಾಂಗ್ರೆಸ್ ಗೆ ಟೆನ್ಷನ್ ತಂದೊಡ್ಡಿದೆ…..
ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೊಸ ನಾಮಕರಣ ಮಾಡಬೇಕು ಅಂತ ಕಳೆದ ಕೆಲ ದಿನಗಳಿಂದ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿತ್ತು. ಇದೀಗ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ನೇತೃತ್ವದಲ್ಲಿ ಸುಮಾರು12 ಜನರ ನಿಯೋಗ ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಹೆಸರು ಬದಲಾವಣೆಗೆ ಮನವಿ ಸಲ್ಲಿಸಿದ್ದಾರೆ. ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವಂತೆ ಪ್ರಸ್ತಾವನೆ ಮಾಡಿದ್ದಾರೆ.
ವಾಲ್ಮೀಕಿ ನಿಗಮದ ಹಗರಣ: ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಇ.ಡಿ ದಾಳಿ!
ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ನಿಯೋಗದಿಂದ ಸಿಎಂಗೆ ಮನವಿ ಸಲ್ಲಿಸಿದ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್ ಹೊಸ ಜಿಲ್ಲೆಯನ್ನು ಘೋಷಿಸುವ ಯೋಚನೆಯೇನೂ ಸರ್ಕಾರಕ್ಕಿಲ್ಲ. ಆದರೆ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಅಂತ ನಾಮಕರಣ ಮಾಡಲು ಪ್ರಸ್ತಾವನೆಯೊಂದನ್ನು ರಾಮನಗರ ಭಾಗದ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದ್ದೇವೆ. ದೊಡ್ಡಬಳ್ಳಾಪುರ, ರಾಮನಗರ, ಚನ್ನಪಟ್ಟಣ ಮಾಗಡಿ ಎಲ್ಲಾ ಬೆಂಗಳೂರು ಜಿಲ್ಲೆಗೆ ಸೇರಿತ್ತು. ನಂತರ ಆಡಳಿತ ದೃಷ್ಟಿಯಿಂದ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮಾಡಲಾಗಿದೆ. ರಾಮನಗರ ಜಿಲ್ಲೆ ಅಂತಾನೂ ಮಾಡಲಾಯ್ತು. ರಾಮನಗರ ಜಿಲ್ಲೆ ಹಾಗೆ ಇರುತ್ತೆ, ಅದರ ಹೆಸರು ಮಾತ್ರ ಬದಲಾಗುತ್ತದೆ. ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ , ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ. ಬಳಿಕ ಹೆಸರು ಬದಲಾವಣೆ ಆಗಲಿದೆಈಗಿರುವ ರಾಮನಗರವೇ ಹೆಡ್ ಕ್ವಾಟರ್ ಆಗಿರಲಿದೆ ರಾಮನಗರ ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲ್ಲೂಕುಗಳು ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಸೇರಲಿವೆ. ಈ ವಿಚಾರವನ್ನ ಕ್ಯಾಬಿನೆಟ್ನಲ್ಲಿಟ್ಟು ಚರ್ಚೆ ಮಾಡ್ತೀವಿ ಎಂದ್ರು ಡಿಸಿಎಂ ಡಿಕೆಶಿ…
ಇನ್ನು ತೀರ್ಮಾನ ಮಾಡಿಲ್ಲ ಸಿಎಂಗೆ ಮನವಿ ಕೊಟ್ಟಿದ್ದೇವೆ ಅಂತ ರಾಮನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ರು. ರಾಮನಗರ ಜಿಲ್ಲೆ ಬದಲು ಬೆಂಗಳೂರು ದಕ್ಷಿಣ ಜಿಲ್ಲೆ ಅಂತಾ ಹೆಸರಿಡಬೇಕು ಅಂತಾ ಮನವಿ ಮಾಡಿದ್ದೇವೆ. ಸಿಎಂ ಮುಂದಿನ ತೀರ್ಮಾನ ಮಾಡ್ತಾರೆ. ಕಾರಣಾಂತರದಿಂದ ಹಿಂದೆ ಬೆಂಗಳೂರು ಜಿಲ್ಲೆಯಲ್ಲೆ ರಾಮನಗರ ಜಿಲ್ಲೆಯಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬೆಂಗಳೂರೇ ಆಗಿತ್ತು. ಗ್ರಾಮಾಂತರಕ್ಕೆ ಬೆಂಗಳೂರು ಗ್ರಾಮಾಂತರ ಅಂತೀವಿ. ಇದಕ್ಕೆ ರಾಮನಗರ ಅಂತ ಇಟ್ಟಿದ್ರು. ಅದಕ್ಕೆ ಬೆಂಗಳೂರು ದಕ್ಷಿಣ ಅಂತ ಇಡೋಕೆ ಮನವಿ ಮಾಡಿದ್ದೀವಿ ಅಂತ ತಿಳಿಸಿದ್ದಾರೆ.
ಇನ್ನೂ ಬೆಂಗಳೂರು ನಗರ ಪುನರ್ ವಿಂಗಡಣೆ ವಿಚಾರವಾಗಿ ಬಿಬಿಎಂಪಿ ಸುಧಾರಣಾ ಸಮಿತಿಯು ನಿನ್ನೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆಶಿ ಭೇಟಿ ಮಾಡಿ ವರದಿ ಸಲ್ಲಿಸಿದೆ. ಸಮಿತಿ ಮುಖ್ಯಸ್ಥ ಬಿ.ಎಸ್ ಪಾಟೀಲ್ ನಿಯೋಗದಿಂದ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಕೈ ಸೇರಿದ ವರದಿಯಲ್ಲೇನಿದೆ ಅಂತ ನೋಡೋದಾದ್ರೆ.
ಬಿಬಿಎಂಪಿ ಸುಧಾರಣಾ ಸಮಿತಿಯ ವರದಿಯಲ್ಲೇನಿದೆ?
– ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ- 2024 ಕರಡು ಸಿದ್ದಪಡಿಸಿದೆ
– ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಸಾಧ್ಯತೆ
– ಈ ಮಸೂದೆ ಪ್ರಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಗೆ ಪ್ರಸ್ತಾಪ
– ಈ GBAಗೆ ಯೋಜನೆ ಮತ್ತು ಹಣಕಾಸು ಅಧಿಕಾರ ನಿರ್ವಹಣೆಯ ಅಧಿಕಾರ ಇರಲಿದೆ
– ಇದು ಸುಮಾರು1400 Sq ಕಿ.ಲೋ ಮೀಟರ್ GBA ವ್ಯಾಪ್ತಿಗೆ ಬರಲಿದೆ
– 1 ರಿಂದ 10 ಕಾರ್ಪೊರೇಷನ್ ಗಳು GBA ವ್ಯಾಪ್ತಿಗೆ ಬರಲಿದೆ
– 1-10 ಕಾರ್ಪೊರೇಷನ್ ಗಳು 950 Sq ಕಿ.ಲೋ ಮೀಟರ್ ವ್ಯಾಪ್ತಿ ಹೊಂದಲಿದೆ
– ಸದ್ಯ ಬಿಬಿಎಂಪಿ ರದ್ದಾಗಲಿಗೆ
– ಈ ಕರಡು ಮಸೂದೆ ಸುಮಾರು 400 ವಾರ್ಡ್ ಗಳ ರಚನೆಗೆ ಪ್ರಸ್ತಾಪಿಸಿದೆ
– ಈ ಕರಡು ಮಸೂದೆಯಂತೆ ಬಿಡಿಎ ಅದರ ಯೋಜನೆ ರೂಪಿಸುವ ಅಧಿಕಾರ ಕಳೆದುಕೊಳ್ಳಲಿದೆ
– ಆದರೆ ಬೃಹತ್ ಮೂಲಸೌಕರ್ಯ ಯೋಜನೆಗಳ ಕಾಮಗಾರಿಯನ್ನ ಕೈಗೊಳ್ಳಲಿದೆ
Free Bus Pass: ಹಿರಿಯ ನಾಗರೀಕರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ಬಗ್ಗೆ ಮಹತ್ವದ ಮಾಹಿತಿ!
ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಬಿಜೆಪಿ ಆಕ್ರೋಶ ಹೊರಹಾಕಿದೆ ಈ ಬಗ್ಗೆ ಮಾತನಾಡಿದ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ. ನಾವು ಸಂಪೂರ್ಣವಾಗಿ ಇದನ್ನ ವಿರೋಧಿಸುತ್ತೇವೆ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ. ಇವರು ರಾಮನ ಹೆಸರು ಸಹಿಸಿಕೊಳ್ಳೋದಿಲ್ಲ, ಅದೇ ಪ್ರಯತ್ನ ಕಾಂಗ್ರೆಸ್ ಮಾಡಿದೆ. ರಾಮನ ಹೆಸರಿಗೆ ದೊಡ್ಡ ಶಕ್ತಿ ಇದೆ. ಇಡೀ ದೇಶದ ಜನ ಏನು ಬೇಕಾದ್ರೂ ಸಾಧಿಸ್ತಾರೆ. ಜಿಲ್ಲೆಯ ಜನ ಹೆಸರು ಬದಲಾಯಿಸಿ ಅಂತ ಏನಾದ್ರೂ ಕೇಳಿದ್ದಾರಾ. ರಾಮನಿಗೆ ಅವಮಾನ ಮಾಡಲು ನಾವು ಬಿಡೋದಿಲ್ಲ, ದುಡ್ಡು ಜಾಸ್ತಿ ಸಿಗುತ್ತೆ ಅಂದ್ರೆ ಅಪ್ಪನ ಹೆಸರು ತನ್ನ ಹೆಸರನ್ನೂ ಬದಲಿಸಿಕೊಳ್ಳುವವರು ಕಾಂಗ್ರೆಸ್ ನವರು. ಜೀಸಸ್ ಬಾಬಾ, ರಹೀಮ್ ಬಾಬಾ ಅಂತ ಹೆಸರು ಬದಲಿಸಿಕೊಳ್ತಾರೆ ವಿನಾಶಕಾಲೆ ವಿಪರೀತ ಬುದ್ಧಿ ಅಂತ ಅಸಮಾಧಾನ ಹೊರ ಹಾಕಿದ್ದಾರೆ ಅಶ್ವಥ್ ನಾರಾಯಣ…
ಒಟ್ನಲ್ಲಿ ರಾಮನಗರವನ್ನ ಬೆಂಗಳೂರಿಗೆ ಶಿಫ್ಟ್ ಮಾಡುವ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸದ್ಯ ಕ್ಯಾಬಿನೆಟ್ ನಲ್ಲಿ ಈ ವಿಚಾರ ಪ್ರಸ್ತಾಪಿಸುವುದಾಗಿ ಸಿಎಂ ಭರವಸೆ ನೀಡಿದ್ದು, ಆರಂಭದಲ್ಲೇ ಪರ ವಿರೋಧದ ಚರ್ಚೆ ಶುರುವಾಗಿದೆ. ಬಿಜೆಪಿ ರಾಮನ ಹೆಸರನ್ನು ಮುಂದಿಟ್ಟುಕೊಂಡು ಹೋರಾಟ ಶುರುಮಾಡಿದೆ, ಧರ್ಮದ ವಿಚಾರ, ಹೆಸರು ಬದಲಾವಣೆ, ಅಭಿವೃದ್ಧಿ ಅನ್ನೋ ತಂತ್ರಗಾರಿಕೆ ಮುಂದೆ ಯಾವ ಸ್ವರೂಪ ಪಡೆಯುತ್ತೆ ಎಂಬುದನ್ನು ಕಾದುನೋಡಬೇಕಿದೆ….