ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಬಳಕೆದಾರರ ಸಂಖ್ಯೆ ಮಿತಿ ಮೀರಿದ್ದು, ಅನರ್ಹರೂ ಸರ್ಕಾರದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.
ಹೆಣ್ಣು ಮಕ್ಕಳಿಗೆ ತನ್ನ ಖಾಸಗಿ ಅಂಗ ತೋರಿಸಿ ಎಸ್ಕೇಪ್ ಆಗುತ್ತಿದ್ದವನ ಎಡೆಮುರಿ ಕಟ್ಟಿದ ಪೊಲೀಸ್!
ಕೆಲವರು ಕಾರ್ಡ್ ಹೊಂದಲು ಅನರ್ಹರಾದರೂ ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಅಂತಹವರನ್ನ ಹುಡುಕಿ ಕಾರ್ಡ್ಗಳನ್ನು ರದ್ದುಗೊಳಿಸಿ ಎಂದು ಸಿಎಂ ಹೇಳಿದ್ದಾರೆ.
ರಾಜ್ಯದಲ್ಲಿ ಶೇ. 80 ರಷ್ಟು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಶೇ.40 ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು ಎಂದು ವಿವರಿಸಿದ್ದಾರೆ. ಇದೀಗ ಸಿಎಂ ಖಡಕ್ ಸೂಚನೆ ಹಿನ್ನೆಲೆ ಈಗಾಗಲೇ ಪರಿಶೀಲನೆ ಮಾಡಿಟ್ಟಿರುವ ಪಟ್ಟಿ ಪುನರ್ ಪರಿಶೀಲನೆ ಮಾಡಿ ನಿಯಮ ಮೀರಿ ಪಡೆದಿರುವ ಕಾರ್ಡ್ಗಳನ್ನ ಡಿಲೀಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಬಡತನ ರೇಖೆಗಿಂತ ಮೇಲಿರುವ ಸ್ಥಿತಿವಂತರ ಕಾರ್ಡ್ಗಳನ್ನ ಪರಿಶೀಲನೆ ನಡೆಸಲಿದ್ದಾರೆ. ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ವೈಟ್ ಬೋರ್ಡ್ ಕಾರು ಹೊಂದಿರುವವರು, ಸ್ವಂತ ಕೃಷಿ ಉಪಕರಣ (ಟ್ರಾಕ್ಟರ್, ಟಿಲ್ಲರ್) ಹೊಂದಿರುವವರು, ಸ್ವಂತ ಜಮೀನು, ಹಲವು ಪ್ಲ್ಯಾಟ್ ಹೊಂದಿದವರ ಮೇಲೆ ಅಧಿಕಾರಿಗಳು ಕಣ್ಣಿಡಲಿದ್ದಾರೆ.
ಆಹಾರ ಇಲಾಖೆ ಪ್ರತಿ ಮೂರು ತಿಂಗಳಿಗೊಮ್ಮೆ ಈ ಕುರಿತು ಪರಿಶೀಲನೆ ಮಾಡಿ ಅನರ್ಹರ ಹೆಸರು ಬಿಪಿಎಲ್ ಕಾರ್ಡ್ ನಿಂದ ಡಿಲಿಟ್ ಮಾಡುತ್ತದೆ. ಈ ರೀತಿ ಅನರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವುದರಿಂದ ಕೇವಲ ಅನ್ನಭಾಗ್ಯ ಯೋಜನೆ ಮಾತ್ರವಲ್ಲ, ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುವವರೂ ಕೂಡ ಸೌಲಭ್ಯ ಕಳೆದುಕೊಳ್ಳಬಹುದು. ಬಿಪಿಎಲ್ ಕಾರ್ಡ್ ಡಿಲಿಟ್ ಆದ್ರೆ ಗೃಹಲಕ್ಷ್ಮಿ ಯೋಜನೆ ಕೂಡ ರದ್ದಾಗಲಿದೆ.
ಸದ್ಯ ರಾಜ್ಯದಲ್ಲಿ 1.27 ಕೋಟಿ ಬಿಪಿಎಲ್ ಕಾರ್ಡ್ ಬಳಕೆದಾರರಿದ್ದಾರೆ. ಇದರಲ್ಲಿ ಆದ್ಯತಾ, ಅಂತ್ಯೋದಯ, ಅನ್ನಪೂರ್ಣ ಕಾರ್ಡ್ ಕೂಡ ಇದೆ. ಒಟ್ಟು 4.26 ಕೋಟಿ ಜನರು ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು 5 KG ಅಕ್ಕಿ, ಐದು ಕೆಜಿ ಬದಲಾಗಿ ಹಣ ಪಡೆಯುತ್ತಿದ್ದಾರೆ. ಹೀಗಾಗಿ BPL ಕಾರ್ಡ್ ಸ್ಥಗಿತವಾದ್ರೆ ಕಂಟಕವಾಗಲಿದೆ.